ಜಗ್ಗೇಶ್‌ ಪುತ್ರನಿಗೆ ಇರಿತ: ಜನರೆಲ್ಲ ವಿಡಿಯೋ ನಿರತ


Team Udayavani, Aug 15, 2017, 11:15 AM IST

Gururaj-jaggesh.jpg

ಬೆಂಗಳೂರು: ಕಾರು ಡಿಕ್ಕಿಹೊಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ,ಚಿತ್ರನಟ ಹಾಗೂ ರಾಜಕಾರಣಿ ಜಗ್ಗೇಶ್‌ರ ಹಿರಿಯ ಪುತ್ರ ಗುರುರಾಜ್‌ಗೆ ಚಾಕುವಿನಿಂದ ಇರಿದು ದುಷ್ಕರ್ಮಿಯೊಬ್ಬ ಪರಾರಿಯಾಗಿದ್ದಾನೆ. ಸೋಮವಾರ ಬೆಳಗ್ಗೆ 8.45ರ ಸುಮಾರಿಗೆ ಆರ್‌.ಟಿ.ನಗರದ ಮಠದಹಳ್ಳಿಯ ಮೈದಾನ ರಸ್ತೆಯಲ್ಲಿ ಘಟನೆ ನಡೆದಿದೆ.

ಗಾಯಗೊಂಡ ಗುರುರಾಜ್‌ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಇತ್ತ ಕೃತ್ಯವೆಸಗಿರುವ ಆರೋಪಿ ಹೆಬ್ಟಾಳದ ಶಿವಶಂಕರ್‌ ಎಂದು ತಿಳಿದಿದೆ. ಸದ್ಯ ಈತ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ. ಹಲ್ಲೆಗೊಳಗಾದ ಗುರುರಾಜ್‌ ಪ್ರಕರಣ ದಾಖಲಿಸಿದ್ದು, ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?: ಜಗ್ಗೇಶ್‌ರ ಹಿರಿಯ ಪುತ್ರ ಗುರುರಾಜ್‌ ತಮ್ಮ ಮಗುವನ್ನು ಶಾಲೆಗೆ ಬಿಡಲು ಬೆಳಗ್ಗೆ 8.45ರ ಸುಮಾರಿಗೆ ತಮ್ಮ ಬಿಎಂಡೂÉé ಕಾರಿನಲ್ಲಿ ಹೋಗುವಾಗ ಆರ್‌.ಟಿ.ನಗರದ ಮಠದಹಳ್ಳಿಯ ಮೈದಾನ ರಸ್ತೆಯ ವೃತ್ತದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇತ್ತು. ಇದೇ ವೇಳೆ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದ ಆರೋಪಿ ಶಿವಶಂಕರ್‌, ಗುರುರಾಜ್‌ ಅವರ ಕಾರಿಗೆ ಡಿಕ್ಕಿಹೊಡೆದು ಅಷ್ಟೇ ವೇಗವಾಗಿ ಹೋಗಿದ್ದಾನೆ.

ಕೂಡಲೇ ಗುರುರಾಜ್‌ ಕಾರು ಹಿಂಬಾಲಿಸಿ  ಶಿವಶಂಕರ್‌ ಕಾರಿಗೆ ಅಡ್ಡ ಹಾಕಿ ಪ್ರಶ್ನಿಸಿದ್ದಾರೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸಿದ್ದಾರೆ. ಆಗ ಗುರು, ತಾನು ನಟ ಜಗ್ಗೇಶ್‌ ಪುತ್ರ ಎಂದು ಹೇಳಿಕೊಂಡಿದ್ದಾರೆ. ಆದರೂ ಸುಮ್ಮನಾಗದ ಆರೋಪಿ, ಯಾರಾದರೇನು ಎಂದು ಆಕ್ರೋಶಗೊಂಡು ಕಾರಿನಲ್ಲಿ ಇಟ್ಟಿದ್ದ ಚಾಕು ತಂದು ಹೊಟ್ಟೆಯ ಭಾಗಕ್ಕೆ ಚುಚ್ಚಲು ಯತ್ನಿಸಿದ್ದಾನೆ.

ಆಗ ತಪ್ಪಿಸಿಕೊಂಡ ಗುರುರಾಜ್‌ ಕಾಲಿಗೆ ಚಾಕು ತಗುಲಿದ್ದು, ಆರೋಪಿ ಪರಾರಿಯಾಗಿದ್ದಾನೆ. ರಕ್ತಸ್ರಾವದಿಂದ ಬಳಲುತ್ತಿದ್ದ ಗುರುರಾಜ್‌ರನ್ನು ಕಂಡ ಸ್ಥಳೀಯರೊಬ್ಬರು ಜಗ್ಗೇಶ್‌ ಅವರಿಗೆ ಕರೆ ಮಾಡಿ ವಿಷಯ ತಿಳಿಸಿ, ಗುರುರನ್ನು ನಂತರ ಆರ್‌.ಟಿ.ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ನಾಲ್ಕೈದು ಹೊಲಿಗೆ ಹಾಕಿದ್ದಾರೆ.

