ಎಟಿಎಂ ಸಿಸ್ಟಂ ಹ್ಯಾಂಗ್‌ ಮಾಡಿ ಹಣ ಕಳವು

ಸೈಬರ್‌ ಕ್ರೈಂ ಹೊಸ ತಂತ್ರ ಪತ್ತೆ ಹಚ್ಚಿದ ಪೊಲೀಸರು, ಆರೋಪಿ ಬಂಧನ | ಇನ್ನೂ ಮೂವರ ಪತ್ತೆಗೆ ಕ್ರಮ

Team Udayavani, Mar 3, 2021, 12:51 PM IST

ಎಟಿಎಂ ಸಿಸ್ಟಂ ಹ್ಯಾಂಗ್‌ ಮಾಡಿ ಹಣ ಕಳವು

ಬೆಂಗಳೂರು: ಎಚ್ಚರ ಎಚ್ಚರ ಈಗ ಬಂದಿದೆ ಸೈಬರ್‌ ಕ್ರೈಂ ಹೊಸ ಟೆಕ್ನಿಕ್‌.. ಎಟಿಎಂ ಕಾರ್ಡ್‌ ಬಳಕೆದಾರರು ಮತ್ತು ಬ್ಯಾಂಕ್‌ಗಳಿಗೆ ಮಹಾ ವಂಚನೆ ಮಾಡುವ ಜಾಲ ಇದೆ ಎಚ್ಚರ! ಪೊಲೀಸರು ಬಯಲಿಗೆಳೆದಿರುವ ಪ್ರಕರಣವೊಂದರಲ್ಲಿ ಅಮಾಯಕರಿಂದ ಎಟಿಎಂ ಕಾರ್ಡ್‌ ಗಳನ್ನು ಪಡೆದು ಅವುಗಳನ್ನು ಎಟಿಎಂ ಕೇಂದ್ರದಲ್ಲಿ ಬಳಸಲಾಗುತ್ತಿತ್ತು. ಆ ವೇಳೆಯಲ್ಲಿ ಎಟಿಎಂ

ಯಂತ್ರದ ಹಣ ಬರುವ ಕಿಂಡಿ ತೆರೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೈ ಬೆರಳುಗಳಿಂದ ಕರೆನ್ಸಿ ನೋಟು ಗಳನ್ನು ತೆಗೆದು ಅಲ್ಲಿನ ಸೆನ್ಸಾರ್‌ಗೆ ಅಡ್ಡಿಪಡಿಸಲಾಗುತ್ತಿತ್ತು. ಇದರಿಂದ ಎಟಿಎಂ ಸಿಸ್ಟಂ “ಹ್ಯಾಂಗ್‌’ (ತಟಸ್ಥ) ವಾಗುವುದರಿಂದ ಬ್ಯಾಂಕ್‌ನವರಿಗೆ ಮತ್ತು ಕಾರ್ಡ್‌ದಾರರಿಗೆ ಹಣ ನಗದೀಕರಣಗೊಂಡಿ ರುವ ಮಾಹಿತಿ (ಮೆಸೇಜ್‌) ಹೋಗುತ್ತಿರಲಿಲ್ಲ!

