ಜೆಡಿಎಸ್ ನಿರ್ಣಾಯಕ ಆಟದಲ್ಲಿ ಕಾಂಗ್ರೆಸ್ಗೆ ಸಂಕಟ, ಬಿಜೆಪಿಗೆ ಆಸೆ
Team Udayavani, Sep 3, 2017, 10:54 AM IST
ಬೆಂಗಳೂರು: ಸುಳ್ಳು ದಾಖಲೆ ನೀಡಿ ಟಿಎ-ಡಿಎ ಪಡೆದ ಪ್ರಕರಣದಲ್ಲಿ ಎಂಟು ವಿಧಾನಪರಿಷತ್ ಸದಸ್ಯರ ನೆತ್ತಿ ಮೇಲೆ ತೂಗು ಕತ್ತಿ ತೂಗುತ್ತಿರುವ ನಡುವೆಯೇ ಬಿಬಿಎಂಪಿ ನೂತನ
ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಮತ್ತೂಮ್ಮೆ “ನಂಬರ್ಗೇಮ್’ ಪ್ರಾರಂಭವಾಗಿದೆ.
ಇದೇ ತಿಂಗಳು ಸೆ.25 ರಂದು ಹಾಲಿ ಮೇಯರ್-ಉಪಮೇಯರ್ ಅವಧಿ ಮುಗಿಯಲಿದ್ದು, ಕಿಂಗ್ ಮೇಕರ್ ಆಗಿರುವ ಜೆಡಿಎಸ್, ಮತ್ತೂಂದು ಅವಧಿಗೆ ಕಾಂಗ್ರೆಸ್ ಜತೆ ಮೈತ್ರಿ ಮುಂದು ವರಿಸುವುದೋ, ಬಿಜೆಪಿ ಜತೆ ಹೋಗುವುದೋ ಅಥವಾ ತಟಸ್ಥವಾಗಿ ಉಳಿವುದೋ ಎಂಬ ಜಿಜ್ಞಾಸೆಯಲ್ಲಿದೆ.
ಜೆಡಿಎಸ್ ತಟ ಸ್ಥವಾದರೆ ಅಧಿಕಾರ ಹಿಡಿಯುವ ದಾರಿ ಸುಲಭವಾಗುವುದರಿಂದ ಬಿಜೆಪಿಯಲ್ಲೂ ಆಸೆ ಚಿಗುರೊಡೆದಿದೆ. ಆದರೆ, ಪಕ್ಷೇತರರ ಬೆಂಬಲಇರುವುದ ರಿಂದ ಜೆಡಿಎಸ್ ಜತೆ ಮತ್ತೂಮ್ಮೆ ಸಂಬಂಧ ಕುದುರಿಸಿಕೊಳ್ಳಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ರಂಗ ಪ್ರವೇಶ ಮಾಡುವ ಸಾಧ್ಯತೆಗಳೂ ಇಲ್ಲದಿಲ್ಲ.
ಈ ಮಧ್ಯೆ, ಟಿಎ-ಡಿಎ ಪ್ರಕರಣದ ನಂತರ ಬೆಂಗಳೂರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದ ಡಾ.ಜಿ.ಪರಮೇಶ್ವರ್, ಬೋಸರಾಜ್, ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಂ.ಡಿ.ಲಕ್ಷ್ಮಿನಾರಾಯಣ್ ಮತ್ತೆ ವಿಳಾಸಬದಲಾಯಿಸಿ ಕೊಂಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ನ ಬಲದಲ್ಲಿ ಇಳಿಮುಖವಾಗಿದೆ. ಆದರೆ, ಹೊಸದಾಗಿ ಸಿ.ಎಂ.ಇಬ್ರಾಹಿಂ, ಪಿ.ಆರ್.ರಮೇಶ್ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ನಿಂದ ರಮೇಶ್ಬಾಬು ಸೇರಿದ್ದಾರೆ.
ಈಗಿನ ಲೆಕ್ಕಾಚಾರದ ಪ್ರಕಾರ ಬಿಬಿಎಂಪಿಯಲ್ಲಿ ಮೇಯರ್-ಉಪ ಮೇಯರ್ ಚುನಾವಣೆಗೆ ಪಾಲಿಕೆ ಸದಸ್ಯರು, ಶಾಸಕರು-ಸಂಸದರು ಸೇರಿ ಮತದಾನ ಮಾಡಲು 266 ಸದಸ್ಯರಿಗೆ ಹಕ್ಕು ಇದೆ. ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ಸೇರಿ 140 ಸಂಖ್ಯಾ ಬಲ ಆಗಲಿದ್ದು, ಬಿಜೆಪಿ ಯದು 126 ಆಗಲಿದೆ.
