ಗೌರಿ ಹತ್ಯೆ ಪ್ರಕರಣ: ಬೆಳಗಾವಿ ಧಾಬಾ ಮಾಲೀಕನ ವಿಚಾರಣೆ
Team Udayavani, Aug 9, 2018, 7:00 AM IST
ಬೆಳಗಾವಿ: ಗೌರಿ ಹತ್ಯೆ ಪ್ರಕರಣದೊಂದಿಗೆ ಬೆಳಗಾವಿಯ ನಂಟು ದಿನದಿನಕ್ಕೂ ಬೆಳೆಯುತ್ತಿದೆ. ನಗರದಲ್ಲಿ ಬೀಡು ಬಿಟ್ಟಿರುವ ಎಸ್ಐಟಿ ತಂಡ ಸಂಘಟನೆಯೊಂದರ ಕಾರ್ಯಕರ್ತನನ್ನು ವಶಕ್ಕೆ ಪಡೆದಿದೆ. ಇನ್ನೋರ್ವ ಯುವಕನ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.
ನಗರದ ಮಹಾದ್ವಾರ ರಸ್ತೆಯ ಸಂಭಾಜಿ ಗಲ್ಲಿಯ ಭರತ್ ಎಂಬ ಧಾಬಾ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಬಂಧಿತ ವಿಜಯಪುರದ ಪರುಶರಾಮ ವಾಗೊ¾àರೆಗೆ ಉಳಿದುಕೊಳ್ಳಲು ಆಶ್ರಯ ನೀಡಿದ್ದನೆಂಬ ಆರೋಪದ ಮೇಲೆ ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಮಂಗಳವಾರ ರಾತ್ರಿ ಕಪಿಲೇಶ್ವರ ಕಾಲೋನಿಯ ಇನ್ನೋರ್ವ ಯುವಕನನ್ನು ಎಸ್ಐಟಿ ತಂಡ ವಶಕ್ಕೆ ಪಡೆದುಕೊಂಡಿತ್ತು. ಪ್ರಕರಣದಲ್ಲಿ ಯುವಕನ ಪಾತ್ರವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಯುವಕನನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ.
ಅಮೋಲ್ ಕಾಳೆ ಹಾಗೂ ಪರಶುರಾಮ ವಾಗೊ¾àರೆ ಅವರ ವಿಚಾರಣೆ ಸಂದರ್ಭದಲ್ಲಿ ಧಾಬಾ ಮಾಲೀಕನ ಬಗ್ಗೆ ವಿವರ ತಿಳಿದುಬಂದಿದೆ. ಎಸ್ಐಟಿ ವಿಚಾರಣೆಗೆ ಯುವಕ ಖುದ್ದಾಗಿ ಹಾಜರಾಗಿ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆಂದು ಮೂಲಗಳು ತಿಳಿಸಿವೆ. ನಂತರ ಆತನನ್ನು ಎಸ್ಐಟಿ ತಂಡ ಬೇರೆಡೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.
ಧಾಬಾಕ್ಕೆ ಬಂದು ಊಟ ಮಾಡಿದ್ರು: ಅಮೋಲ್ ಕಾಳೆ ಹಾಗೂ ವಾಗೊ¾àರೆ ಧರ್ಮ ಪ್ರಚಾರಕರಾಗಿ ಬೆಳಗಾವಿಗೆ ಬರುತ್ತಿದ್ದರೆಂದು ಎಸ್ಐಟಿ ಎದುರು ಧಾಬಾ ಮಾಲೀಕ ಮಾಹಿತಿ ನೀಡಿದ್ದಾನೆ. ಧರ್ಮ ಪ್ರಚಾರಕರು ಎಂಬ ಕಾರಣಕ್ಕಾಗಿ ಅವರಿಬ್ಬರಿಗೂ ಆಶ್ರಯ ನೀಡಿದ್ದೆ. ಉಳಿದಂತೆ ಯಾವುದೇ ಸಂಬಂಧ ಅವರೊಂದಿಗೆ ಹೊಂದಿರಲಿಲ್ಲವೆಂದು ತಿಳಿಸಿದ್ದಾನೆ ಎನ್ನಲಾಗಿದೆ. ಈಗಾಗಲೇ 2-3 ಬಾರಿ ಖಾನಾಪುರದಲ್ಲಿ ಆರೋಪಿಗಳ ಮೂಲ ಪತ್ತೆ ಹಚ್ಚಿದ್ದ ಎಸ್ಐಟಿ ತಂಡ ಬುಧವಾರ ಮತ್ತೆ ಖಾನಾಪುರಕ್ಕೆ ದೌಡಾಯಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರು ಎಸ್ಐಟಿಗೆ ಬೇಕಾಗಿದ್ದು, ನಾಪತ್ತೆಯಾಗಿರುವವರ ಶೋಧ ಕಾರ್ಯ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು
Temperature; ರಾಜ್ಯದಲ್ಲಿ ಮತ್ತೆ ದಿಢೀರ್ ಏರಿದ ತಾಪಮಾನ
ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
UV Fusion: ಇಂಡಿ ಪಂಪ್ ಮಟ..
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