2 ತಿಂಗಳ ಮಗುವಿಗೆ ಹೊಡೆಯುತ್ತಿದ್ದಕ್ಕೆ 6 ವರ್ಷದ ಪುತ್ರನನ್ನೇ ಕೊಂದ ಮಾನಸಿಕ ಅಸ್ವಸ್ಥೆ.!
ವೇಲ್ನಿಂದ ಬಿಗಿದು ಪುತ್ರನ ಕೊಂದಳು
Team Udayavani, Dec 13, 2020, 12:12 PM IST
ಬೆಂಗಳೂರು: ಎರಡು ತಿಂಗಳ ತನ್ನ 2ನೇ ಮಗುವಿಗೆ ಹೊಡೆಯುತ್ತಿದ್ದಕ್ಕೆ ಕೋಪಗೊಂಡ ತಾಯಿ, 6 ವರ್ಷದ ಹಿರಿಯ ಪುತ್ರನನ್ನು ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಶನಿವಾರ ಪಟ್ಟಣಗೆರೆಯಲ್ಲಿ ನಡೆದಿದೆ.
ಪಟ್ಟಣಗೆರೆ ನಿವಾಸಿ ತೇಜ್ರಾಮ್, ದೇವಿ ಅವರ ಪುತ್ರ ಮನೀಶ್ (6) ಮೃತ ಬಾಲಕ. ಈ ಸಂಬಂಧ ಪತಿ ಕೊಟ್ಟ ದೂರಿನ ಮೇರೆಗೆ ಮಗುವಿನ ತಾಯಿ ದೇವಿ(26)ಯನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಮಾನಸಿಕ ಅಸ್ವಸ್ಥೆಯಂತೆ ಹೇಳಿಕೆ ನೀಡುತ್ತಿದ್ದಾಳೆ. ಹೀಗಾಗಿ ಆಕೆಯನ್ನು ವೈದ್ಯಕೀಯ ತಪಾಸಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದರು.
ಈ ಹಿಂದೆಯೂ ದೇವಿ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದರು. ಆಗ ಮಾನಸಿಕ ಖಿನ್ನತೆಗೆ ಸಂಬಂಧಿಸಿದಂತೆ ಚಿಕಿತ್ಸೆ ಕೊಡಿಸಲಾಗಿತ್ತು. ದಂಪತಿ,ಮಕ್ಕಳು ಮಾತ್ರ ಮನೆಯಲ್ಲಿ ವಾಸವಿದ್ದರು. ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಪೊಲೀಸರು ಹೇಳಿದರು.
ರಾಜಸ್ಥಾನದ ಜೋಧಪುರ ಮೂಲದ ತೇಜರಾಮ್ 8 ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದು, 7 ವರ್ಷಗಳ ಹಿಂದೆ ತನ್ನಊರಿನ ದೇವಿಯನ್ನು ಮದುವೆಯಾಗಿದ್ದರು. ಪಟ್ಟಣಗೆರೆಯಲ್ಲಿ ದಂಪತಿ ವಾಸವಾಗಿದ್ದು, ದಂಪತಿಗೆ 6 ವರ್ಷದ ಮನೀಶ್,2 ತಿಂಗಳ ಮಗು ಇದೆ. ತೇಜರಾಮ್ ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಹಿರಿಯ ವಿದ್ವಾಂಸ, ಉಡುಪಿ ಬನ್ನಂಜೆ ಗೋವಿಂದಾಚಾರ್ಯ ನಿಧನ
ಗಾಬರಿಗೊಂಡ ತೇಜ್ರಾಮ್, ಸಂಬಂಧಿಯೊಬ್ಬರ ನೆರವಿನಿಂದ ಮಗನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ಮಗು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಪುತ್ರನನ್ನು ಕೊಂದ ಪತ್ನಿ ವಿರುದ್ಧ ತೇಜ ರಾಮ್ ದೂರು ನೀಡಿದ್ದರು. ಈ ಸಂಬಂಧ ದೇವಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನೇ ಕೊಂದೆ ಎಂದ ಪತ್ನಿ :
ತೇಜ್ರಾಮ್ ಶನಿವಾರ ಎಂದಿನಂತೆ ಅಂಗಡಿಗೆ ಹೋಗಿದ್ದಾರೆ. ಮಧ್ಯಾಹ್ನ 12.45ರ ಸುಮಾರಿಗೆ ಪತಿ ಕರೆಮಾಡಿದ ಪತ್ನಿ, ಪುತ್ರ ಮನೀಶ್ ಅಸ್ವಸ್ಥಗೊಂಡಿದ್ದು, ಕೂಡಲೇ ಮನೆಗೆ ಬರುವಂತೆ ಹೇಳಿದ್ದಳು. ತೇಜ್ರಾಮ್ ಮನೆಗೆ ಹೋದಾಗ ಮನೀಶ್ ಪ್ರಜ್ಞೆ ತಪ್ಪಿಬಿ ದ್ದಿದ್ದ. ಪತ್ನಿಯನ್ನು ಪತಿ ಪ್ರಶ್ನೆ ಮಾಡಿದಾಗ, “ಮಗುವಿಗೆ ಮನೀಶ್ಹೊಡೆಯುತ್ತಿದ್ದ. ಸುಮ್ಮನಿರುವಂತೆ ಎಷ್ಟು ಹೇಳಿದರೂ ಆತ ಸುಮ್ಮ ನಾಗಿರಲಿಲ್ಲ. ಕೋಪಗೊಂಡು ಆತನ ಮೇಲೆ ಹಲ್ಲೆ ನಡೆಸಿ,ಹಾಸಿಗೆ ಮೇಲೆ ತಳ್ಳಿದಿಂಬಿನಿಂದ ಮುಖ ಉಸಿರುಗಟ್ಟಿಸಿದೆ. ಬಳಿಕ ವೇಲ್ನಿಂದ ಕತ್ತು ಬಿಗಿದೆ’ಎಂದು ಹೇಳಿದ್ದಾರೆ.