ಈ ಮಧ್ಯೆ, ಹಾಲಿಮತದಾರರ ಪಟ್ಟಿಯಲ್ಲಿರುವವರವಿರುದ್ಧವೂ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿತಕರಾರು ತೆಗೆದು ಚುನಾವಣಾ ಆಯೋಗಕ್ಕೆ ಹೋಗಿರುವುದರಿಂದ ಮತದಾನ ದಿನದವರೆಗೂ ಲೆಕ್ಕಾಚಾರ ಏರು ಪೇರಾದರೂ ಆಶ್ಚರ್ಯವಿಲ್ಲ.
ಈ ನಡುವೆ “ಕಿಂಗ್ ಮೇಕರ್’ ಆಗಿರುವ ಜೆಡಿಎಸ್, ಕಾಂಗ್ರೆಸ್ ಜತೆ ಮತ್ತೆ ಹೋಗಬೇಕೇ, ಬಿಜೆಪಿಗೆ ಬೆಂಬಲ ಕೊಡಬೇಕೇ? ಇಲ್ಲವೇ ತಟಸ್ಥವಾಗಿರ ಬೇಕೇ ಎಂಬ ಜಿಜ್ಞಾಸೆಯಲ್ಲಿದೆ. ಈ ಬಾರಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರದೇ ಅಂತಿಮ ತೀರ್ಮಾನವಾದರೆ ತಟಸ್ಥವಾಗಿರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದಾಗಿ ದೇವೇಗೌಡರನ್ನು ಭೇಟಿ ಅಥವಾ ದೂರವಾಣಿ ಮೂಲಕ ಮಾತನಾಡಿ ಮಾತು ಕತೆ ನಡೆಸಿ ಮನವೊಲಿಸಿದರೆ ಮೂರನೇ ಬಾರಿ ಮೈತ್ರಿ ಮುಂದು ವರಿಯಲು ಸಾಧ್ಯ, ಆದರೆ, ಇತ್ತೀಚೆಗೆ ಗೌಡರು ನಾವೇನು ಕಾಂಗ್ರೆಸ್ಗೆ ಬಾಂಡ್ ಬರೆ ದುಕೊಟ್ಟಿಲ್ಲ ಎಂದು ಹೇಳಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ.
ನಗರದಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಅನಾಹುತ, ಸಂಚಾರ ದಟ್ಟಣೆ ಸಮಸ್ಯೆಗಳ ಬಗ್ಗೆ ನಾಗಕರಿಕರ ಆಕ್ರೋಶ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಜತೆ ಭಾಗಿಯಾಗುವುದು ಬೇಡ ಎಂಬುದು ಕುಮಾರಸ್ವಾಮಿಯವರ ಆಲೋಚನೆ ಎಂದು ಹೇಳಲಾಗಿದೆ.
ಚುನಾವಣೆ ವರ್ಷ ಇರುವ ಸಂದರ್ಭದಲ್ಲಿ ಪಾಲಿಕೆಯಲ್ಲಿ ಆಧಿಕಾರ ಹಿಡಿದು ರಾಜ್ಯ ಸರ್ಕಾರ ದಿಂದ ಯಾವುದೇ ಅನುದಾನ ದೊರಕದೆ ಸಮಸ್ಯೆಯಾದರೆ ಜನತೆ ಆಕ್ರೋಶ ತಮ್ಮ ಮೇಲೆ ತಿರುಗಬಹುದು ಎಂಬ ಆತಂಕ ಬಿಜೆಪಿಯದು. ಇಷ್ಟರ ನಡುವೆಯೂ ಜೆಡಿಎಸ್ ತಟಸ್ಥವಾಗಿದ್ದು ತಾನಾಗಿಯೇ ಅಧಿಕಾರ ಬರುವುದಾದರೆ ಬೇಡ ಎನ್ನುವ ಸ್ಥಿತಿ ಯಲ್ಲಿ ಬಿಜೆಪಿ ನಾಯಕರಂತೂ ಇಲ್ಲ.
ವಿಧಾನಸಭೆ ಚುನಾವಣೆ ಹತ್ತಿರ ಇರುವುದರಿಂದ ರಾಜಧಾನಿಯ ಮತದಾರರ ಓಲೈಸಿಕೊಳ್ಳುವುದು ಮೂರೂ ಪಕ್ಷಗಳಿಗೆ ಅನಿವಾರ್ಯ. ಹೀಗಾಗಿ, ಬಿಬಿಎಂಪಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ತೆರೆಮರೆಯಲ್ಲಿ ಸಾಕಷ್ಟು ಪುಯತ್ನಗಳು ನಡೆಯುತ್ತಿವೆ.
ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