ಮ್ಯಾಟ್ರಿಮೋನಿ ಹೆಸರಲ್ಲಿ 24.50 ಲಕ್ಷ ರೂ. ವಂಚನೆ: ಸೆರೆ

ನೈಜೀರಿಯಾ ಮೂಲದ ಆರೋಪಿ ಸೆರೆ: ಮಲೇಷ್ಯಾದಿಂದ ಬಂದ ಬಳಿಕ ಮದುವೆ ಎನ್ನುತ್ತಿದ್ದ

Team Udayavani, Nov 29, 2020, 8:29 AM IST

ಮ್ಯಾಟ್ರಿಮೋನಿ ಹೆಸರಲ್ಲಿ 24.50 ಲಕ್ಷ ರೂ. ವಂಚನೆ: ಸೆರೆ

ಮಹದೇವಪುರ: ಮ್ಯಾಟ್ರಿಮೋನಿ ಹಾಗೂ ಶಾದಿ.ಕಾಂ ನಲ್ಲಿ ಮದುವೆಯಾಗುತ್ತೇನೆಂದು ಅಮಾಯಕ ಯುವತಿಯರನ್ನು ನಂಬಿಸಿ ಲಕ್ಷ ಲಕ್ಷ ಹಣ ಪಡೆದು ವಂಚಿಸುತ್ತಿದ್ದವನನ್ನು ವೈಟ್‌ ಫೀಲ್ಡ್‌ನ ಸಿಇಎನ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ನೈಜೀರಿಯಾ ಮೂಲದ ಬೈಟ್‌ ಬಿನ್‌ ಮುದುಬಾಸ್‌ (25) ಎಂದು ಗುರುತಿಸಲಾಗಿದೆ. ಬೈಟ್‌ ಬಿನ್‌ ಮುದುಬಾಸ್‌ನ ಸ್ನೇಹಿತ ಹಾಗೂ ವಂಚನೆಯ ಪ್ರಮುಖ ಆರೋಪಿ (ಮಾಸ್ಟರ್‌ ಪಿನ್‌)ಸ್ಪ್ರೈನ್ರಾಜ್‌ ಕಿಶೋರ್‌ ಮ್ಯಾಟ್ರಿಮೋನಿ, ಶಾದಿ.ಕಾಂನಲ್ಲಿ ಮಹಿಳೆಯರಿಗೆ ಪರಿಚಯವಾಗಿ ತನ್ನ ನಯವಾದ ಮಾತಿನಿಂದ ಮದುವೆಯಾಗುವುದಾಗಿ ನಂಬಿಸುತ್ತಿದ್ದ.

ಹಣ ವರ್ಗಾವಣೆ: ನಂತರ ತಾನು ಕನ್ಸ್‌ಟ್ರಕ್ಷನ್‌ ವ್ಯವಹಾರದ ನಿಮಿತ್ತ ಮಲೇಷಿಯಾಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ಬಂದ ನಂತರ ಮಾದುವೆಯಾಗುವುದಾಗಿ ಹೇಳಿದ್ದ. ಕನ್ಸ್‌ಟ್ರಕ್ಷನ್‌ ವಸ್ತುಗಳಿಗೆ 27 ಸಾವಿರ ಪಾವತಿಸಬೇಕೆಂದು ಮಹಿಳೆಗೆ ಹೇಳಿದ್ದನು. ಹಾಗೂ ಹಣವನ್ನು ಸ್ಕಾಟ್ಲೆಂಡ್ ನಲ್ಲಿರುವ ತನ್ನ ಬ್ಯಾಂಕ್‌ ಖಾತೆಯಿಂದ ಹಣ ಪಾವತಿಸುತ್ತೇನೆಂದು ಮೊದಲು ಹೇಳಿದ್ದು ನಂತರ ತನ್ನ ಸ್ಕಾಟ್ಲೆಂಡ್‌ನ‌ಲ್ಲಿರುವ ಬ್ಯಾಂಕ್‌ ಖಾತೆ ಸೆಕ್ಯೂರಿಟಿ ಕಾರಣಗಳಿಂದ ಬ್ಲಾಕ್‌ ಆಗಿದೆ ಎಂದು ನಂಬಿಸಿ ಮಹಿಳೆ ಖಾತೆಯಿಂದ ಒಟ್ಟು 24,50 ಲಕ್ಷ ರೂ.ಗಳನ್ನು ದೆಹಲಿಯಲ್ಲಿರುವ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದನು.

