ರಮ್ಯಾ ವಿರುದ್ಧ ಮತ್ತೆ ಜಗ್ಗೇಶ್ ಟ್ವೀಟ್ ವಾರ್
Team Udayavani, Feb 8, 2018, 6:20 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪಾಟ್ (ಡ್ರಗ್ಸ್ ನಶೆ) ಪದ ಬಳಸಿದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಕಮ್ಯುನಿಕೇಷನ್ ಮುಖ್ಯಸ್ಥೆ ರಮ್ಯಾ ವಿರುದ್ಧ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಮತ್ತೆ ಟ್ವೀಟ್ ಸಮರ ಮುಂದುವರಿಸಿದ್ದಾರೆ.
ವಿರೋಧಿಗಳನ್ನು ಬಗ್ಗುಬಡಿಯಲು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು (ಫೇಕ್ ಅಕೌಂಟ್) ತೆರೆಯಿರಿ ಎಂದು ಕಾರ್ಯಕರ್ತರಿಗೆ ಪಾಠ ಮಾಡಿದ ರಮ್ಯಾ ವೀಡಿಯೋ ಬಹಿರಂಗವಾದ ಬೆನ್ನಲ್ಲೇ, ಫೇಕ್ಗಳ ತಾಳಕ್ಕೆ ಬಹುತೇಕರು ಟಿವಿ ಜಾಲತಾಣದಲ್ಲಿ..! ನರ್ತನ ಮಾಡಿಬಿಟ್ಟರಲ್ಲಾ..! ಕನ್ನಡ ಬರದ ಕನ್ನಡಿಗರು ಅಂತ ದುಃಖವಾಯಿತು ಎಂದು ಜಗ್ಗೇಶ್ ಟ್ವೀಟಿಸಿದ್ದಾರೆ. ಅಲ್ಲದೆ, ಬಯಲಾಯ್ತು ರಮ್ಯಾ ಫೇಕ್ ಅಕೌಂಟ್ ಕಥೆ ಎಂಬ ಸುದ್ದಿಯನ್ನೂ ಅವರು ರಿ ಟ್ವೀಟ್ ಮಾಡಿದ್ದಾರೆ. ಜತೆಗೆ ಫೇಕ್ಗಳ ಸತ್ಯ ಅರಿಯಲು ರಾಯರ ಅನುಗ್ರಹವಿದೆ ಅಂತ ಭಾವಿಸುವೆ ಎಂದು ಹೇಳಿದ್ದಾರೆ.
ಮತ್ತೂಂದು ಟ್ವೀಟ್ ಮಾಡಿರುವ ಜಗ್ಗೇಶ್, ಕಳೆದ ವಾರ ನನ್ನ ಶೂಟಿಂಗ್ ಜಾಗಕ್ಕೆ ಬಂದ ವ್ಯಕ್ತಿಯೊಬ್ಬರು ನಿಮಗೆ ಡಾಕ್ಟರೇಟ್ ಕೊಡಿಸ್ತೀನಿ. ಓಕೇನಾ ಎಂದ… ಕೇಳಿದವ ಕೆಎಸ್ಆರ್ಟಿಸೀಲಿ ಕಂಡಕ್ಟರ್. ನಾನು ನಕ್ಕು ಬೇಡಪ್ಪಾ, ಕನ್ನಡಿಗರು ಕೊಟ್ಟಿರುವ ನವರಸನಾಯಕ ಡಾಕ್ಟರೇಟ್ ಸಮ ಬೇರೊಂದಿಲ್ಲ ಎಂದು ಹೇಳಿ ಕಳುಹಿಸಿದೆ. ಈಗ ಡಾಕ್ಟರೇಟ್ ಬಿಕರಿ ಖಂಡಿತವಾಗಿ ಆಗುತ್ತಿದೆ.. ಫೇಕ್ ದುನಿಯಾ ಎಂದಿದ್ದಾರೆ.
ಅಲ್ಲದೆ, ತಾವು ರಮ್ಯಾ ಅವರ ಬಗ್ಗೆ ಈ ಹಿಂದೆ ಬಳಸಿದ್ದ ಪಲ್ಲಂಗ ಪದ ಬಳಕೆಗೆ ಟ್ವೀಟಿಗರು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪಲ್ಲಂಗ ಪದದ ಅರ್ಥಗಳಿರುವ ಪುಟಗಳನ್ನು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿರುವ ಜಗ್ಗೇಶ್, ಪಲ್ಲಂಗ ಎಂದರೆ ಪಲ್ಲಕ್ಕಿಯ ಕುರ್ಚಿ, ಪಲ್ಲಕ್ಕಿ, ಪಲ್ಲಕ್ಕಿಯ ಮೇಲೆ ಎಂಬ ಅರ್ಥ ಬರುತ್ತದೆ. ಈ ಪದವಿಟ್ಟುಕೊಂಡು ಎರಡು ದಿನ ಜೀವನ ಮಾಡಿದ ಮಹನೀಯರಿಗೆ ಧನ್ಯವಾದಗಳು.. ಕನ್ನಡ ಕಲಿಯಿರಿ! ಕನ್ನಡಿಗರೆಂದು ಬೀಗಿರಿ! ಪ್ರಚಾರ ಜೀವನವಲ್ಲಾ! ಸಾಧನೆ ಜೀವನ! ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಸತ್ಯಕ್ಕೆ ಸಾವಿಲ್ಲ… ಹೃದಯ ತುಂಬಿ ಬಂತು. ಧನ್ಯವಾದ ಪ್ರೀತಿಯ ಆತ್ಮಗಳಿಗೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?