ಬಿದಿರಿನಿಂದ ಹೆಚ್ಚು ಆದಾಯ
Team Udayavani, Sep 18, 2018, 12:22 PM IST
ಯಲಹಂಕ: ಆದಾಯ ಕೊಡುವ ಬಿದಿರು ಯಾವ ವಾಣಿಜ್ಯ ಬೆಳೆಗೂ ಕಡಿಮೆಯಿಲ್ಲ ಎಂದು ಬೆಂಗಳೂರು ಗಾಂಧಿಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್.ನಟರಾಜು ಹೇಳಿದರು. ವಿಶ್ವ ಬಿದಿರು ದಿನದ ಪ್ರಯುಕ್ತ ಜಿಕೆವಿಕೆ ಆವರಣದಲ್ಲಿ 5 ಬಿದಿರು ಹೊಸ ತಳಿಗಳ 250ಕ್ಕೂ ಹೆಚ್ಚು ಗಿಡಗಳನ್ನು ಪ್ರಾತ್ಯಕ್ಷಿತಾ ತಾಣದಲ್ಲಿ ನೆಟ್ಟು ಮಾತನಾಡಿ, ಬೀಳು ಬಿಟ್ಟ ಜಾಗದಲ್ಲಿ ರೈತರು ಬಿದಿರು ಕೃಷಿ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಬಹುದು ಎಂದರು.
ಬಿದಿರು ರೈತರಿಗೆ ಆದಾಯ ತರುವ ಜತೆ ಜತೆಗೆ ನಶಿಸಿ ಹೋಗುತ್ತಿರುವ ಗುಡಿಕೈಗಾರಿಕೆ ಹಾಗೂ ಬುಡಕಟ್ಟುr ಜನಾಂಗದ ಆರ್ಥಿಕ ಸ್ಥಿತಿ ಸುಧಾರಿಸಬಲ್ಲ ಕಲ್ಪವೃಕ್ಷವಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಬಿದಿರು ಸೊಸೈಟಿಯ ಸದಸ್ಯ ಡಾ.ಚಿದಾನಂದ್ ಮಾತನಾಡಿ. ಬಿದಿರು ಬೆಳೆಯಲು ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ. ಹೆಕ್ಟೇರ್ಗೆ 30 ಸಾವಿರ ಸಹಾಯಧನ ನೀಡುತ್ತಿದೆ. ಜೊತೆಗೆ ನಾಟಿ ಮಾಡಲು ಅಗತ್ಯ ಬಿದಿರನ್ನು ಪೂರೈಸುತ್ತದೆ.
ಹವಾಮಾನಕ್ಕನುಗುಣವಾಗಿ ಬೇರೆ ಬೇರೆ ತಳಿಗಳನ್ನು ಬೆಳೆಯಬಹುದು. ಏಕ ಬೆಳೆಯಾಗಿ ಬೆಳೆಯಬಹುದಾದರೆ 5.5ಮೀಟರ್ ಅಂತರದಲ್ಲಿ ಬಿದಿರನ್ನು ನಾಟಿ ಮಾಡಬೇಕು. ನಾಟಿ ಮಾಡಿದ 4 ವರ್ಷಗಳನಂತರ ಕಟಾವು ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಬಂಬೂ ಮಿಷನ್ ಕಚೇರಿ ಸಂಪರ್ಕಿಸಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಶೋಧನಾ ನಿರ್ದೇಶಕ ವೈ.ಜಿ.ಷಡಕ್ಷರಿ, ರಿಜಿಸ್ಟಾರ್ ಡಾ. ಎ.ಬಿ.ಪಾಟೀಲ್, ಕೃಷಿ ಶಿಕ್ಷಣ ನಿರ್ದೇಶಕರಾದ ಡಾ.ರಾಜೇಂದ್ರ ಪ್ರಸಾದ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