ಚಿನ್ನಾಭರಣ ಖರೀದಿಯೂ ಉಳಿತಾಯವಿದ್ದಂತೆ: ಯಶ್
Team Udayavani, Mar 25, 2017, 11:31 AM IST
ಬೆಂಗಳೂರು: ಚಿನ್ನಾಭರಣ ಮಾರಾಟ ಕ್ಷೇತ್ರದ ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ನ ನೂತನ ಮಳಿಗೆಗೆ ಶುಕ್ರವಾರ ಸ್ಯಾಂಡಲ್ವುಡ್ ನಟ ಯಶ್, ಮೇಯರ್ ಪದ್ಮಾವತಿ, ನಟಿಯರಾದ ರೂಪಿಕಾ, ಮಯೂರಿ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಶ್, ಹೆಣ್ಣು ಮಕ್ಕಳಿಗೆ ಚಿನ್ನ ಎನ್ನುವುದು ಪ್ರಮುಖವಾದದ್ದು.
ಹೆಣ್ಣು ಮಕ್ಕಳು ಬಂಗಾರ ಕೊಳ್ಳಬೇಕು, ಆಭರಣ ಕೊಂಡರೆ ಅವರಿಗೂ ಅಂದ, ಮನೆಗೂ ಅಂದ. ಹೆಣ್ಣು ಮಕ್ಕಳು ಒಡವೆಗಳನ್ನು ಧರಿಸಿದಾಗ ಮತ್ತಷ್ಟು ಅಂದವಾಗಿ ಕಾಣುತ್ತಾರೆ. ಇದರ ಜತೆಗೆ ಮನೆಯಲ್ಲಿ ಚಿನ್ನವಿದ್ದರೆ ಕಷ್ಟಕಾಲದಲ್ಲಿ ನೆರವಿಗೆ ಬರುತ್ತದೆ. ಬಂಗಾರವನ್ನು ಕೇವಲ ಒಡವೆಯಾಗಿ ಅಷ್ಟೇ ನೋಡಬಾರದು. ಆಭರಣ ಕೂಡ ಒಂದು ರೀತಿ ಬ್ಯಾಂಕ್ ಇದ್ದ ಹಾಗೆ. ಹಾಗಾಗಿ ಚಿನ್ನ ಕೊಳ್ಳುವುದು ಕೂಡ ಉಳಿತಾಯದ ಮಾರ್ಗ ಎಂದು ಹೇಳಿದರು.
ಮೇಯರ್ ಪದ್ಮಾವತಿ ಮಾತನಾಡಿ, ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ಹೊಸ ವಿನ್ಯಾಸದ ಚಿನ್ನ, ಬೆಳ್ಳಿ ಆಭರಣಗಳಿಗೆ ಪ್ರಸಿದ್ಧಿಯಾಗಿದೆ. ಆಧುನಿಕ ಮಹಿಳೆಯರಿಗೆ ಇಷ್ಟವಾಗುವಂತಹ ವೈವಿಧ್ಯಮಯ ಒಡವೆಗಳ ಬೃಹತ್ ಸಂಗ್ರಹ ಇಲ್ಲಿದೆ. ಇಲ್ಲಿರುವ ತ್ರೀಡಿ, ಆ್ಯಂಟಿಕ್, ಸಮಕಾಲೀನ ಹೀಗೆ ಎಲ್ಲ ಬಗೆಯ ಆಭರಣಗಳು ಮಹಿಳೆಯರ ಮನಸೂರೆಗೊಳ್ಳಲಿವೆ ಎಂದರು.
ಸಂಸ್ಥೆ ಮಾಲೀಕ ಟಿ.ಎ. ಶರವಣ, ಜನತೆ ಹಾಗೂ ಮಹಿಳೆಯರು ಇಷ್ಟಪಡುವ ಆಕರ್ಷಕ ವಿನ್ಯಾಸದ ಆಭರಣಗಳು ನಮ್ಮಲ್ಲಿ ದೊರೆಯುತ್ತವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಭರಣಗಳನ್ನು ಒದಗಿಸುವುದು ಸಾಯಿಗೋಲ್ಡ್ ಪ್ಯಾಲೇಸ್ನ ವಿಶೇಷತೆ. ದುಬೈ ಬೆಲೆಯಲ್ಲಿ ಚಿನ್ನಾಭರಣ ಮಾರಾಟ ಮಾಡುತ್ತಿರುವ ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ ಹೆಚ್ಎಸ್ಆರ್ ಲೇಔಟ್ನಲ್ಲಿ ತೆರೆದಿರುವುದು ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು