ಮಧುಕರ್‌ಗೆ ಭಾವಪೂರ್ಣ ವಿದಾಯ


Team Udayavani, Dec 30, 2018, 6:47 AM IST

bhavapoorna.jpg

ಬೆಂಗಳೂರು: ಇಪತ್ತು ವರ್ಷಗಳ ಸೇವಾ ಅವಧಿಯಲ್ಲಿ ನೇರ ವ್ಯಕ್ತಿತ್ವ, ನೇರ ಮಾತು, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡಿದ್ದ ಡಾ.ಮಧುಕರ್‌ ಶೆಟ್ಟಿ ಐಪಿಎಸ್‌ ಎಂಬ ಅಜಾನುಬಾಹು, ಯಲಹಂಕದ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆಯ ಆವರಣದಲ್ಲಿ ತ್ರಿವರ್ಣಧ್ವಜ ಹೊದ್ದು ತಣ್ಣಗೆ ಮಲಗಿದ್ದರು…

ಮಧುಕರ್‌ ಶೆಟ್ಟಿ ಪಾರ್ಥಿವ ಶರೀರದ ಸಮೀಪ ಕುಳಿತಿದ್ದ ಪತ್ನಿ, ಪುತ್ರಿ ಹಾಗೂ ಸಂಬಂಧಿಕರ  ನೋವಿನ ಕಣ್ಣೀರು. ಮೈದಾನದ ಸುತ್ತಮುತ್ತಲು ನೀರವ ಮೌನ, ಹಿರಿಯ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಎಲ್ಲ ಪೊಲೀಸರ ಮುಖದಲ್ಲೂ ಕುಟುಂಬ ಸದಸ್ಯನನ್ನು ಕಳೆದುಕೊಂಡ ಹೆಪ್ಪುಗಟ್ಟಿದ್ದ ನೋವು. ಭಾವುಕತೆ. ಮಧುಕರ್‌ ಶೆಟ್ಟಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ. ಹಿರಿಯ ಪೊಲೀಸ್‌ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಸಾವಿರಾರು ಮಂದಿ ಅಂತಿಮ ನಮನ ಪಡೆದವರ ಕಣ್ಣಂಚಲ್ಲಿ ನೀರು.. ಶನಿವಾರ ಮಧ್ಯಾಹ್ನ  2 ಗಂಟೆಯಿಂದ ಸಂಜೆ 5.30ರವರೆಗೆ ಕಂಡುಬಂದ ಚಿತ್ರಣವಿದು.

ಗೃಹ ಸಚಿವ ಎಂ.ಬಿ.ಪಾಟೀಲ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು, ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮಧುಕರ್‌ ಶೆಟ್ಟಿ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ದುಃಖದ ಮಡುವಲ್ಲಿದ್ದ ಮಧುಕರ್‌ ಶೆಟ್ಟಿ ಅವರ ಪತ್ನಿ ಹಾಗೂ ಪುತ್ರಿಗೆ ಸಾಂತ್ವನ ಹೇಳಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಗೃಹ ಸಚಿವರು ಪಾರ್ಥೀವ ಶರೀರದ ಸಮೀಪ ಕುಳಿತು ನೋವಿನಲ್ಲಿ ಭಾಗಿಯಾದರು.

ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಬಿಎಂಪಿ ಮೇಯರ್‌ ಗಂಗಾಂಬಿಕೆ, ಆಯುಕ್ತ ಮಂಜುನಾಥ್‌ ಪ್ರಸಾದ್‌ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿ  ಕಂಬನಿ ಮಿಡಿದರು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಐಪಿಎಸ್‌ ಅಧಿಕಾರಿಗಳು, ಡಿಸಿಪಿಗಳು, ತುಮಕೂರು ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮಧುಕರ್‌ ಶೆಟ್ಟಿ ಅವರ ಪಾರ್ಥೀವ ಶರೀರದ ದರ್ಶನ ಪಡೆದು, ಅಗಲಿದ ಕುಟುಂಬ ಸದಸ್ಯನಿಗೆ ಭಾವಪೂರ್ಣ ವಿದಾಯ ಹೇಳಿದರು. ನಿವೃತ್ತ ಡಿಜಿಪಿ ಶಂಕರ ಬಿದರಿ, ನಿವೃತ್ತ ಅಧಿಕಾರಿಗಳಾದ ಸಂಗ್ರಾಮ್‌ ಸಿಂಗ್‌, ನಾಗರಾಜ್‌ ಸೇರಿದಂತೆ ಇನ್ನೂ ಹಲವು ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ತಮ್ಮ ಕಾರ್ಯವೈಖರಿಯಿಂದ ಜನಾನುರಾಗಿ ಅಧಿಕಾರಿ ಎನಿಸಿಕೊಂಡಿದ್ದ ಮಧುಕರ್‌ ಶೆಟ್ಟಿ ಅವರ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಆಗಮಿಸಿದ್ದರು. ಯುವಕರು, ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಅಗಲಿದ ಅಧಿಕಾರಿಯ ಕಾರ್ಯವೈಖರಿ ಸ್ಮರಿಸಿಕೊಳ್ಳುತ್ತಿದ್ದರು. ಅಲ್ಲದೆ, ಅಂತಿಮ ದರ್ಶನ ಪಡೆದು, ಕಣ್ಣೀರು ಹಾಕಿದರು. ಯುವಕನೊಬ್ಬ ಅಂತಿಮ ನಮನ ಸಲ್ಲಿಸಲು ಬಂದಾಗ ಪಾರ್ಥೀವ ಶರೀರ ಇರಿಸಿದ್ದ ಪೆಟ್ಟಿಗೆ ಹಿಡಿದು ಅಳುವುದನ್ನು ಕಂಡು ಎಲ್ಲರೂ ಕ್ಷಣ ಕಾಲ ಸ್ಥಂಭೀಭೂತರಾದರು. ಬಳಿಕ ಪೊಲೀಸರು ಆತನನ್ನು ಸಮಾಧಾನ ಪಡಿಸಿ ಕರೆದೊಯ್ದರು.

ಪೊಲೀಸ್‌ ಸಿಬ್ಬಂದಿ ಮಧುಕರ್‌ ಶೆಟ್ಟಿ ಅವರ ವ್ಯಕ್ತಿತ್ವ, ನೇರವಂತಿಕೆ, ಪ್ರಾಮಾಣಿಕ ಸೇವೆಯ ಬಗ್ಗೆ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ದೃಶ್ಯಗಳು ಕಂಡು ಬಂದವು. ಈ ವೇಳೆ ಉದಯವಾಣಿ ಜತೆ ಅಭಿಪ್ರಾಯ ಹಂಚಿಕೊಂಡ ಅಧಿಕಾರಿಯೊಬ್ಬರು, ಇಲಾಖೆಯಲ್ಲಿ ಮಧುಕರ್‌ ಶೆಟ್ಟಿ ಅವರೊಬ್ಬ ಪ್ರಾಮಾಣಿಕ ಅಧಿಕಾರಿ. ಸಹೋದ್ಯೋಗಿಗಳನ್ನು ಕುಟುಂಬ ಸದಸ್ಯರಂತೆ ನೋಡುತ್ತಿದ್ದರು. ಕಷ್ಟ ಎಂದರೆ ನಮ್ಮ ಮೊರೆ ಆಲಿಸುತ್ತಿದ್ದರು. ಗೊತ್ತಿಲ್ಲದ ಸಂಗತಿಗಳನ್ನು ಕಲಿಸಿ, ಧೈರ್ಯದಿಂದ ಮುನ್ನುಗ್ಗಿ ಎಂದು ಹುರಿದುಂಬಿಸಿ ಯಶಸ್ಸು ಪಡೆಯುವಂತೆ ಮಾಡುತ್ತಿದ್ದರು. ಅಂತಹ ಹಿರಿಯ ಅಣ್ಣನನ್ನು ಕಳೆದುಕೊಂಡು ಬಿಟ್ಟೆವು ಎಂದು ಕಣ್ಣೀರು ಹಾಕಿದರು.