ಕೆಲ ಹೊತ್ತು ಅಲ್ಲೇ ವಿಶ್ರಾಂತಿ ಪಡೆರು ಗುರುರಾಜ್‌ ಮನೆಗೆ ತೆರಳಿದ್ದಾರೆ. ಗುರುರಾಜ್‌ ಆರೋಪಿಗಳ ಕಾರಿನ ನಂಬರ್‌ ಅನ್ನು ಬರೆದುಕೊಂಡಿದ್ದು, ಇದು ತನಿಖೆಗೆ ಸಹಕಾರಿಯಾಗಿದೆ. ಆರೋಪಿ ಬಗ್ಗೆ ಸುಳಿವು ಸಹ ಸಿಕ್ಕಿದ್ದು, ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರ್‌.ಟಿ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಆತ ಕ್ರೀಡಾಪಟು: “ದುಷ್ಕರ್ಮಿಗಳು ಇರಿದ ಚಾಕು ನನ್ನ ಮಗನ ಹೊಟ್ಟೆಗೆ ತಗುಲಬೇಕಿತ್ತು. ಆದರೆ ಆತ ಕ್ರೀಡಾಪಟುವಾಗಿದ್ದು, ಎಗರಿರುವುದರಿಂದ ತೊಡೆ ಭಾಗಕ್ಕೆ ತಗುಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಗುರು ಚೇತರಿಸಿಕೊಳ್ಳುತ್ತಿ¨ªಾನೆ. ಯಾವುದೇ ವೈಯಕ್ತಿಕ ದ್ವೇಶದಿಂದ ಹÇÉೆ ನಡೆದಿಲ್ಲ. ದುಷ್ಕರ್ಮಿ ಯಾರೇ ಇರಲಿ ಅವರನ್ನು ಹಿಡಿದು ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು,’ ಎಂದು ನಟ ಜಗ್ಗೇಶ್‌ ಹೇಳಿದ್ದಾರೆ.

ಎರಡು ಬಾರಿ ಹೇಳಿಕೆ ದಾಖಲು: ಘಟನೆ ಕುರಿತು ಗುರುರಾಜ್‌ರಿಂದ ಪೊಲೀಸರು ಎರಡು ಬಾರಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬೆಳಗ್ಗೆ ಒಮ್ಮೆ ಗುರುರಾಜ್‌ ದೂರು ನೀಡಿದ್ದು, ಹೇಳಿಕೆ ಪಡೆದುಕೊಂಡಿದ್ದರು. ಬಳಿಕ ಸಂಜೆ ತಾಯಿ ಪರಿಮಳಾ ಜಗ್ಗೇಶ್‌ ಜೊತೆ ಠಾಣೆಗೆ ಬಂದ ಗುರು ಮತ್ತೂಮ್ಮೆ ಹೇಳಿಕೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ತೆಗೆಯುತ್ತಿದ್ದ ಮಂದಿ: ದುಷ್ಕರ್ಮಿ ಗುರುರಾಜ್‌ಗೆ ಚಾಕುವಿನಿಂದ ಇರಿಯುವಾಗ ಸ್ಥಳದಲ್ಲಿ ಸಾಕಷ್ಟು ಮಂದಿ ಸ್ಥಳೀಯರು, ವಾಹನ ಸವಾರರು ಇದ್ದರು. ಆದರೆ ದೃಶ್ಯದ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುವಲ್ಲಿ ಬ್ಯುಸಿಯಾಗಿದ್ದ ಅವರೆಲ್ಲಾ, ಗುರು ನೆರವಿಗೆ ಧಾವಿಸಿಲ್ಲ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಗುರುರಾಜ್‌ ರಕ್ಷಣೆಗಾಗಿ ಅಂಗಲಾಚಿದರೆ ಒಬ್ಬರೂ ಸಹಾಯಕ್ಕೆ ಬಂದಿಲ್ಲ. ಅಲ್ಲದೇ ಆರೋಪಿಯು ಕೃತ್ಯವೆಸಗುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಸಂಗ್ರಹಿಸಿದ್ದು, ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹಾಯಕ್ಕೆ ಬನ್ನಿ-ಜಗ್ಗೇಶ್‌ ಮನವಿ: ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಜಗ್ಗೇಶ್‌, “ನನ್ನ ಮಗನ ಮೇಲೆ ದುಷ್ಕರ್ಮಿ ಚಾಕುವಿನಿಂದ ಹÇÉೆ ನಡೆಸುತ್ತಿದ್ದ ವೇಳೆ ಸಾರ್ವಜನಿಕರು ಸಹಾಯಕ್ಕೆ ಧಾವಿಸಬಹುದಿತ್ತು. ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ಗುರು ಇತ್ತೀಚೆಗೆ ಕ್ರೀಡೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು ಎಂದು ಶ್ರಮಿಸುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ದುರದೃಷ್ಟಕರ. ಇದೊಂದು ದುರಂಹಕಾರದ ಪರಮಾವಧಿ. ಸಮಾಜದಲ್ಲಿ ವಿಕೃತ ಮನಸ್ಥಿತಿ ತಾಂಡವಾಡುತ್ತಿದೆ. ಹೊಟ್ಟೆಯುರಿ ಹೆಚ್ಚಾಗಿದೆ,’.

