ಏರೋ ಶೋ: ಪ್ರದರ್ಶನ ಪ್ರದೇಶಕ್ಕೆ ಕತ್ತರಿ

2019ರಲ್ಲಿ 28,398 ಚ.ಮೀ.: 2021ರಲ್ಲಿ 23,000 ಚ.ಮೀ. |ಈ ಬಾರಿ ದೇಶೀಯ ಪ್ರದರ್ಶಕರೇ ಹೆಚ್ಚು

Team Udayavani, Dec 1, 2020, 12:15 PM IST

ಏರೋ ಶೋ: ಪ್ರದರ್ಶನ ಪ್ರದೇಶಕ್ಕೆ ಕತ್ತರಿ

ಬೆಂಗಳೂರು: ಬರುವ ಫೆಬ್ರವರಿಯಲ್ಲಿ ನಡೆಯಲಿರುವ “ಲೋಹದ ಹಕ್ಕಿಗಳ ಸಂತೆ’ಗೆಈಗಿನಿಂದಲೇ ಸಿದ್ಧತೆ ನಡೆದಿದ್ದು, ಕಳೆದ ಬಾರಿಗೆ ಹೋಲಿಸಿದರೆ 13ನೇ ಆವೃತ್ತಿಯಲ್ಲಿ ಪ್ರದರ್ಶನದ ಪ್ರದೇಶಕ್ಕೆಕತ್ತರಿ ಬೀಳಲಿದೆ.

ಜಾಗತಿಕ ಮಹಾಮಾರಿ ಕೋವಿಡ್ ಹಾವಳಿ ನಡುವೆಯೂ ಏಷ್ಯಾದ ಅತಿದೊಡ್ಡ ಪ್ರದರ್ಶನ “ಏರೋ ಇಂಡಿಯಾ ಶೋ’ದಲ್ಲಿ ತಮ್ಮ ಉತ್ಪನ್ನಗಳ ಪ್ರದರ್ಶನಕ್ಕೆ ಭಾಗವಹಿಸಲು ಪ್ರದರ್ಶಕರು ಉತ್ಸುಕರಾಗಿದ್ದಾರೆ. ಪರಿಣಾಮ ಪ್ರದರ್ಶನಕ್ಕೆಮೀಸಲಿಟ್ಟ ಒಟ್ಟಾರೆ ಪ್ರದೇಶದ ಪೈಕಿ ಈಗಾಗಲೇ ಶೇ.97ರಷ್ಟು ಭರ್ತಿ ಆಗಿದೆ. ಕೇವಲ ಶೇ.1ರಷ್ಟು ಬಾಕಿ ಇದೆ. ಇದರಲ್ಲಿ ವಿದೇಶಿ ಪ್ರದರ್ಶಕರು 53 ಇದ್ದು, ದೇಶೀಯಕಂಪನಿಗಳು ಅತಿ ಹೆಚ್ಚು423 ಇವೆ. ಆದರೆ, 2019ರಲ್ಲಿ ನಡೆದ 12ನೇ ಆವೃತ್ತಿಗೆ ಹೋಲಿಸಿದರೆ, ಸುಮಾರು 5 ಸಾವಿರ ಚದರ ಮೀಟರ್‌ಗೂ ಹೆಚ್ಚು ಪ್ರದರ್ಶನ ಪ್ರದೇಶಕ್ಕೆಕತ್ತರಿ ಬೀಳಲಿದೆ.

2019ರ ಪ್ರದರ್ಶನದಲ್ಲಿ ಸುಮಾರು 28,398 ಚದರ ಮೀಟರ್‌ ಪ್ರದೇಶವನ್ನು ಪ್ರದರ್ಶನಕ್ಕಾಗಿಮೀಸಲಿಡಲಾಗಿತ್ತು. ಇದರಲ್ಲಿ ಹಾಲ್‌-“ಎ’ಯಿಂದ “ಜಿ’ವರೆಗೂ ಮಳಿಗೆಗಳು ತಲೆಯೆತ್ತಿದ್ದವು. ಅದರಲ್ಲಿ ಬಹುತೇಕ 3ತಿಂಗಳು ಮುಂಚಿತವಾಗಿಯೇ ಬುಕ್ಕಿಂಗ್‌ ಕೂಡ ಆಗಿದ್ದವು. ಆದರೆ, ಈ ಬಾರಿ ಹಾಲ್‌-ಎಯಿಂದ “ಇ’ವರೆಗೆ ಮಳಿಗೆಗಳನ್ನು ತೆರೆಯಲಾಗಿದೆ.

ಇದನ್ನೂ ಓದಿ :ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಭಾಷೆ ಬಿಟ್ಟು ಇತರ ಭಾಷೆಗೆ ಮನ್ನಣೆ : ಕಸಾಪ ತೀವ್ರ ಆಕ್ಷೇಪ

ಉಳಿದೆರಡು (ಎಫ್ ಮತ್ತು ಜಿ) ಸಭಾಂಗಣ ಕಾಯ್ದಿರಿಸಲಾಗಿದೆ. ಅವುಗಳ ಗಾತ್ರ ಸುಮಾರು 6 ಸಾವಿರ ಚದರ ಮೀಟರ್‌ ಆಗಿದೆ. ಜಾಗತಿಕವಾಗಿ ಕೋವಿಡ್ ಸೋಂಕು ಇರುವುದರಿಂದ ನಿರೀಕ್ಷಿತಪ್ರಮಾಣದಲ್ಲಿ ಕಂಪನಿಗಳು ಭಾಗವಹಿಸುವುದು ಅನು ಮಾನ ಎಂದು ವಿಶ್ಲೇಷಿಸಲಾಗುತ್ತಿದೆ. ಖಾಲಿ ಉಳಿದಿ ರುವ ಜಾಗ ಆ ಅನುಮಾನವನ್ನು ಸೂಚಿಸುತ್ತದೆ. ಆದರೆ, ಏರೋ ಇಂಡಿಯಾ ಶೋಗೆ ಇನ್ನೂ ಬರೋಬ್ಬರಿ 3 ತಿಂಗಳು ಬಾಕಿ ಇದೆ. ಅಷ್ಟೊತ್ತಿಗೆ ಸೋಂಕಿನ ಹಾವಳಿ ತಗ್ಗಬಹುದು. ಆಗ ಮತ್ತಷ್ಟು ಕಂಪನಿಗಳು ಭಾಗವಹಿಸಲು ಮನಸ್ಸು ಮಾಡಬಹುದು. ಕೆಲವು ರಷ್ಯಾ, ಇಂಗ್ಲೆಂಡ್‌ನ‌ ಏರೋಬ್ಯಾಟಿಕ್‌ ತಂಡಗಳು ಭಾಗವಹಿಸುವ ಬಗ್ಗೆ ಇನ್ನೂ ದೃಢಪಡಿಸಿಲ್ಲ. ಜನವರಿ ಮಧ್ಯೆ ಖಾತ್ರಿಪಡಿಸುವುದಾಗಿ ಹೇಳಿವೆ. ಇನ್ನು ಪ್ರದರ್ಶನಕ್ಕೆ ಬರುವ ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿ ಕೊರೊನಾ ನಿರ್ವಹಣೆಗೆ ದೊಡ್ಡ ಪ್ರಮಾಣದಲ್ಲಿ ಜಾಗದ ಅವಶ್ಯಕತೆ ಇದೆ ಎಂದೂ ಅಧಿಕಾರಿಗಳು ತಿಳಿಸುತ್ತಾರೆ.

ಆಕರ್ಷಣೆ ಕೇಂದ್ರ ಬಿಂದು: ಫ್ರಾನ್ಸ್‌ ರಫಾಯಲ್‌ ಯುದ್ಧ ವಿಮಾನ, ಭಾರತದ ಸೂರ್ಯಕಿರಣ್‌, ಸಾರಂಗ್‌, ಬಹುಪಯೋಗಿ ಸುಧಾರಿತ ಯುದ್ಧ ಹೆಲಿಕಾಪ್ಟರ್‌ಗಳಾದ “ಚಿನೂಕ್‌’ ಮತ್ತು “ಅಪಾಚಿ’ 13ನೇ ಏರೋ ಇಂಡಿಯಾ ಶೋದ ಪ್ರಮುಖ ಆಕರ್ಷಣೆ ಆಗಿರಲಿವೆ. ಇಂಗ್ಲೆಂಡ್‌ನ‌ ಯಾಕೊಲೇವ್ಸ್‌ ಏರೋಬ್ಯಾಟಿಕ್‌ ತಂಡ ಭಾಗವಹಿಸುವುದು ಇನ್ನೂ ಖಾತ್ರಿ ಇಲ್ಲ.