ಎಟಿಎಂ ಹಣ ಪಡೆದ ಬಳಿಕ ಮತ್ತೆ ಬ್ಯಾಂಕ್‌ಗಳಿಗೆ ತನಗೆ ಹಣ ಸಿಕ್ಕಿಲ್ಲ ಎಂದು ಆನ್‌ಲೈನ್‌ ದೂರು ನೀಡಿ ಬಳಕೆದಾರರಿಗೆ ಹಣ ಹೆಚ್ಚುವರಿಯಾಗಿ ಸಿಗುತ್ತಿತ್ತು. ಈ ರೀತಿ ಹಣ ಕೊಳ್ಳೆ ಹೊಡೆ ಯು ತ್ತಿದ್ದ ತಂಡದ ಬೆನ್ನು ಹತ್ತಿದ ನಗರ ಪೊಲೀಸರ ಬಲೆಗೆ ಓರ್ವ ಸಿಕ್ಕಿ ಬಿದ್ದಿದ್ದಾನೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ. ಜಾಲದಲ್ಲಿ ಇನ್ನೆಷ್ಟು ಮಂದಿ ಇದ್ದಾರೆ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉತ್ತರ ಪ್ರದೇ ಶದ ದೀಪ ಕ್‌ (20) ಬಂಧಿತ. ಆತ ನಿಂದ ವಿವಿಧ ಬ್ಯಾಂಕ್‌ ಗಳ 48 ಎಟಿ ಎಂ ಕಾರ್ಡ್‌ ಗಳು ಹಾಗೂ 52 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿ, ಉತ್ತ ರ ಪ್ರದೇಶದ ವಿವಿಧ ಬ್ಯಾಂಕ್‌ ಗಳ ಎಟಿಎಂ ಕಾರ್ಡ್‌ಗಳನ್ನು ಬಳಸಿಕೊಂಡು ಬೆಂಗಳೂರಿನ ಎಟಿಎಂ ಕೇಂದ್ರ ಗಳಲ್ಲಿ ಬಳಸಿ, ಹಣ ಬರುವಾಗ ಕೈಬೆರಳುಗಳನ್ನು ಇಟ್ಟು ಸಿಸ್ಟಂ ಹ್ಯಾಂಗ್‌ ಮಾಡಿ, ಬಳಿಕ ಬ್ಯಾಂಕ್‌ ಗಳಿಗೆ ಆನ್‌ ಲೈನ್‌ ಮೂಲಕ ದೂರು ನೀಡಿ ಅಕ್ರಮವಾಗಿ ಹಣ ಪಡೆ ಯು ತ್ತಿದ್ದ ಆರೋಪಿಯೊಬ್ಬ ರಾಜಾಜಿನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆರೋಪಿ ಇತ್ತೀಚೆಗೆ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿರುವ ಬ್ಯಾಂಕ್‌ ವೊಂದರ ಎಟಿಎಂ ಕೇಂದ್ರದಲ್ಲಿ ಹಣ ಪಡೆಯಲು ಮುಂದಾಗಿದ್ದ. ಅನುಮಾನದ ಮೇರೆಗೆ ಎಟಿಎಂ ತಾಂತ್ರಿಕ ನಿರ್ವ ಹಣೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಂಚನೆ ಹೇಗೆ?: ಉತ್ತ ರ ಪ್ರ ದೇಶದ ಹಮೀರ್‌ಪುರ ಜಿಲ್ಲೆಯ ದೀಪಕ್‌ ಫೆ.15ರಂದು ಬೆಂಗಳೂರಿಗೆ ಬಂದು ದೊಡ್ಡ ಕಲ್ಲ ಸಂದ್ರದಲ್ಲಿ ರೂಮ್‌ ಮಾಡಿಕೊಂಡಿದ್ದ. ತನ್ನ ಊರಿ ನಿಂದ ಬರುವಾಗ ಕಮಿಷನ್‌ ಕೊಡುವುದಾಗಿ ಪರಿಚಯಸ್ಥರಿಂದ ವಿವಿಧ ಬ್ಯಾಂಕ್‌ಗಳ 48 ಎಟಿಎಂ ಕಾರ್ಡ್‌ ಗ ಳನ್ನು ತಂದಿದ್ದಾ ನೆ. ದೊಡ್ಡ ಕಲ್ಲ ಸಂದ್ರದ, ಬಿಟಿಎಂ ಲೇಔಟ್‌, ರಾಜಾಜಿನಗರದ ವಿವಿಧ ಬ್ಯಾಂಕ್‌ನ ಎಟಿಎಂ ಸೆಂಟರ್‌ ಗಳಿಗೆ ಹೋಗಿ, ಎಟಿಎಂಯಂತ್ರದಲ್ಲಿ ಕಾರ್ಡ್ ಹಾಕಿ ಹಣ ಡ್ರಾ ಮಾಡಲು ಪಿನ್‌ ಒತ್ತಿ ನಂತರ ಹಣ ಬರಲು ಒಂದೆರಡು ಸೆಕೆಂಡ್‌ ಗಳು ಇರುವ ಮೊದಲೇ ಕೈ ಬೆರಳುಗಳನ್ನು ಅಡ್ಡ ಇಟ್ಟು, ಹಣ ಪಡೆದು ಕೊಳ್ಳುತ್ತಿದ್ದ. ಆಗ ಸಿಸ್ಟಂನಲ್ಲಿರುವ

