ತೆರಿಗೆ ದರ ಪರಿಷ್ಕರಣೆಗೆ ಗ್ರಾಪಂಗಳ ನಿರಾಸಕ್ತಿ


Team Udayavani, Sep 17, 2018, 6:35 AM IST

taxx.jpg

ಬೆಂಗಳೂರು: ಸ್ಥಳೀಯ ಸರ್ಕಾರಗಳಾಗಿರುವ ಗ್ರಾಮ ಪಂಚಾಯಿತಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕೆಂಬ ಸರ್ಕಾರದ ಪ್ರಯತ್ನಕ್ಕೆ ಸ್ವತಃ ಗ್ರಾಮ ಪಂಚಾಯಿತಿಗಳಿಂದಲೇ ಸ್ಪಂದನೆ ಸಿಗುತ್ತಿಲ್ಲ.

ಇದಕ್ಕೆ ಉದಾಹರಣೆ ಎಂದರೆ 2015ರಲ್ಲೇ ತಿದ್ದುಪಡಿ ತಂದಿದ್ದರೂ ರಾಜ್ಯದ 6,024 ಗ್ರಾಪಂಗಳ ಪೈಕಿ ಕೇವಲ 1,400 ಗ್ರಾಪಂಗಳು ಮಾತ್ರ ತೆರಿಗೆ ದರ ಪರಿಷ್ಕರಣೆ ಮಾಡಿವೆ. ಗ್ರಾಪಂಗಳ ಈ ಅಸಡ್ಡೆಯಿಂದಾಗಿ ಕೋಟಿಗಟ್ಟಲೇ ಆದಾಯ ಖೋತಾ ಆಗುತ್ತಿದೆ.

ತೆರಿಗೆ ದರ ಪರಿಷ್ಕರಣೆ ಮಾಡಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರೂ, ಈ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆ ಕಾಲಕಾಲಕ್ಕೆ ಸುತ್ತೋಲೆಗಳನ್ನು ಹೊರಡಿಸಿ ನೆನಪಿಸುತ್ತಿದ್ದರೂ ಗ್ರಾಪಂಗಳು ಮಾತ್ರ ಎಚೆತ್ತುಕೊಳ್ಳುತ್ತಿಲ್ಲ. ಗ್ರಾಪಂಗಳು ತಮ್ಮದೇ ಸ್ವಯಂಕೃತ ಅಪರಾಧದಿಂದಾಗಿ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶಗಳನ್ನು ಕೈಚೆಲ್ಲುತ್ತಿವೆ. ಒಂದೆಡೆ 6,024 ಗ್ರಾಪಂಗಳಲ್ಲಿ ಸದ್ಯ 1 ಸಾವಿರ ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿದಿದ್ದರೆ,ಮತ್ತೂಂದು ಕಡೆ ಕಳೆದ ಮೂರು ವರ್ಷಗಳಿಂದ 5 ಸಾವಿರಕ್ಕೂ ಹೆಚ್ಚು ಗ್ರಾಪಂಗಳು ತೆರಿಗೆಯನ್ನೇ ಪರಿಷ್ಕರಿಸಿಲ್ಲ. ಇದರಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಬಹುದೊಡ್ಡ ತೊಡಕಾಗುತ್ತಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಪಂಗಳಲ್ಲಿ ಬಾಕಿ ತೆರಿಗೆ ವಸೂಲಿ ಮತ್ತು ತೆರಿಗೆ ಪರಿಷ್ಕರಣೆಗೆ ವಿಶೇಷ ಅಭಿಯಾನ ನಡೆಸಲು ಮುಂದಾಗಿದೆ. ಬಾಕಿ ವಸೂಲಿ ಮತ್ತು ತೆರಿಗೆ ಪರಿಷ್ಕರಣೆ ಬಗ್ಗೆ ಪ್ರಗತಿ ತಿಂಗಳು ಕಡ್ಡಾಯವಾಗಿ ಪರಿಶೀಲಿಸಿ ಪ್ರಗತಿ ಸಾಧಿಸುವ ಗ್ರಾಪಂಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಹಿನ್ನಡೆ ಸಾಧಿಸುವ ಗ್ರಾಪಂಗಳಿಗೆ ಎಚ್ಚರಿಕೆ ಕೊಟ್ಟು, ಬಾಕಿ ವಸೂಲಿ ಕಾರ್ಯಚುರುಕುಗೊಳಿಸಲು ತಾಕೀತು ಮಾಡುವಂತೆ ಎಲ್ಲ ಜಿಪಂ ಸಿಇಓಗಳಿಗೆ ಸೂಚನೆ ನೀಡಿದೆ.

