ಅತಿಥಿ ಗೃಹ ನಿರ್ಮಾಣ ಯೋಜನೆಗೆ ಚಾಲನೆ
Team Udayavani, Dec 23, 2019, 3:05 AM IST
ಬೆಂಗಳೂರು: ತಿರುಪತಿ ಮತ್ತು ಶಿರಡಿಯಲ್ಲಿ ಅತಿಥಿಗೃಹ ನಿರ್ಮಾಣದಿಂದ ಕರ್ನಾಟಕದ ಯಾತ್ರಿಕರಿಗೆ ಅನುಕೂಲವಾಗಲಿದೆ ಎಂದು ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು.
ಸಪ್ತಗಿರಿ ಸಾಯಿ ವಾಸವಿ ಚಾರಿಟೆಬಲ್ ಟ್ರಸ್ಟ್ ಹಾಗೂ ಶಿರಡಿ ಸಾಯಿ ವಾಸವಿ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ಜಯನಗರದ ಎನ್ಎಂಕೆಆರ್ವಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ “ವಜ್ರ ವಾಸವಿ’ ಹಾಗೂ “ವಾಸವಿ ಭವನ’ ವಸತಿಗೃಹ ಕಟ್ಟಡಗಳ ನಿರ್ಮಾಣ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಿರುಪತಿ ಮತ್ತು ಶಿರಡಿಗೆ ತೆರಳುತ್ತಿದ್ದು, ಕನ್ನಡಿಗರಿಗಾಗಿ ಸಪ್ತಗಿರಿ ಮತ್ತು ಶಿರಡಿಸಾಯಿ ವಾಸವಿ ಚಾರಿಟೇಬಲ್ ಟ್ರಸ್ಟ್ ಅತಿಥಿಗೃಹ ನಿರ್ಮಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಸಪ್ತಗಿರಿ ಸಾಯಿ ವಾಸವಿ ಚಾರಿಟೆಬಲ್ ಟ್ರಸ್ಟ್ನಿಂದ ಆಂಧ್ರಪ್ರದೇಶದ ತಿರುಪತಿಯ ಅಲಿಪಿರಿ ರಸ್ತೆಯ ಮೃಗಾಲಯದ ಬಳಿ ನಿರ್ಮಿಸುತ್ತಿರುವ 108 ಕೋಣೆಗಳ “ವಜ್ರ ಭವನ’ ಅತಿಥಿ ಗೃಹ, ಶಿರಡಿ ಸಾಯಿ ವಾಸವಿ ಚಾರಿಟೆಬಲ್ ಟ್ರಸ್ಟ್ ಶಿರಡಿಯಲ್ಲಿ ನಿರ್ಮಿಸುತ್ತಿರುವ 50 ಕೊಠಡಿಗಳ “ವಾಸವಿ ಭವನ-2′ ಅತಿಥಿ ಗೃಹ ನಿರ್ಮಾಣ ಯೋಜನೆಯನ್ನು ಉದ್ಘಾಟಿಸಲಾಯಿತು.