ಸೆನ್ಸಾರ್ ಏಕಾಏಕಿ ಹ್ಯಾಂಗ್‌ ಆಗುತ್ತದೆ. ಜತೆಗೆ ಎಟಿ ಎಂ ಕಾರ್ಡ್‌ದಾರನಿಗೂ ಹಣ ಡ್ರಾ ಆಗಿರುವ ಸಂದೇಶ ಹೋಗುವುದಿಲ್ಲ. ಬಳಿಕ ಆನ್‌ ಲೈನ್‌ ಮೂಲಕ= ಸಂಬಂಧಿಸಿದ ಬ್ಯಾಂಕ್‌ನ ಸಹಾಯವಾಣಿಗೆ ಹಣ ಬಂದಿಲ್ಲ ಎಂದು ದೂರು ನೀಡಿ, ಬ್ಯಾಂಕ್‌ ನಿಂದ ಜಮೆ ಮಾಡಿಸಿಕೊಳ್ಳುತ್ತಿದ್ದ. ಈ ಹಣವನ್ನು ಮತ್ತೂಂದು ಖಾತೆಗೆ ಜಮೆ ಮಾಡಿಕೊಳ್ಳುತ್ತಿದ್ದ ಆರೋಪಿ, ಬೇರೆ ಎಟಿಎಂ ಕೇಂದ್ರಕ್ಕೆ ಹೋಗಿ ಮತ್ತೆ ಅದೇ ರೀತಿ ವಂಚಿಸಿ ಹಣಗಳಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಸಿಕ್ಕಿ ಬಿದ್ದಿದ್ದು ಹೇಗೆ?: ಹಲವು ದಿನಗಳಿಂದ ವಿವಿಧ ಬ್ಯಾಂಕ್‌ ಗಳ ಎಟಿಎಂ ಕೇಂದ್ರದಲ್ಲಿ ಈ ರೀತಿ ಲೋಪ ದೋಷಗಳು ಕಂಡು ಬರುತ್ತಿದ್ದವು. ಹೀಗಾಗಿ ಎಟಿಎಂಗಳ ತಾಂತ್ರಿಕ ನಿರ್ವ ಹಣೆ ನಿರ್ವಹಿಸುವ ಎಂಫಾಸಿಸ್‌ ಏಜೆನ್ಸಿಯ ಉಮಾಮಹೇಶ್‌, ಡಾ.ರಾಜ್‌ ಕುಮಾರ್‌ ರಸ್ತೆಯಲ್ಲಿರುವ ಎಂಟಿಎಂ ಕೇಂದ್ರಕ್ಕೆ ಬಂದಿದ್ದರು. ಆಗ ಆರೋಪಿ ಅನುಮಾನಾಸ್ಪದವಾಗಿ ಕೇಂದ್ರ ದಲ್ಲಿ ಹಣ ಪಡೆಯಲು ಮುಂದಾಗಿರುವ ಸುಳಿವು ಸಿಕ್ಕಿದೆ. ಕೂಡಲೇ ಕೇಂದ್ರ ರೋಲಿಂಗ್‌ ಶೆಟರ್‌ ಎಳೆದು ಆರೋಪಿಯನ್ನು ಕೂಡಿ ಹಾಕಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಇನ್‌ ಸ್ಪೆಕ್ಟರ್‌ ಎನ್‌. ಆರ್‌. ವೆಂಕಟೇಶ್‌ ಮತ್ತು ಪಿಎ ಸ್‌ಐ ಎಂ.ಸುಬ್ರಮಣಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಪರಿಶೀಲಿಸಿದಾಗ ಈತನ ಜೇಬಿ ನಲ್ಲಿಯೇ 10 ಎಟಿಎಂ ಕಾರ್ಡ್‌ ಗಳಿದ್ದವು. ರೂಂ ನಲ್ಲಿ ಸುಮಾರು 38 ಕಾರ್ಡ್‌ ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾ ರಣೆ ವೇಳೆ ಆರೋಪಿ ಇದು ವರೆಗೂ ನಗರದ ಸುಮಾರು ಆರೇಳು ಎಟಿಎಂ ಕೇಂದ್ರ ಗ ಳಲ್ಲಿ ಎಟಿಎಂ ಕಾರ್ಡ್‌ ಗಳನ್ನು ಬಳಸಿ 4-5 ಲಕ್ಷ ರೂ. ವಂಚಿಸಿರುವುದಾಗಿ ಹೇಳಿ ದ್ದಾ ನೆ ಎಂದು ಪೊಲೀಸರು ಹೇಳಿದರು.

