ಕೆಂಪೇಗೌಡ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಪರಿಷ್ಕರಣೆ
Team Udayavani, Apr 16, 2019, 3:00 AM IST
ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆರ್ಥಿಕ ನಿಯಂತ್ರಣ ಪ್ರಾಧಿಕಾರ ತನ್ನ ಬಳಕೆದಾರರ ಅಭಿವೃದ್ಧಿ ಶುಲ್ಕ(ಯುಡಿಎಫ್)ವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಅದು ಏಪ್ರಿಲ್ 16ರಿಂದ ಆಗಸ್ಟ್ 15 ರವರೆಗೆ ಜಾರಿಯಲ್ಲಿರುತ್ತದೆ ಎಂದು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರಿಮಾರರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವದೇಶಿ ನಿರ್ಗಮನಗಳಿಗೆ ಯುಡಿಎಫ್ ಅನ್ನು 139ರೂ. ನಿಂದ 306 ರೂ. ಮತ್ತು ಅಂತಾರಾಷ್ಟ್ರೀಯ ನಿರ್ಗಮನಗಳಿಗೆ 558 ರೂ.ನಿಂದ 1226 ರೂ.ಗೆ ಪರಿಷ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ(ಎಇಆರ್ಎ)ಏಪ್ರಿಲ್ 4ರಂದು ನೀಡಿರುವ ತಿದ್ದುಪಡಿ ಆದೇಶ ಆಧರಿಸಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಬಿ)ದ ಬಳಕೆದಾರರ ಅಭಿವೃದ್ಧಿ ಶುಲ್ಕ(ಯುಡಿಎಫ್)ವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು.
ಟೆಲಿಕಾಂ ಡಿಸ್ಪೂಟ್ಸ್ ಸೆಟಲ್ಮೆಂಟ್ ಆ್ಯಂಡ್ ಅಪಿಲೇಟ್ ಟ್ರಿಬ್ಯುನಲ್(ಟಿಡಿಎಸ್ಎಟಿ)2019ರ ಮಾರ್ಚ್ 14 ರಂದು ನೀಡಿದ ಮಧ್ಯಂತರ ಪರಿಹಾರದ ಆದೇಶದಡಿ ನಿಯಮಿತ 4 ತಿಂಗಳ ಅವಧಿಗೆ ಪರಿಷ್ಕಕರಣಾ ಶುಲ್ಕಗಳನ್ನು ಸಂಗ್ರಹಿಸಲು ಬಿಐಎಎಲ್ಗೆ ಅವಕಾಶ ನೀಡಲಾಗಿದೆ.
ಈ ಆದೇಶ 2019ರ ಏಪ್ರಿಲ್ 16ರಿಂದ ಜಾರಿಗೆ ಬರುವುದರ ಜೊತೆಗೆ ಸ್ವದೇಶಿ ನಿರ್ಗಮನಗಳಿಗೆ ಯುಡಿಎಫ್ ಅನ್ನು 139ರೂ.ನಿಂದ 306ರೂ.ಗೆ ಮತ್ತು ಅಂತಾರಾಷ್ಟ್ರೀಯ ನಿರ್ಗಮನಗಳಿಗೆ 558ರೂ.ನಿಂದ 1,226ರೂ. ಗೆ ಪರಿಷ್ಕರಿಸಲಾಗಿದೆ ಎಂದರು.
ಏಪ್ರಿಲ್ 16 ರಿಂದ ಆಗಸ್ಟ್ 15 ರವರೆಗೆ ಖರೀದಿಸಲಾದ ಟಿಕೆಟ್ಗಳ ಮೇಲೆ ಈ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ. ಈ ದಿನಾಂಕದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯುಡಿಎಫ್ ಹಳೇ ಮೊತ್ತಕ್ಕೆ ಹಿಂತಿರುಗಲಿದೆ.
ಹೆಚ್ಚುವರಿಯಾಗಿ ಸಂಗ್ರಹಿಸಲಾದ ನಿಧಿಯನ್ನು ಯೋಜನೆ ವಿಸ್ತರಣೆಯ ಬಂಡವಾಳ ವೆಚ್ಚ ಪೂರೈಸಲು ಬಳಸಲಾಗುವುದು. ಅಲ್ಲದೇ, ಈ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ನಗದು ಹರಿವನ್ನು ಬಿಐಎಎಲ್ಗೆ ಇದು ಪೂರೈಸಲಿದೆ ಎಂದು ಹೇಳಿದರು.
ಭಾರತದಲ್ಲಿನ ವೈಮಾನಿಕ ಕ್ಷೇತ್ರದ ಅಪಾರ ಬೆಳವಣಿಗೆಗೆ ಅಗತ್ಯ ಸೌಕರ್ಯಗಳನ್ನು ಪೂರೈಸಲು 13,000 ರೂ. ಮೊತ್ತದ ಸಾಮರ್ಥ್ಯ ವಿಸ್ತರಣೆ ನಡುವೆ ಬಹಳ ಅಗತ್ಯವಾದ ಪರಿಹಾರವನ್ನು ಶುಲ್ಕಗಳಲ್ಲಿನ ಈ ಹೆಚ್ಚಳ ಬಿಈಎಎಲ್ಗೆ ಪೂರೈಸಲಿದೆ. ಬಿಐಎಎಲ್ನ ಬೃಹತ್ ವಿಸ್ತರಣಾ ಯೋಜನೆಗೆ ಮುಂದುವರಿದ ಬೆಂಬಲಕ್ಕಾಗಿ ಟಿಡಿಎಸ್ಎಟಿ, ಎಇಆರ್ಎ ಮತ್ತು ಕರ್ನಾಟಕ ಸರ್ಕಾರಗಳಿಗೆ ನಾವು ವಂದನೆ ಸಲ್ಲಿಸುತ್ತೇವೆ.
ಎಇಆರ್ಎ ಕಡ್ಡಾಯ ಮಾಡಿರುವಂತಹ ಈ ನಾಲ್ಕು ತಿಂಗಳಲ್ಲಿ ಯುಡಿಎಫ್ ಹೆಚ್ಚಳದಿಂದ ಬರುವ ಹಣವನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗುವುದು. ಕೈಗೊಂಡಿರುವ ಮೂಲ ಸೌಕರ್ಯ ವಿಸ್ತರಣೆಗೆ ಮಾತ್ರ ಈ ನಿಧಿ ಬಳಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್