ಮಧುಕರ್‌ ಶೆಟ್ಟಿ ಅವರ ಅಧೀನದಲ್ಲಿ ಕೆಲಸ ಮಾಡಿದ್ದ ಪೊಲೀಸ್‌ ಪೇದೆಯಂತೂ, “ಜೀವನದಲ್ಲಿ ನೇರವಂತಿಕೆ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆಯಂತಹ ಅಮೂಲ್ಯ ಗುಣಗಳನ್ನು ಅವರು ನಮಗೆ ಧಾರೆ ಎರೆದವರು. ವ್ಯವಸ್ಥೆಯೊಂದಿಗೆ ಅವರು ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಅವರ ಜತೆ ಕೆಲಸ ಮಾಡಿದ್ದು ನನ್ನ ಪುಣ್ಯ. ನಮ್ಮ ಸಂಕಷ್ಟ ಹೇಳಿಕೊಳ್ಳಲು ಅವರೇ ಇಂದು ನಮ್ಮೊಂದಿಗಿಲ್ಲ,’ ಎಂದು ಭಾವುಕರಾದರು.

ಪತ್ನಿ, ಪುತ್ರಿಗೆ ಸಾಂತ್ವನ!: ಪಾರ್ಥೀವ ಶರೀರದ ಸಮೀಪ ಕುಳಿತಿದ್ದ ಮಧುಕರ್‌ ಶೆಟ್ಟಿ ಅವರ ಪತ್ನಿ ಹಾಗೂ ಪುತ್ರಿಯ ನೋವಿನ ಕಣ್ಣೀರು ನೋಡಿದ ಎಲ್ಲರೂ ಭಾವುಕರಾದರು. ತಂದೆಯ ಮುಖವನ್ನು ದಿಟ್ಟಿಸಿ ನೋಡಿ ಬಿಕ್ಕಳಿಸಿ ಅಳುತ್ತಿದ್ದ ಮಗಳ ಕೈ ಹಿಡಿದ ತಾಯಿ, ಎದೆಗಪ್ಪಿ ಸಮಾಧಾನ ಮಾಡುತ್ತಿದ್ದ ದೃಶ್ಯ ಪೊಲೀಸ್‌ ಅಧಿಕಾರಿಗಳು ಸೇರಿ ಎಲ್ಲರಲ್ಲೂ ಕಣ್ಣೀರು ತರಿಸಿತು.

ಹಾಡಿನ ಮೂಲಕ ನಮನ: ಹೈದ್ರಾಬಾದ್‌ನ ನಿವಾಸದಲ್ಲಿ ಮಧುಕರ್‌ ಅವರಿಗೆ ಅಂತಿಮ ನಮನ ಸಲ್ಲಿಸುವ ವೇಳೆ ವೇಳೆ ಸಹೋದ್ಯೋಗಿ ಐಪಿಎಸ್‌ ಅಧಿಕಾರಿ ಪವನ್‌ ಕುಮಾರ್‌, ಮಧುಕರ್‌ ಶೆಟ್ಟಿ ಅವರ ಇಷ್ಟದ ಹಾಡು ಹೇಳಿ ಕಣ್ಣೀರು ಹಾಕಿದರು. ಮಧುಕರ್‌ ಅವರ ಮುಖ ನೋಡಿ,” ಜಿಂದಗೀ ಕಾ ಸಫ‌ರ್‌, ಯೇ ಕೈಸಾ ಸಫ‌ರ್‌… ಹಾಡಿನ ಸಾಲುಗಳನ್ನು ಹೇಳಿ ಪವನ್‌ ಕುಮಾರ್‌ ಬಿಕ್ಕಿ ಬಿಕ್ಕಿ ಅತ್ತರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಇದುವರೆಗೂ 1 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

ಪಾರ್ಥೀವ ಶರೀರದ ಪಕ್ಕ ನಿಶ್ಯಬ್ದವಾಗಿದ್ದ ಸಮವಸ್ತ್ರ!: ಯಲಹಂಕದ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆ ಮೈದಾನದಲ್ಲಿ ತ್ರಿವರ್ಣಧ್ವಜ ಹೊದ್ದು ಮಧುಕರ್‌ ಶೆಟ್ಟಿ ಚಿರನಿದ್ದೆಯಲ್ಲಿದ್ದರು. ಅದರ ಸಮೀಪ ಅವರು ಧರಿಸುತ್ತಿದ್ದ ಸಮವಸ್ತ್ರ, ಬೇಟನ್‌, ಟೋಪಿ, ಬೂಟು ಇಡಲಾಗಿತ್ತು. ಅಂತಿಮ ದರ್ಶನ ಪಡೆದ ಅಧಿಕಾರಿಗಳಳು ಸಮವಸ್ತ್ರ ನೋಡಿ ಭಾವುಕರಾಗುತ್ತಿದ್ದರು.

ಮಧುಕರ್‌ ಶೆಟ್ಟಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ವ್ಯವಸ್ಥೆಯನ್ನು ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ನೇತೃತ್ವದಲ್ಲಿ ನಡೆಯಿತು. ಖುದ್ದು ಸ್ಥಳದಲ್ಲಿ ಹಾಜರಿದ್ದ ಆಯುಕ್ತರು, ಪ್ರತಿಯೊಂದು ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದರು. ಆ್ಯಂಬುಲೆನ್ಸ್‌ನಲ್ಲಿ ಬಂದು ಇಳಿದ ಮಧುಕರ್‌ ಶೆಟ್ಟಿ ಅವರ ಪತ್ನಿ ಹಾಗೂ ಪುತ್ರಿಯನ್ನು ಬರಮಾಡಿಕೊಂಡ ಆಯುಕ್ತರು, ಸಾಂತ್ವನ‌ ಹೇಳಿ ಧೈರ್ಯ ಹೇಳಿದ್ದು ವಿಶೇಷವಾಗಿತ್ತು.

ಯಡಿಯೂರಪ್ಪ ಸಂತಾಪ: ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ಅವರು ಅಕಾಲಿಕವಾಗಿ ನಿಧನರಾಗಿರುವುದು ಅತ್ಯಂತ ದುಃಖಕರ ಸಂಗತಿ. ನೇರ ನಡೆ, ನುಡಿಯ ಅಧಿಕಾರಿಯಾಗಿದ್ದ ಮಧುಕರ್‌ ಶೆಟ್ಟಿ ಅವರನ್ನು ಕಳೆದುಕೊಂಡಿರುವುದು ಪೊಲೀಸ್‌ ಇಲಾಖೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಸಂತಾಪ ಸಲ್ಲಿಸಿದ್ದಾರೆ.

ಇಂತಹ ನಿಷ್ಠ ಅಧಿಕಾರಿಯನ್ನು ರಾಜ್ಯ ಮರೆಯುವಂತಿಲ್ಲ. ಹಾಗಾಗಿ ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿ, ಯಲಹಂಕದ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆ ಹಾಗೂ ಚನ್ನಪಟ್ಟಣ ಪೊಲೀಸ್‌ ತರಬೇತಿ ಶಾಲೆ ಪೈಕಿ ಯಾವುದಾದರೂ ಒಂದಕ್ಕೆ ಮಧುಕರಶೆಟ್ಟಿ ಅವರ ಹೆಸರನ್ನಿಡಬೇಕು. ಪ್ರತಿವರ್ಷ ಉತ್ಕೃಷ್ಟ ಸೇವೆ ಸಲ್ಲಿಸಿದ ಪೊಲೀಸ್‌ ಅಧಿಕಾರಿಗಳಿಗೆ ನೀಡುವ ಮುಖ್ಯಮಂತ್ರಿ ಪದಕವನ್ನು ಮಧುಕರ ಶೆಟ್ಟಿ ಅವರ ಹೆಸರಿನಲ್ಲಿ ನೀಡುವ ಮೂಲಕ ಅಧಿಕಾರಿಯವರ ಆದರ್ಶಗಳನ್ನು ಜೀವಂತವಾಗಿಡಬೇಕು ಎಂದು ಒತ್ತಾಯಿಸಿದ್ದಾರೆ.

