ದಾಖಲೆಗಳಿಗಾಗಿ ಬಿಎಸ್ವೈ ಆಪ್ತನಿಂದಲೇ ಕಿಡ್ನಾಪ್ ಸುಪಾರಿ
Team Udayavani, Aug 13, 2017, 11:20 AM IST
ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ವಿನಯ್ ಅಪಹರಣ ಮಾಡಲು ಸುಪಾರಿ ಕೊಟ್ಟಿದ್ದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತ ಸಂತೋಷ್ ಕುಮಾರ್ ಎಂದು ಪ್ರಕರಣದ ಪ್ರಮುಖ ಆರೋಪಿಗಳಾದ ಬಿಜೆಪಿ ಮೋರ್ಚಾದ ಕಾರ್ಯದರ್ಶಿ ರಾಜೇಂದ್ರ ಹಾಗೂ ರೌಡಿಶೀಟರ್ ಪ್ರಶಾಂತ್ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ್ದಾರೆ.
“ಈಶ್ವರಪ್ಪ ಅವರಿಗೆ ಸೇರಿದ ದಾಖಲೆಗಳು ವಿನಯ್ ಬಳಿಯಿದ್ದು, ಆತನನ್ನು ಅಪಹರಿಸಿ ಅಥವಾ ಹಲ್ಲೆ ನಡೆಸಿಯಾದರೂ ಆತನ ಬಳಿಯಿರುವ ಪೆನ್ಡ್ರೈವ್, ಲ್ಯಾಪ್ಟಾಪ್ ಮತ್ತು ಮೊಬೈಲ್ ಅನ್ನು ಕಸಿದುಕೊಳ್ಳುವಂತೆ ಸಂತೋಷ್ ಹೇಳಿದ್ದರು. ಅದರಂತೆ ನಾನು ರೌಡಿಶೀಟರ್ ಪ್ರಶಾಂತ್ ಹಾಗೂ ಸಹಚರರಿಗೆ ಸುಪಾರಿ ಕೊಟ್ಟಿದ್ದೆ, ವಿನಯ್ ಅಪಹರಣ ಮಾಡುವ ಸಂದರ್ಭದಲ್ಲಿ ನಾನು ಸ್ಥಳದಲ್ಲೇ ಇದ್ದೆ. ಏಕೆಂದರೆ, ವಿನಯ್ ಹಿಂಬಾಲಿಸುತ್ತಿದ್ದ ಪ್ರಶಾಂತ್ ತಂಡವನ್ನು ನಾನು ಬೈಕ್ನಲ್ಲಿ ಫಾಲೋ ಮಾಡುತ್ತಿದ್ದೆ.
ಈ ರೀತಿ ಮಾಡಲು ಯಾವುದೇ ಹಣ ಪಡೆದುಕೊಂಡಿಲ್ಲ. ಆದರೆ, ಭವಿಷ್ಯದಲ್ಲಿ ರಾಜಕೀಯದಲ್ಲಿ ಅವಕಾಶ ಕೊಡಿಸುವುದಾಗಿ ಸಂತೋಷ್ ಆಶ್ವಾಸನೆ ಕೊಟ್ಟಿದ್ದರು. ಜತೆಗೆ ಕೆಲ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಿಕೊಡುವಂತೆ ಮನವಿ ಮಾಡಿದ್ದೇ. ಈ ವಿಚಾರ ದೊಡ್ಡವರಿಗೆ(ಬಿಎಸ್ವೈ) ಗೊತ್ತಿಲ್ಲ’ ಎಂದು ರಾಜೇಂದ್ರ ಎಸಿಪಿ ಬಡಿಗೇರ್ ನೇತೃತ್ವದ ತಂಡದ ಮುಂದೆ ಹೇಳಿಕೆ ನೀಡಿದ್ದಾನೆ.
ರೌಡಿಶೀಟರ್ ಪ್ರಶಾಂತ್ ತಪ್ಪೊಪ್ಪಿಗೆ
ಇತ್ತೀಚೆಗೆ ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನಾನು(ಪ್ರಶಾಂತ್), ಸ್ನೇಹಿತರಾದ ಇಂದ್ರ, ಕಿಶೋರ್, ಅಯೂಬ್, ಉಮಾಶಂಕರ್ ಮತ್ತು ಸೆಲ್ವಾ ಹೋಗಿದ್ದೆವು. ಆಗ ಇಂದ್ರ, ರಾಜೇಂದ್ರ ಅವರ ಕೆಲಸ ಮಾಡಿಕೊಡಬೇಕು ಎಂದು ಪ್ರತ್ಯೇಕವಾಗಿ ಕರೆದೊಯ್ದು ಕೇಳಿಕೊಂಡಿದ್ದ. ನಂತರ ರಾಜೇಂದ್ರ ಮತ್ತೂಮ್ಮೆ ಪ್ರತ್ಯೇಕವಾಗಿ ಕರೆದೊಯ್ದು ಈಶ್ವರಪ್ಪ ಅವರ ಜತೆಯಲ್ಲಿರುವ ವ್ಯಕ್ತಿ(ವಿನಯ್) ಬಳಿ ಲ್ಯಾಪ್ಟಾಪ್, ಪೆನ್ಡ್ರೈವ್ ಮತ್ತು ಮೊಬೈಲ್ ಕಸಿದುಕೊಂಡು ಬರಬೇಕು ಎಂದಿದ್ದರು.
