ಜಾಗತಿಕ ತಾಪಮಾನ ಇಳಿಕೆಗೆ ಭಾರತ ಮುಂದಾಳತ್ವ
Team Udayavani, Dec 4, 2018, 11:58 AM IST
ಬೆಂಗಳೂರು: ಜಾಗತಿಕ ತಾಪಮಾನ ಇಳಿಕೆಯ ವಿಚಾರದಲ್ಲಿ ಭಾರತ ಮುಂದಾಳತ್ವ ವಹಿಸಿಕೊಂಡಿದ್ದು, 2030ರ ವೇಳೆಗೆ ದಾಖಲೆ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಿ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೆ„ಡ್ ಪ್ರಮಾಣ ಕುಗ್ಗಿಸಿ ಜಾಗತಿಕ ತಾಪಮಾನ ಇಳಿಕೆಗೆ ಭಾರತದ ಪರವಾಗಗಿ ಕೊಡುಗೆ ನೀಡೋಣ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ವಿಶೇಷ ಕಾರ್ಯದರ್ಶಿ ಸಿದ್ಧಾಂತ ದಾಸ್ ತಿಳಿಸಿದರು.
ಮರ ವಿಜ್ಞಾನ ತಂತ್ರಜ್ಞಾನ ಸಂಸ್ಥೆ ವತಿಯಿಂದ ಸೋಮವಾರ ಜೆ.ಎನ್.ಟಾಟಾ ಸಭಾಂಗಣದಲ್ಲಿ ಆಯೋಜಿಸಿದ್ದ 14ನೇ “ರಾಷ್ಟ್ರೀಯ ವೃಕ್ಷ ಬೇಸಾಯ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಜಾಗತಿಕ ತಾಪಮನ ಕಡಿಮೆ ಮಾಡಲು ಪ್ರಪಂಚದ ಎಲ್ಲ ದೇಶಗಳು ಶ್ರಮಿಸುತ್ತಿವೆ. ಆ ನಿಟ್ಟಿನಲ್ಲಿಯೆ ಒಂದಿಷ್ಟು ದೇಶಗಳು ಸೇರಿಕೊಂಡು ಅಮೆರಿಕ ಮುಂದಾಳತ್ವದಲ್ಲಿ ಪ್ಯಾರಿಸ್ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆದರೆ, ಕಾರಣಾಂತರ ಈ ಒಪ್ಪಂದದಿಂದ ಅಮೆರಿಕ ಹೊರಬಂದಿತು. ಆ ಬಳಿಕ ಭಾರತ ಜಾಗತಿಕ ತಾಪಮಾನ ಇಳಿಕೆಯ ಮುಂದಾಳತ್ವ ವಹಿಸಿಕೊಂಡಿದೆ. ಅದರಂತೆ ದೇಶದಲ್ಲಿ ಅರಣ್ಯದ ಪ್ರಮಾಣ ಹೆಚ್ಚಿಸಿ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೆ„ಡ್ ಪ್ರಮಾಣ ಕಡಿಮೆ ಭಾರತದಲ್ಲಿ 2030ರ ವೇಳೆಗೆ 1.5 ಡಿಗ್ರಿ ತಾಪಮಾನ ಕಡಿಮೆ ಮಾಡಿ ಜಾಗತಿಕ ತಾಪಮಾನ ಇಳಿಕೆಗೆ ಭಾರತದ ಕೊಡುಗೆ ನೀಡೋಣ ಎಂದರು.
ಮೊದಲು ಭಾರತದಲ್ಲಿ ಎಲ್ಲೆಲ್ಲಿ ಕಾಡು ನಾಶಗೊಂಡಿದೆ ಎಂಬುದನ್ನು ಪತ್ತೆ ಹಚ್ಚಿದ ನಂತರ ಮಣ್ಣನ್ನು ಸಂಶೋಧನೆ ನಡೆಸಲಾಗುತ್ತದೆ. ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಬೆಳೆಯುವ ಮರಗಳನ್ನು ನೆಡಲಾಗುತ್ತದೆ. ರೋಗಗಳಿಗೆ ತುತ್ತಾದ ಮರಗಳನ್ನು ಪತ್ತೆ ಹಚ್ಚಿದ ಬಳಿಕ ಸಂಶೋಧನೆಗೆ ಒಳಪಡಿಸಿ ಅಗತ್ಯ ಮದ್ದು ಕಂಡು ಹಿಡಿಯಲಾಗುತ್ತದೆ. ಮುಂದೆ ರೋಗ ಹರಡದಂತೆ ಎಚ್ಚರವನ್ನೂ ವಹಿಸಲಾಗುತ್ತದೆ.