ಮಧುಕರ್‌ ಶೆಟ್ಟಿ ಒಬ್ಬ ಶ್ರೇಷ್ಠ ಹಾಗೂ ಪ್ರಾಮಾಣಿಕ ಅಧಿಕಾರಿ. ಪೊಲೀಸ್‌ ಇಲಾಖೆಯ ಅತ್ಯಂತ ಹೆಮ್ಮೆಯ ಅಧಿಕಾರಿಯಾಗಿದ್ದ ಮಧುಕರ್‌ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ. ಅವರದ್ದು ಮಾದರಿ ವ್ಯಕ್ತಿತ್ವ.
-ನೀಲಮಣಿ ಎನ್‌. ರಾಜು, ಡಿಜಿಪಿ 

ರಾಜ್ಯಕ್ಕೆ ಮಧುಕರ್‌ ಶೆಟ್ಟಿ ಅವರ ಸಾವು ತುಂಬಲಾರದ ನಷ್ಟ. ಅತ್ಯಂತ ನಿಷ್ಠೆಯಿಂದ, ಯಾವುದೇ ಒತ್ತಡಗಳಿಗೆ ಮಣಿಯದೆ ಅವರು ಕೆಲಸ ಮಾಡಿದ್ದಾರೆ. ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಿದವರು ಮಧುಕರ್‌.
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ 

ದೇಶಕ್ಕೆ ಮಧುಕರ್‌ ಶೆಟ್ಟಿ ಅವರಂತಹ ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಅಗತ್ಯವಿದೆ. ಅಂಥವರಿಂದ ಮಾತ್ರ ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯ. ಮಧುಕರ್‌ ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ತುಂಬಾ ಗೌರವವಿದೆ. 
-ನ್ಯಾ. ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತ

ಮಧುಕರ್‌ ನನ್ನ ಜತೆ ಎರಡು ವರ್ಷ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸಿದ್ದಾರೆ. ನೇರವಂತಿಕೆ ಅಧಿಕಾರಿ. ಯಾವುದೇ ಸಂಧರ್ಭದಲ್ಲೂ ಅವರು ಭಯ ಪಡುತ್ತಿರಲಿಲ್ಲ. ಅವರ ಸಾವು ಇಲಾಖೆಗಾದ ದೊಡ್ಡ ನಷ್ಟ.
-ರೂಪಕುಮಾರ್‌ ದತ್ತಾ, ನಿವೃತ್ತ ಡಿಜಿಪಿ 

ತಮ್ಮ 20 ವರ್ಷಗಳ ಸೇವಾ ಅವಧಿಯಲ್ಲಿ ಮಧುಕರ್‌ ಅನುಕರಣೀಯ ಸೇವೆ ಸಲ್ಲಿಸಿದ್ದಾರೆ. ಪ್ರಾಮಾಣಿಕತೆ ಅವರ ಗುಣ. ವೀರಪ್ಪನ್‌ ವಿರುದ್ಧದ ವಿಶೇಷ ಕಾರ್ಯಾಚರಣೆ ಪಡೆಯಲ್ಲಿ ಪಾಲ್ಗೊಂಡಿದ್ದಕ್ಕೆ ಸರ್ಕಾರ ನೀಡಿದ ಗೌರವ ಧನವನ್ನೇ ಅವರು ಸ್ವೀಕರಿಸಿರಲಿಲ್ಲ. ಅಂತಹ ದಿಟ್ಟ ಹಾಗೂ ಪ್ರಾಮಾಣಿಕ ಅಧಿಕಾರಿಯ ಸೇವೆಯನ್ನು ರಾಜ್ಯ ಬಳಸಿಕೊಳ್ಳಲಿಲ್ಲ ಎಂಬ ಕೊರಗಿದೆ.
-ಶಂಕರ್‌ ಬಿದರಿ, ನಿವೃತ್ತ ಡಿಜಿಪಿ

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.