“ಸಾರ್ವಜನಿಕರು ಇಂತಹ ಘಟನೆಗಳು ನಡೆದಾಗ ನೆರವಿಗೆ ಧಾವಿಸಬೇಕು. ಗುರು ನನ್ನ ಮಗ ಎಂದು ಈ ಮಾತು ಹೇಳುತ್ತಿಲ್ಲ. ಮುಂದೆ ನಿಮಗೂ ಇಂಥ ಕಷ್ಟ ಎದುರಾದಾಗ ಯಾರೂ ನಿಮ್ಮ ನೆರವಿಗೆ ಬಾರದಿದ್ದರೆ ನೊಂದಿಕೊಳ್ಳುವುದು ಬೇಡ. ಇದೊಂದು ಆಕಸ್ಮಿಕ ಘಟನೆ. ಆದರೆ, ಚಾಕು ಇಟ್ಟುಕೊಂಡು ಓಡಾಡುತ್ತಾರೆ ಎಂದರೆ ಅವರ ಹಿನ್ನೆಲೆ ಬೇರೆ ರೀತಿಯೇ ಇರುತ್ತದೆ. ನನಗೆ ಪೊಲೀಸರ ಮೇಲೆ ನಂಬಿಕೆ ಇದೆ. ಆರೋಪಿಯ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ. ಸದ್ಯದಲ್ಲೇ ಬಂಧಿಸುವ ಭರವಸೆಯನ್ನು ಸಹ ನೀಡಿದ್ದಾರೆ,’ ಎಂದು ಹೇಳಿದ್ದಾರೆ.

ಯಾವುದೇ ಕೃತ್ಯಗಳು ನಡೆಯುವಾಗ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿ, ವಾಟ್ಸಪ್‌ ಮತ್ತು ಟ್ವೀಟರ್‌ಗಳಲ್ಲಿ ಹರಿಬಿಡುವ ವಿಕೃತ ಮನೋಭಾವ ಹೆಚ್ಚಾಗುತ್ತಿದೆ. ಆದರೆ ಇಂತಹ ಪರಿಸ್ಥಿತಿಗಳಲ್ಲಿ ನೆರವಿಗೆ ಯಾರೂ ಧಾವಿಸುವುದಿಲ್ಲ,’ ಎಂದು ಜಗ್ಗೇಶ್‌ ಬೇಸರ ವ್ಯಕ್ತಪಡಿಸಿದರು.

ಘಟನೆಯಿಂದ ಮನಸ್ಸಿಗೆ ನೋವಾಗಿದೆ. ನಡು ರಸ್ತೆಯಲ್ಲೇ ಡ್ರ್ಯಾಗರ್‌ನಿಂದ ಇರಿಯುತ್ತಿದ್ದರೂ ಒಬ್ಬರೂ ನೆರವಿಗೆ ಬರಲಿಲ್ಲ. ನನ್ನ ಕಾರಿಗೆ ಆತ ಡಿಕ್ಕಿಹೊಡೆದು ಹೋದ. ಇದನ್ನು ಪ್ರಶ್ನಿಸಿದ್ದಕ್ಕೆ ತುಂಬಾ ಕೆಟ್ಟ ಶಬ್ಧಗಳಿಂದ ನಿಂದಿಸಿದ. ನಾನು ಜಗ್ಗೇಶ್‌ ಮಗ ಎಂದು ಹೇಳಿದೆ. ಆಗ ಆತ ಕಾರಿನನಿಂದ ಡ್ರ್ಯಾಗರ್‌ ತೆಗೆದು ಇರಿದಿದ್ದಾನೆ. ಹೊಟ್ಟೆಗೆ ಇರಿಯಲು ಯತ್ನಿಸಿದ. ಆದರೆ, ನಾನು ಜಂಪ್‌ ಮಾಡಿದೆ. ತೊಡೆಯ ಭಾಗಕ್ಕೆ ಚಾಕು ತಗುಲಿತು. 8 ಹೊಲಿಗೆ ಹಾಕಿದ್ದಾರೆ. ದೂರು ಕೊಟ್ಟಿದ್ದೇನೆ. ಆರೋಪಿಗಳನ್ನು ಪೊಲೀಸರು ಬಂಧಿಸುವ ಭರವಸೆ ಕೊಟ್ಟಿದ್ದಾರೆ.
-ಗುರುರಾಜ್‌, ಜಗ್ಗೇಶ್‌ ಪುತ್ರ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.