ಪೊಲೀಸ್ ಆಯಕ್ತರ ಕಚೇರಿ ಬಳಿ ಲಕ್ಷಾಂತರ ರೂ. ಕಳ್ಳತನ: ಆರೋಪಿಗಳು ಪರಾರಿ
Team Udayavani, Jul 24, 2022, 12:05 PM IST
ಬೆಂಗಳೂರು: ಪೊಲೀಸ್ ಆಯುಕ್ತರ ಕಚೇರಿ ಸಮೀಪದಲ್ಲಿಯೇ ಕಾರಿನ ಗಾಜು ಹೊಡೆದು ಲಕ್ಷಾಂತರ ರೂ. ದೋಚಿರುವ ಘಟನೆ ನಡೆದಿದೆ.
ಕ್ಯಾಟರಿಂಗ್ ವ್ಯವಹಾರ ಮಾಡುವ ಲಕ್ಷ್ಮೀಶ ಎಂಬವರು ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಕ್ಷ್ಮೀಶ ಮನೆ ಕಟ್ಟಲು ಸಾಲ ಪಡೆದುಕೊಂಡಿದ್ದರು. ಅದರ ಮಾಸಿಕ ಕಂತು ಕಟ್ಟಲು 3 ದಿನಗಳ ಹಿಂದೆ ಮಹದೇವರಪುರದ ಬ್ಯಾಂಕ್ಗೆ ಹೋಗಿದ್ದರು. ಆದರೆ, ಪಾನ್ಕಾರ್ಡ್ ಮರೆತು ಬಂದಿರುವುದು ಗೊತ್ತಾಗಿ, ವಾಪಸ್ ಮನೆಗೆ ಬರುವ ಮಾರ್ಗ ಮಧ್ಯೆ ಅಲಿ ಆಸ್ಕರ್ ರಸ್ತೆಯಲ್ಲಿರುವ ಮಾಪನ ಇಲಾಖೆಗೆ ಹೋಗಲು ಆಯುಕ್ತರ ಕಚೇರಿ ರಸ್ತೆಯಲ್ಲಿ ಕಾರು ಪಾರ್ಕಿಂಗ್ ಮಾಡಿ ಇಲಾಖೆಗೆ ಹೋಗಿದ್ದಾರೆ.
ಇದನ್ನೂ ಓದಿ: ಚಿತ್ತೂರು ಭೀಕರ ಅಪಘಾತ: ಇತ್ತೀಚೆಗಷ್ಟೇ ಶಿವಾಜಿನಗರ ಠಾಣೆಗೆ ವರ್ಗವಾಗಿದ್ದ ಪಿಎಸ್ ಐ ಅವಿನಾಶ್!
ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿರುವ ನಾಲ್ವರು ಆರೋಪಿಗಳು ಕಾರಿನ ಗಾಜು ಒಡೆದು ಕಾರಿನ ಸೀಟ್ ಮೇಲಿಟ್ಟಿದ್ದ 4.5 ಲಕ ರೂ. ದೋಚಿ ಪರಾರಿಯಾಗಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಗಾಜು ಒಡೆದಿದ್ದನ್ನು ನೋಡಿ, ಹಣದ ಬ್ಯಾಗ್ಗಾಗಿ ಎಲ್ಲೆಡೆ ಹುಡುಕಿದ್ದಾರೆ. ಕಳವು ಗೊತ್ತಾಗುತ್ತಿದ್ದಂತೆ ಠಾಣೆಗೆ ದೂರು ನೀಡಿದ್ದಾರೆ. ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ದ್ವಿಚಕ್ರವಾಹನದಲ್ಲಿ ಬಂದು ಕೃತ್ಯ ವೆಸಗಿರುವುದು ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