ಯಾವುದಕ್ಕೆ ಎಷ್ಟು ತೆರಿಗೆ?: ವಾಸದ ಕಟ್ಟಡಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.05ರಿಂದ ಗರಿಷ್ಠ ಶೇ.0.10, ವಾಣಿಜ್ಯ ಕಟ್ಟಡಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.20ರಿಂದ ಶೇ.05, ಕೈಗಾರಿಕೆಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ. 0.4ರಿಂದ ಗರಿಷ್ಠ ಶೇ.1, ಖಾಲಿ ಜಮೀನುಗಳಿಗೆ ಸಾವಿರ ಚದರ ಅಡಿ ಗಿಂತ ಹೆಚ್ಚಿಲ್ಲದ ಜಮೀನಿಗೆ ಅದರ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.05ರಿಂದ ಗರಿಷ್ಠ ಶೇ.0.1, ಸಾವಿರದಿಂದ 4 ಸಾವಿರ ಚ. ಮೀ.ಗಿಂತ ಕಡಿಮೆ ಜಮೀನಿಗೆ ಸ್ವತ್ತಿನ ಮೌಲ್ಯದ ಮೇಲೆ ಕನಿಷ್ಠ 0.02ರಿಂದ ಗರಿಷ್ಠ ಶೇ.0.05, 4 ಸಾವಿರ ಚ.ಮೀ.ಗಿಂತ ಹೆಚ್ಚಿರುವ ಜಮೀನಿಗೆ ಸ್ವತ್ತಿನ ಮೂಲ ಮೌಲ್ಯದ ಕನಿಷ್ಠ ಶೇ.0.01ರಿಂದ ಗರಿಷ್ಠ ಶೇ. 0.02 ತೆರಿಗೆ ವಿಧಿಸಬಹುದು.

ಅದೇ ರೀತಿ ಮೊಬೈಲ್‌ ಟವರ್‌ಗೆ ಪ್ರತಿ ಟವರ್‌ಗೆ ವರ್ಷಕ್ಕೆ 12 ಸಾವಿರ ರೂ., ವಿಂಡ್‌ಮಿಲ್‌ಗ‌ಳಿಗೆ ಟರ್ಬೈನ್‌ಗಳನ್ನು ಆಧರಿಸಿ ವಾರ್ಷಿಕ 1 ಲಕ್ಷ ರೂ.ವರೆಗೆ, ಸೋಲಾರ್‌ ಪಾರ್ಕ್‌ಗಳಿಗೆ ಸ್ವತ್ತಿನ ಮೂಲ ಮೌಲ್ಯದ ಮೇಲೆ ಕನಿಷ್ಠ ಶೇ.0.50ರಿಂದ ಗರಿಷ್ಠ ಶೇ.1.50, ಆಪ್ಟಿಕಲ್‌ ಫೈಬರ್‌ ಕೇಬಲ್‌ಗ‌ಳಿಗೆ ರಸ್ತೆ ಅಗೆಯಲು ಮೂರು ನಾಳಗಳಿಗೆ ಪ್ರತಿ ಮೀಟರ್‌ಗೆ 450 ರೂ. ಮನೋರಂಜನೆ ಮೇಲೆ ಪ್ರತಿ ಪ್ರದರ್ಶನಕ್ಕೆ 50 ರೂ, ವಾಹನ ನಿಲುಗಡೆಗೆ ಬಸ್‌, ಲಾರಿಗಳಿಗೆ ದಿನಕ್ಕೆ 50 ರೂ, ಕಾರ್‌, ಲಘು ಮೋಟಾರು ವಾಹನಗಳಿಗೆ 20 ರೂ, ಮೋಟಾರು ಸೈಕಲ್‌ಗೆ 10 ರೂ, ಇತರೆ ವಾಹನಗಳಿಗೆ ಕನಿಷ್ಠ ದಿನಕ್ಕೆ 1ರಿಂದ ಗರಿಷ್ಠ 10 ರೂ., ಮಾರುಕಟ್ಟೆ ಪ್ರದೇಶಗಳಲ್ಲಿ ವಿಸ್ತೀರ್ಣ ಆಧರಿಸಿ ಕನಿಷ್ಠ 2ರಿಂದ ಗರಿಷ್ಠ 5 ರೂ.ಸಂತೆ ಮತ್ತು ಜಾತ್ರೆಗಳಲ್ಲಿ ಮಾರಾಟಕ್ಕೆ ತರುವ ಜಾನುವಾರುಗಳಿಗೆ ದಿನಕ್ಕೆ 5 ರೂ, ನೀರು ಸರಬರಾಜು ಮಾಡಲು ಮನೆಗಳಿಗೆ ನೇರ ಸಂಪರ್ಕಕ್ಕೆ ಕನಿಷ್ಠ 25 ರೂ, ಸಾರ್ವಜನಿಕ ನಲ್ಲಿ ನೀರು ಕನಿಷ್ಠ 10 ರೂ. ತೆರಿಗೆ ವಿಧಿಸಲು ಅವಕಾಶವಿದೆ.

ಬಾಕಿ ವಸೂಲಿ ಮತ್ತು ತೆರಿಗೆ ಪರಿಷ್ಕರಣೆಯಲ್ಲಿ ಆಗುತ್ತಿರುವ ವಿಳಂಬ ಇಲಾಖೆಯ ಗಮನಕ್ಕೆ ಬಂದಿದೆ. ಇದಕ್ಕಾಗಿ ಅಭಿಯಾನ ರೂಪದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ. ಶುಕ್ರವಾರಷ್ಟೇ (ಸೆ.7) ಮತ್ತೂಂದು ಸಭೆ ನಡೆಸಿ ಜಿಪಂ ಸಿಇಓಗಳಿಗೆ ತಾಕೀತು ಮಾಡಲಾಗಿದೆ.
–  ಎಲ್‌.ಕೆ. ಅತೀಕ್‌, ಪ್ರಧಾನ
ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ

– ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.