ಸಮಸ್ಯೆಗಳ ಕೂಪವಾಗಿದೆ ನಾಯಂಡಹಳ್ಳಿ
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಬಿಬಿಎಂಪಿ | ಮಳೆ ಬಂತೆಂದರೆ ಮತ್ತೆ ಅನಾಹುತಗಳು ಕಟ್ಟಿಟ್ಟ ಬುತ್ತಿ
Team Udayavani, Aug 10, 2019, 9:08 AM IST
ಬೆಂಗಳೂರು: ಇಲ್ಲಿ ಬೀದಿ ದೀಪಗಳಿಲ್ಲ. ರಸ್ತೆಯಲ್ಲಂತೂ ಗುಂಡಿಗಳೇ ಹೆಚ್ಚು. ಜತೆಗೆ ಸಂಚಾರ ದಟ್ಟಣೆ, ಕಳ್ಳರ ಹಾವಳಿ ಇರುವುದೂ ಇಲ್ಲೇ. ಕೊನೆಗೆ ನಗರದಲ್ಲಿ ಮಳೆಬಂದರೂ ದಿಢೀರ್ ನೆರೆಗೆ ತುತ್ತಾಗುವುದು ಇದೇ ಪ್ರದೇಶ.
ಅದು ನಾಯಂಡಹಳ್ಳಿ. ಸಮಸ್ಯೆಗಳ ಕೂಪವಾದರೂ ಈ ಭಾಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದು, ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈಗ ಮತ್ತೆ ಮಳೆಗಾಲ ಬಂದಿದ್ದು, ಈ ವರ್ಷವೂ ಜನರಿಗೆ ಗೋಳು ತಪ್ಪಿದ್ದಲ್ಲ. ಕಾರಣ, ಪಾಲಿಕೆ ಈ ಬಾರಿಯೂ ಚರಂಡಿ ಸ್ವಚ್ಛತೆ, ಸ್ಲ್ಯಾಬ್ ಅಳವಡಿಕೆ, ಗುಂಡಿ ಮುಚ್ಚುವುದು, ಬೀದಿ ದೀಪಗಳ ಅಳವಡಿಕೆಯಂತಹ ಯಾವ ಮುನ್ನೆಚ್ಚಕೆ ಕ್ರಮವನ್ನೂ ಕೈಗೊಂಡಿಲ್ಲ.
ಇದರ ನೇರ ಪರಿಣಾಮ ನಾಯಂಡಹಳ್ಳಿಯ ಪಂತರಪಾಳ್ಯದಲ್ಲಿನ ಜನರು ಮೇಲಾಗುತ್ತಿದೆ. ಬೀದಿ ದೀಪ ಇಲ್ಲದೆ ಕಳ್ಳರ ಹಾವಳಿ, ಕಿಡಿಗೇಡಿಗಳ ಕಾಟ, ಸ್ವಚ್ಛಗೊಳ್ಳದ ಚರಂಡಿಗಳಿಂದ ದುರ್ವಾಸನೆ ಹೀಗೆ ಹಲವು ಸಮಸ್ಯೆಗಳು ಇಲ್ಲಿವೆ. ಜೋರು ಮಳೆ ಬಂದರೆ ನೀರು ರಸ್ತೆಗೆ ಬಂದು ಮನೆಗಳ ಮುಂದೆ ನಿಲ್ಲಲಿದೆ ಎಂಬ ಆತಂಕದಲ್ಲಿ ಜನ ಜೀವನ ನಡೆಸುತ್ತಿದ್ದಾರೆ.
ಕೆಲ ಚರಂಡಿಗಳಲ್ಲಿ ಹೂಳು ತೆಗೆದಿಲ್ಲ. ಇನ್ನೂ ಕೆಲವೆಡೆ ಹೂಳೆತ್ತಿದ್ದರೂ, ಸ್ಲ್ಯಾಬ್ ಜೋಡಿಸಿಲ್ಲ. ಮಕ್ಕಳು ರಸ್ತೆಯಲ್ಲೇ ಆಟವಾಡುವ ಕಾರಣ ಮಳೆ ಜೋರಾಗಿ, ಅವಘಡಗಳು ಸಂಭವಿಸುವ ಮುನ್ನ ಪಾಲಿಕೆ ಸದಸ್ಯರು ಮತ್ತು ವಾರ್ಡ್ ಎಂಜಿನಿಯರ್ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಸರವಣ.
ಪಂತರಪಾಳ್ಯದಲ್ಲಿ ಮಳೆನೀರು ಹರಿಯುವ ಚರಂಡಿಗೆ ಶೌಚ ನೀರು ಬಿಡುತ್ತಿದ್ದು, ಸುತ್ತಲಿನ ಪ್ರದೇಶಕ್ಕೆ ಅದರ ದುರ್ವಾಸನೆ ಹಬ್ಬಿದೆ. ಹೀಗಿರುವಾಗ ಹೂಳೆತ್ತಲು ಯಾರು ಮುಂದೆಬರುತ್ತಾರೆ ಎಂದು ಬಿಬಿಎಂಪಿ ಅಧಿಕಾರಿ ಪ್ರಶ್ನಿಸಿದ್ದಾರೆ. ಪಂತರಪಾಳ್ಯ ಕೊಳಗೇರಿಯಲ್ಲಿ ಕಳ್ಳರ ಹಾವಳಿ, ಕಿಡಿಗೇಡಿಗಳ ಕಾಟವಿರುವ ಕಾರಣ ಹೊಯ್ಸಳ ವಾಹನ ದಿನದ 24 ಗಂಟೆಯೂ ನಾಯಂಡಹಳ್ಳಿಯಿಂದ ರಾಜರಾಜೇಶ್ವರಿನಗರ ಗೇಟ್, ಪಂತರಪಾಳ್ಯ, ನಾಯಂಡಹಳ್ಳಿ ರೈಲು ನಿಲ್ದಾಣ ರಸ್ತೆ ಸೇರಿ ಸುತ್ತಲ ಪ್ರದೇಶದಲ್ಲಿ ಗಸ್ತಿನಲ್ಲಿರುತ್ತದೆ ಎನ್ನುತ್ತಾರೆ ಬ್ಯಾಟರಾಯನಪುರ ಠಾಣೆಯ ಪೊಲೀಸರು. ಅಲ್ಲದೆ, ಆರು ತಿಂಗಳ ಹಿಂದೆ ಡಾಂಬರೀಕರಣಗೊಂಡಿದ್ದ ನಾಯಂಡಹಳ್ಳಿಯಿಂದ ಆರ್.ಆರ್.ನಗರ ಗೇಟ್ವರೆಗಿನ ರಸ್ತೆ ಗುಂಡಿಮಯವಾಗಿದೆ. ಇದರಿಂದ ವಾಹನ ಸವಾರರು ತೊಂದರೆ ಪಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