ಕಾರು ಗೆದ್ದಿರುವುದಾಗಿ ಹೇಳಿ 60 ಸಾವಿರ ರೂ. ವಂಚನೆ
Team Udayavani, Sep 21, 2022, 1:12 PM IST
ಬೆಂಗಳೂರು: ಮಹೀಂದ್ರಾ ಕಾರು ಗೆದ್ದಿರುವುದಾಗಿ ಟೆಕ್ನಿಷಿಯನ್ಗೆ ಪೋಸ್ಟ್ ಲೆಟರ್ಕಳುಹಿಸಿದ ಸೈಬರ್ ಕಳ್ಳರು 59,200 ರೂ. ಲಪಟಾಯಿಸಿದ್ದಾರೆ.
ಮೈಸೂರು ರಸ್ತೆಯ ಸುನೀಲ್ (21) ವಂಚನೆಗೊಳಗಾದ ಯುವಕ. ಸುನೀಲ್ ಕಂಪನಿಯೊಂದರಲ್ಲಿ ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ನೆಪಾrಲ್ ಆನ್ಲೈನ್ ಶಾಂಪಿಂಗ್ ಪ್ರೈ.ಲಿ. ಎಂಬ ಹೆಸರಿನಿಂದ ಮಹೀಂದ್ರಾ ಕಾರು ಗೆದ್ದಿರುವುದಾಗಿ ಸುನೀಲ್ಗೆ ಪೋಸ್ಟ್ ಲೆಟರ್ ಬಂದಿತ್ತು. ಇದನ್ನು ನಂಬಿದ ಸುನೀಲ್ ಅದರಲ್ಲಿದ್ದ ನಂಬರ್ಗೆ ವಾಟ್ಸ್ಆ್ಯಪ್ ಕರೆ ಮಾಡಿ ಈ ಬಗ್ಗೆ ವಿಚಾರಿಸಿದಾಗ, ಪರಿಚಿತ ವ್ಯಕ್ತಿಯೊಬ್ಬ ನೀವು ಮಹೀಂದ್ರಾ ಕಾರು ಗೆದ್ದಿದ್ದೀರಿ ಎಂದು ಹೇಳಿದ್ದ. ಆದರೆ, ಕಾರು ಪಡೆಯಲು ನಿರಾಕರಿಸಿದ ಸುನೀಲ್ ಕಾರಿನ ಮೌಲ್ಯದ ಹಣ ಕೊಡುವಂತೆ ಬೇಡಿಕೆಯಿಟ್ಟಿದ್ದ.
ಇದಕ್ಕೆ ಒಪ್ಪಿದ ಅಪರಿಚಿತ ವ್ಯಕ್ತಿ ವೆರಿಫಿಕೇಶನ್ ಮಾಡುವ ನೆಪದಲ್ಲಿ ಸುನೀಲ್ನ ಆಧಾರ್, ಪ್ಯಾನ್ ಕಾರ್ಡ್ನ ಫೋಟೋ ಪಡೆದು ನಂಬಿಕೆ ಗಿಟ್ಟಿಸಿ ಕೊಂಡಿದ್ದ. ನಂತರ ನಂತರ ಟಿಡಿಎಸ್ ಚಾರ್ಜ್ ಪಾವತಿಸ ಬೇಕೆಂದು ಸುನೀಲ್ನಿಂದ ಹಂತ-ಹಂತವಾಗಿ ತನ್ನ ಬ್ಯಾಂಕ್ ಖಾತೆಗೆ ಅಪರಿಚಿತ ವ್ಯಕ್ತಿ 59,200 ರೂ. ಜಮೆ ಮಾಡಿಸಿಕೊಂಡಿದ್ದ. ನಂತರ ಅಪರಿಚಿತ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