ಆತ್ಮನಿರ್ಭರ ಪುಷ್ಟಿ? :  ಇದರೊಂದಿಗೆ ದೇಶೀಯಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದೂ ಸ್ವಾಗತಾರ್ಹ ಬೆಳವಣಿಗೆ. ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ನೀತಿ ಪ್ರೋತ್ಸಾಹದಾಯಕ. ಅದರಂತೆ ರಕ್ಷಣಾಕ್ಷೇತ್ರಕ್ಕೆ ಸಂಬಂಧಿಸಿದ101 ಉಪಕರಣಗಳ ತಯಾರಿಕೆ ಮತ್ತು ಪೂರೈಕೆಕಡ್ಡಾಯವಾಗಿ ದೇಶೀಯ ಕಂಪನಿಗಳಿಗೇ ನೀಡಲು ನಿರ್ಧರಿಸಲಾಗಿದೆ. ಇದು ಹೆಚ್ಚು-ಕಡಿಮೆ4 ಲಕ್ಷಕೋಟಿ ಮೊತ್ತದ್ದಾಗಿದೆ. ಮುಂದಿನ 5 ರಿಂದ 7 ವರ್ಷಗಳಲ್ಲಿ ಹಂತ-ಹಂತವಾಗಿ ಪೂರೈಕೆ ಆಗಲಿದೆ. ಇದರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ, ಲಘು ಯುದ್ಧವಿಮಾನ, ಲಘು ಯುದ್ಧ ಹೆಲಿಕಾಪ್ಟರ್‌, ಮಾನವ ರಹಿತ ಯುದ್ಧ ವಿಮಾನದಂತಹ ಮುಂದುವರಿದ ತಂತ್ರಜ್ಞಾನಗಳ ಉಪಕರಣಗಳೂ ಇವೆ.

 ವಿದೇಶಿ ಕಂಪನಿಗಳ ನೀರಸ ಪ್ರತಿಕ್ರಿಯೆ :  2019ರ ಪ್ರದರ್ಶನದಲ್ಲಿ ಭಾಗವಹಿಸಿದ್ದ ಒಟ್ಟಾರೆ403 ಪ್ರದರ್ಶಕರಲ್ಲಿ ಶೇ.40ರಷ್ಟು ಅಂದರೆ165 ವಿದೇಶಿಗರು ಇದ್ದರು. ಆದರೆ, 2021ರಲ್ಲಿ ಈ ಸಂಖ್ಯೆಕೇವಲ 37ಕ್ಕೆ (ಸದ್ಯದ ಅಂಕಿ-ಅಂಶ)ಕುಸಿದಿದ್ದು,11 ದೇಶಗಳು ಭಾಗವಹಿಸುತ್ತಿವೆ. ಈಗಲೂ ವಿಶ್ವದ ಹಲವು ದೇಶಗಳಲ್ಲಿ ಕೋವಿಡ್ ಹಾವಳಿ ತೀವ್ರವಾಗಿದ್ದು, ಲಂಡನ್‌, ಫ್ರಾನ್ಸ್‌, ಜರ್ಮನಿ, ಇಟಲಿ, ಪೋರ್ಚುಗಲ್‌, ದಕ್ಷಿಣ ಕೊರಿಯಾ ಆಯ್ದ ಭಾಗಗಳಲ್ಲಿ2ನೇ ಹಂತದ ಲಾಕ್‌ಡೌನ್‌ ಜಾರಿ ಗೊಳಿಸಿವೆ. ಪರಿಸ್ಥಿತಿ ಹೀಗಿರುವಾಗ, ವಿದೇಶಿ ಕಂಪನಿಗಳ ನೀರಸ ಪ್ರತಿಕ್ರಿಯೆ ನಿರೀಕ್ಷಿತವಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

 

-ವಿಶೇಷ ವರದಿ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.