ಇದಕ್ಕೆ ಪ್ರತಿಯಾಗಿ ನನ್ನ ಮೇಲಿರುವ ಎಲ್ಲ ರೌಡಿಶೀಟರ್ ಪ್ರಕರಣಗಳನ್ನು ತೆಗೆಸುತ್ತೇನೆ ಎಂದಿದ್ದರು. ನಂತರ ಸಂತೋಷ್ನನ್ನು ರಾಜೇಂದ್ರ ಪರಿಚಯಿಸಿಕೊಟ್ಟ. ಅದರಂತೆ ಮೇ 10ರಂದು ಬೆಳಗ್ಗೆಯೇ ವಿನಯ್ ಮನೆಗೆ ಹೋಗಿದ್ದೆವು. ಸುಮಾರು 10 ಗಂಟೆ ಸುಮಾರಿಗೆ ಮನೆಯಿಂದ ಹೊರಟ ವಿನಯ್ನನ್ನು ನಾವುಗಳು ಕಾರಿನಲ್ಲಿ ಫಾಲೋ ಮಾಡಿಕೊಂಡು ಹೊರಟೆವು. ನಂತರ ರಾಜೇಂದ್ರ ಬೈಕ್ನಲ್ಲಿ ನಮ್ಮನ್ನು ಹಿಂಬಾಲಿಸುತ್ತಿದ್ದ.
ಮಲ್ಲೇಶ್ವರಂ ಸೇರಿದಂತೆ ಹತ್ತಾರು ಕಡೆ ವಿನಯ್ ಹಿಂದೆ ಓಡಾಡಿದೆವು. ಇಸ್ಕಾನ್ ದೇವಾಲಯದ ಬಳಿಯ ಮನೆಯೊಂದಕ್ಕೆ ವಿನಯ್ ಹೋಗಿದ್ದರು. 3 ಗಂಟೆಗಳಾದರೂ ಹೊರಗಡೆ ಬರಲಿಲ್ಲ. ಈ ವೇಳೆ ರಾಜೇಂದ್ರ ಬಂದು ನಮ್ಮ ಕಾರಿನ ಚಾಲಕನಿಗೆ ಈಗಲೇ ಅಪಹರಣ ಮಾಡಬೇಕು ಎಂದು ಸೂಚಿಸಿ ಹೊರಟ. ಬಳಿಕ ಆ ಮನೆಯಿಂದ ಹೊರಬಂದ ವಿನಯ್ನನ್ನು ಹಿಂಬಾಲಿಸಿ ಇಸ್ಕಾನ್ ದೇವಾಲಯದ ವಿನಯ್ ಕಾರಿಗೆ ಡಿಕ್ಕಿಹೊಡೆಸಲಾಯಿತು.
ಬಳಿಕ ಚಾಲಕನೊಂದಿಗೆ ಜಗಳ ತೆಗೆದಾಗ ವಿನಯ್ ಕಾರಿನಿಂದ ಕೆಳಗಿಳಿದು ಮಾತನಾಡಲು ಬಂದರು. ಆಗ, ವಿನಯ್ನನ್ನು ಉಮಕಾಂತ್ ಸೇರಿದಂತೆ ನಾವೆಲ್ಲ ಬಲವಂತವಾಗಿ ಕಾರಿನೊಳಗೆ ಕೂರಿಸಿಕೊಳ್ಳಲು ಯತ್ನಿಸಿದೆವು. ಆದರೆ, ಆತ ಜೋರಾಗಿ ಕೂಗಿಕೊಂಡದ್ದರಿಂದ ಸಾಧ್ಯವಾಗಲಿಲ್ಲ. ಈ ವೇಳೆ ರಾಜೇಂದ್ರ ಕೊಟ್ಟಿದ್ದ ಪೆಪ್ಪರ್ ಸ್ಪ್ರೆ„ ಹಾಗೂ ಹಾಕಿ ಬ್ಯಾಟ್ನ್ನು ಬಳಸಲಿಲ್ಲ. ಕೂಡಲೇ ಅಲ್ಲಿಂದ ಎಲ್ಲರೂ ಪರಾರಿಯಾದೆವು. ದೇವನಹಳ್ಳಿಯಲ್ಲಿ ಎಲ್ಲರನ್ನು ಡ್ರಾಪ್ ಮಾಡಿ ನಾನು ಮನೆಗೆ ಹೋದೆ.
ಒಂದೆರಡು ದಿನಗಳ ಬಳಿಕ ಕಿಶೋರ್ ಸಹೋದರ ಕರೆ ಮಾಡಿ ಕಿಶೋರ್ನನ್ನು ಬಂಧಿಸಲಾಗಿದೆ. ನಿನ್ನ ಹೆಸರು ಕೇಳಿ ಬರುತ್ತಿದೆ. ತಲೆಮರೆಸಿಕೊಳ್ಳುವಂತೆ ಸಲಹೆ ನೀಡಿದ. ಅದರಂತೆ ನಾನು ತಿರುಪತಿ, ಧರ್ಮಪುರಿ ಸೇರಿದಂತೆ ತಮಿಳುನಾಡಿನ ನಾನಾ ಕಡೆ ತಲೆಮರೆಸಿಕೊಂಡಿದ್ದೆ. ಈ ವೇಳೆ ಅನಾರೋಗ್ಯ ಉಂಟಾಗಿ ಕೋಲಾರಕ್ಕೆ ಬಂದೆ, ಸ್ನೇಹಿತನ ಬಳಿ 300 ರೂ. ಪಡೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಿತ್ರಮಂದಿರದಲ್ಲಿ ಡಿಜೆ ಸಿನಿಮಾ ನೋಡುವಾಗ ಪೊಲೀಸರು ಬಂದು ಬಂಧಿಸಿದರು ಎಂದು ಹೇಳಿಕೆ ದಾಖಲಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