ಡಿ.13ಕ್ಕೆ ಎಚ್ಡಿಡಿ ಆತ್ಮ ಚರಿತ್ರೆ ಬಿಡುಗಡೆ
Team Udayavani, Dec 2, 2021, 12:03 PM IST
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಹುನಿರೀಕ್ಷಿತ “ಆತ್ಮ ಚರಿತ್ರೆ’ ಕುರಿತ ಪುಸ್ತಕ ಡಿ.13ಕ್ಕೆ ನವದೆಹಲಿಯಲ್ಲಿ ಬಿಡುಗಡೆಯಾಗಲಿದೆ.
ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಬರೆದಿರುವ ಈ ಪುಸ್ತಕದಲ್ಲಿ ದೇವೇಗೌಡರ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಏಳುಬೀಳುಗಳು, ರಾಜಕೀಯ ಸಂಕೀರ್ಣ ಕಾಲದಲ್ಲಿ ಅವರು ಕೈಗೊಂಡ ನಿರ್ಣಯಗಳು, ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಅವರು ಆಯಾ ಸಂದರ್ಭಕ್ಕೆ ತಾಳಿದ ನಿಲುವು, ಮುಖ್ಯಮಂತ್ರಿಯಿಂದ ಪ್ರಧಾನಿ ಹುದ್ದೆಗೆ ಏರಿದ ರಾಜಕೀಯ ಹಾದಿ ಕುರಿತ ವಿಚಾರಗಳು ಇವೆ.
ದೆಹಲಿಯಲ್ಲಿ ನಡೆಯುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುಪ್ರೀಂಕೋರ್ಟ್ನ ಖ್ಯಾತ ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರಿಮನ್ ಒಪ್ಪಿಕೊಂಡಿದ್ದು, ರಾಜಕೀಯ ಹಾಗೂ ಇತರ ಕ್ಷೇತ್ರಗಳ ಗಣ್ಯಮಾನ್ಯರು ಆತ್ಮ ಚರಿತ್ರೆಯ ಬಿಡುಗಡೆಗೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಲಾಗಿದೆ.