ಪಾಲಕರ ಮೇಲೆ ಹಿಡಿತ
Team Udayavani, Jun 16, 2018, 11:35 AM IST
ಬೆಂಗಳೂರು: ಖಾಸಗಿ ಶಾಲೆಗಳ ನಿಯಮಾನುಸಾರ ಶುಲ್ಕ ಪಾವತಿಸಲು ಒಪ್ಪಿ ಮಕ್ಕಳಿಗೆ ಸೀಟು ಪಡೆದ ನಂತರ ಶುಲ್ಕ ಪಾವತಿಸಲು ಹಿಂದೇಟು ಹಾಕುವ ಪಾಲಕ-ಪೋಷಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲುವ ಕಠಿಣ ನೀತಿಯೊಂದನ್ನು ರಾಜ್ಯ ಸರ್ಕಾರ ರೂಪಿಸಬೇಕೆಂದು ರಾಜ್ಯ ಖಾಸಗಿ ಶಾಲಾಡಳಿತ ಮಂಡಳಿಗಳ ಒಕ್ಕೂಟ ಆಗ್ರಹಿಸಿದೆ.
ಶಿಕ್ಷಣ ಹಕ್ಕು ಕಾಯ್ದೆ(ಆರ್ಟಿಇ) ಸೀಟು ಹೊರತುಪಡಿಸಿ, ಆಡಳಿತ ಮಂಡಳಿಯ ಶೇ.75ರಷ್ಟು ಸೀಟುಗಳಿಗೆ ನಿಯಮಾನುಸಾರವಾಗಿ ಮಕ್ಕಳನ್ನು ದಾಖಲಿಸುವ ಪಾಲಕರಲ್ಲಿ ಕೆಲವರು ಐದಾರು ವರ್ಷಗಳಿಂದ ಶುಲ್ಕ ಪಾವತಿಸಿಲ್ಲ. ಶೇ.20ರಿಂದ 25ರಷ್ಟು ಪಾಲಕರು ಈ ರೀತಿ ಮಾಡುತ್ತಿದ್ದಾರೆ.
ಇದರ ಜತೆಗೆ ಶೇ.3ರಿಂದ 4ರಷ್ಟು ಪಾಲಕರು ಮೂರ್ನಾಲ್ಕು ವರ್ಷ ಶುಲ್ಕ ಪಾವತಿಸದೇ ನಂತರ ಶಾಲೆಯನ್ನೇ ಬದಲಾವಣೆ ಮಾಡಿದ್ದಾರೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಸೂಕ್ತ ನೀತಿಯೊಂದನ್ನು ರೂಪಿಸಬೇಕೆಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಖಾಸಗಿ ಅನುದಾನಿತ ಶಾಲೆಗಳಲ್ಲಿ ಶುಲ್ಕವೇ ದೊಡ್ಡ ಸಮಸ್ಯೆಯಾಗಿದೆ. ಲಕ್ಷಾಂತರ ರೂ. ಶುಲ್ಕ ಪಡೆಯುವ ಶಾಲೆಗಳ ಜತೆಗೆ 15ರಿಂದ 20 ಸಾವಿರ ರೂ.ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡುವ ಖಾಸಗಿ ಶಾಲೆಗಳಿವೆ. ಕೆಲವು ಮಕ್ಕಳ ಪಾಲಕರು ಶಾಲೆಯ ನಿಯಮವನ್ನು ಒಪ್ಪಿಕೊಂಡು ಮಕ್ಕಳನ್ನು ದಾಖಲಿಸುತ್ತಾರೆ. ಆದರೆ, ಎರಡು-ಮೂರು ವರ್ಷವಾದರೂ ಶುಲ್ಕ ಪಾವತಿಸುವುದಿಲ್ಲ. ಇದನ್ನು ತಪ್ಪಿಸಲು ಪಾಲಕ-ಪೋಷಕರನ್ನು ನಿಯಂತ್ರಿಸುವ ನೀತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಆರ್ಟಿಇ ಮಕ್ಕಳ ಶುಲ್ಕ ಮರುಪಾವತಿಯೂ ವಿಳಂಬವಾಗುತ್ತಿದೆ. ಎಲ್ಕೆಜಿ ಮಗುವಿಗೆ 8 ಸಾವಿರ ಹಾಗೂ 1ನೇ ತರಗತಿ ಮಗುವಿಗೆ 16 ಸಾವಿರ ನೀಡುತ್ತೇವೆಂದು ಹೇಳುವ ಸರ್ಕಾರ, ವಾಸ್ತವವಾಗಿ ಒಂದು ಮಗುವಿಗೆ 4ರಿಂದ 5 ಸಾವಿರ ರೂ. ಮಾತ್ರ ನೀಡುತ್ತಿದೆ. ಅದು ಕೂಡ ಸರಿಯಾದ ಸಮಯದಲ್ಲಿ ಮರುಪಾವತಿ ಮಾಡುತ್ತಿಲ್ಲ. ಆರ್ಟಿಇ ಕಾಯ್ದೆ ಉಲ್ಲಂ ಸುವ ಖಾಸಗಿ ಶಾಲಾಡಳಿತ ಮಂಡಳಿ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸಂಸ್ಥೆಗಳ ನಿಯಂತ್ರಿಸಲು ಸಮಿತಿ: ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕಾಗಿ ನಮ್ಮೊಳಗೆ ಒಂದು ಸಮಿತಿ ರಚಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ. ಸರ್ಕಾರಿ ಆದೇಶದ ಪಾಲನೆ, ಖಾಸಗಿ ಶಿಕ್ಷಣ ಸಂಸ್ಥೆಗಳ ರಕ್ಷಣೆ, ಶುಲ್ಕ, ಕನ್ನಡ ಅನುಷ್ಠಾನ, ಆರ್ಟಿಇ ಮಕ್ಕಳ ರಕ್ಷಣೆ ಸೇರಿ ಖಾಸಗಿ ಶಾಲೆಯ ಹತ್ತಾರು ಸಮಸ್ಯೆಗಳನ್ನು ನಿವಾರಿಸುವ ದೃಷ್ಟಿಯಿಂದ ಎಲ್ಲ ಆಡಳಿತ ಮಂಡಳಿಗಳು ಒಟ್ಟಾಗಿ ನಿಯಂತ್ರಣ ಸಮಿತಿ ರಚನೆಗೆ ಆಲೋಚನೆ ಮಾಡುತ್ತಿದ್ದೇವೆ ಎಂದು ಡಿ.ಶಶಿಕುಮಾರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್