ಕಮಿಷನ್‌ ಕೊಡುತ್ತಿದ್ದ: ಬೆಂಗಳೂರಿನಲ್ಲಿ ಹಣ ವಂಚಿಸಿ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದ ಆರೋಪಿ ಎಟಿಎಂ ಕಾರ್ಡ್‌ದಾರ ರಿಗೆ 2-3 ಸಾವಿರ ರೂ. ಕಮಿಷನ್‌ ಕೊಡುತ್ತಿದ್ದ. ಮುಂಗಡವಾಗಿ ಹಣ ಹಾಕಿದ ಕಾರ್ಡ್‌ದಾರರಿಂದ ಹಣ ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

4ನೇ ಬಾರಿಗೆ ಬೆಂಗಳೂರಿಗೆ :

ಈಗಾಗಲೇ ಆರೋಪಿ ಮೂರು ಬಾರಿ ಬೆಂಗಳೂರಿಗೆ ಬಂದು ವಿವಿಧ ಬ್ಯಾಂಕ್‌ ಗಳ ಎಟಿಎಂ ಕೇಂದ್ರ ಗಳಿಂದ ಸುಮಾರು 2-3 ಲಕ್ಷ ರೂ. ವಂಚಿಸಿ ಊರಿಗೆ ಹೋಗಿದ್ದಾನೆ. ಬಳಿಕ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರಿಯ ಚಿಕಿತ್ಸೆ ಆ ಹಣ ಬಳಸಿಕೊಂಡಿದ್ದಾನೆ. ಆದರೆ, ಆಕೆ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇದೀಗ ಮತ್ತೆ ಬೆಂಗಳೂರಿಗೆ ಬಂದು ವಂಚಿಸಲು ಮುಂದಾದಾಗ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.

ವಂಚನೆ ತಂತ್ರ ಕಲಿತಿದ್ದು ಹೇಗೆ? :

ವ್ಯವಸಾಯ ಮಾಡಿಕೊಂಡಿದ್ದ ದೀಪಕ್‌ ಈ ಹಿಂದೆ ಉತ್ತರ ಪ್ರದೇಶದಲ್ಲಿ ಒಮ್ಮೆ ಎಟಿಎಂ ಕೇಂದ್ರಕ್ಕೆ ಹೋಗಿ ಕಾರ್ಡ್‌ ಬಳ ಸು ವಾಗ ತಮಾಷೆಗೆ ನೋಡಲು ಹಣ ಬರುವ ಜಾಗದಲ್ಲಿ ಕೈಬೆರಳನ್ನು ಇಟ್ಟು ಹಣ ಪಡೆದುಕೊಂಡಿದ್ದಾನೆ. ಆನಂತರ ಮನೆಗೆ ಹೋಗಿ ನೋಡಿದಾಗ ತನ್ನ ಖಾತೆಯಿಂದ ಹಣ ಡ್ರಾ ಆಗಿರುವ ಯಾವುದೇ ಮಾಹಿತಿ ಬಂದಿಲ್ಲ. ಬಳಿಕ ಮತ್ತೂಮ್ಮೆ ಬಳಸಿ ಖಚಿತ ಪಡಿಸಿ ಕೊಂಡಿದ್ದಾನೆ. ಆನಂತರ ಆರೋ ಪಿ ಪರಿಚಯಸ್ಥರ ಎಟಿಎಂ ಕಾರ್ಡ್‌ಗಳನ್ನು ತಂದು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.