ಅರಣ್ಯ ಪ್ರದೇಶ ಹೆಚ್ಚಳ ಮಾಡುವುದಕ್ಕೆ ಹಾಗೂ ಮರಗಳ ಪೋಷಣೆಗೆ ನೂತನ ನಿಯಮ ರೂಪಿಸಲು ವಿಜ್ಞಾನಿಗಳ, ನೀತಿ ತಯಾರಕರು, ಶಿಕ್ಷಣ ಸಂಸ್ಥೆಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಂಶೋಧನಾ ಸಂಸ್ಥೆಗಳ ಜತೆಗೆ ಚರ್ಚೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಮರಗಳ ರಕ್ಷಣೆ ಕುರಿತು ನೂತನ ನಿಯಮಾವಳಿ ರೂಪಿಸಲಾಗುವುದು ಎಂದರು.
ರಾಜ್ಯ ಅರಣ್ಯ ಇಲಾಖೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಮಾತನಾಡಿ, ಅರಣ್ಯ ನಾಶ, ಒತ್ತುವರಿಯಿಂದಾಗಿ ಹವಾಮಾನ ವೈಪರಿತ್ಯದಂತಹ ಗಂಭೀರ ಸಮಸ್ಯೆ ಉಂಟಾಗುತ್ತಿದೆ. ಅರಣ್ಯ ನಾಶವನ್ನು ತಡೆಗಟ್ಟಲು ಸಮಾಜದ ಎಲ್ಲಾ ವ್ಯವಸ್ಥೆಗಳ ಒಗ್ಗಟ್ಟು ಅವಶ್ಯ. ಪ್ರಮುಖವಾಗಿ ರಾಜಕೀಯ ಒತ್ತಡಕ್ಕೆ ಮಣಿದು ಅರಣ್ಯ ನಾಶ ಮಾಡುವುದನ್ನು ಮೊದಲು ತಡೆಗಟ್ಟಬೇಕಿದೆ.
ಇತ್ತೀಚಿಗೆ ಕಾಡು ಪ್ರಾಣಿಗಳು ಅರಣ್ಯ ನಾಶದಿಂದ ಆಹಾರ ನೀರು ಹರಸಿ ನಗರ ಮತ್ತು ಗ್ರಾಮೀಣ ಭಾಗದ ಕಡೆ ಬರುತ್ತಿದ್ದು, ಇದರಿಂದ ಕಾಡುಪ್ರಾಣಿ ಮಾನವ ಸಂಘರ್ಷ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ “ಅರಣ್ಯ ನಾಶದಿಂದ ನಾವು ಎದುರಿಸುತ್ತಿರುವ ಸಮಸ್ಯೆಗಳೇನು” ಎಂಬುದರ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗುತ್ತದೆ.
ಜತೆಗೆ ಕಾಡಿನಲ್ಲಿ ನಶಿಸುತ್ತಿರುವ ಮರಗಳಿಗೆ ಪುನರ್ಜನ್ಮ ನೀಡುವ ವೃಕ್ಷಬೇಸಾಯ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಡೆಹ್ರಾಡೂನ್ನ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಆ್ಯಂಡ್ ಎಜುಕೇಷನ್ನ ಪ್ರಧಾನ ನಿರ್ದೇಶಕ ಡಾ.ಸುರೇಶ್ ಚಂದ್ರ ಗೈರೋಲಾ ಉಪಸ್ಥಿತರಿದ್ದರು.
ಇಂದು ವನ್ಯಜೀವಿ, ಅರಣ್ಯ, ಮರ ವಿಜ್ಞಾನ ಸಂಸ್ಥೆಗಳೆಲ್ಲವೂ ಬೇರೆ ಬೇರೆಯಾಗಿ ಕೆಲಸ ಮಾಡುತ್ತಿವೆ. ಅದರ ಬದಲು ಒಟ್ಟಿಗೆ ಕೆಲಸ ಮಾಡಿದರೆ, ಅರಣ್ಯ ಮತ್ತು ಅದಕ್ಕೆ ಸಂಬಂಧಿಸಿದ ಅಂಶಗಳ ನಾಶ ತಡೆಯಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಚಿಂತನೆ ನಡೆಸಬೇಕಿದೆ.
-ಪುನಾಟಿ ಶ್ರೀಧರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