ಲಕ್ಷಾಂತರ ರೂ.ಮೋಸ: ಶಾದಿ.ಕಾಮ್‌, ಮ್ಯಾಟ್ರಿಮೋನಿ ಮತ್ತು ವಿದೇಶದಿಂದ ಗಿಫ್ಟ್ ಗಳನ್ನು ಕಳುಹಿಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಕ್ತಿಗಳನ್ನು ಸಂಪರ್ಕಿಸಿ. ತಾನು ನಿಮ್ಮನ್ನು ಮದುವೆಯಾಗುತ್ತೇನೆಂದು ನಂಬಿಸಿ ಅವರಿಂದ ವಿವಿಧ ಅಕೌಂಟ್‌ಗಳಿಗೆ ಲಕ್ಷಾಂತರ ರೂ.ಗಳನ್ನು ಪಡೆದು ಮೋಸ ಮಾಡಿದ್ದಾರೆ. ಇವರ ಮೊಬೈಲ್‌ ಮತ್ತು ಲ್ಯಾಪ್‌ ಟಾಪ್‌ಗ್ಳನ್ನು ಪರಿಶೀಲಿಸಿದಾಗ ಭಾರತದ ವಿವಿಧ ಬ್ಯಾಂಕ್‌ಗಳಲ್ಲಿ 38 ಮತ್ತು ವಿದೇಶಿ 28 ಬ್ಯಾಂಕ್‌ಗಳಲ್ಲಿ ಹಣ ವಹಿವಾಟಾಗಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದರು.

ಬಂಧಿತ ಆರೋಪಿ ಪೊಲೀಸ್‌ ಕಸ್ಟಡಿಗೆ: ಆರೋಪಿ ವೈಟ್‌ ಫೀಲ್ಡ್‌ ಸಿಇಎನ್‌ ಠಾಣೆಯ 10 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪ್ರಥಮ ತನಿಖಾ ಹಂತದಲ್ಲಿ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್‌ ಕಸ್ಟಡಿ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಬಂಧಿಸಿ ಕರೆತಂದರು : ಪ್ರಕರಣ ಬೆನ್ನತ್ತಿದ್ದ ಪೊಲೀಸರು ಪ್ರಕರಣದ ಆರೋಪಿಗಳು ದೆಹಲಿ ನಗರದ ಮೋಹನ್‌ ಗಾರ್ಡನ್‌ ಠಾಣಾ ಸರಹದ್ದಿನಲ್ಲಿ ಇರುವ ಖಚಿತ ಮಾಹಿತಿ ಪಡೆದು ಪ್ರಕರಣದ ಆರೋಪಿ ನಂ -2 ವಿಪಿನ್‌ ಗಾರ್ಡನ್‌ ಎಕ್ಸ್‌ಟೆನ್ಷನ್‌ ಉತ್ತಮ ನಗರದಲ್ಲಿ ಬೈಟ್‌ ಬಿನ್‌ ಮದು ಬಾಸ್‌ನನ್ನು ಬಂಧಿಸಿದ್ದಾರೆ. ಆರೋಪಿ ಆನ್‌ಲೈನ್‌ ಪ್ರಕರಣಗಳಿಗೆ ಬಳಸುವ 4 ವಿವಿಧ ಕಂಪನಿಯ ಲ್ಯಾಪ್‌ಟಾಪ್‌ ಮತ್ತು 10 ಮೊಬೈಲ್‌, ಆರೋಪಿಯ ವಿವಿಧ ಬ್ಯಾಂಕ್‌ ಅಕೌಂಟ್‌ಗಳಿಂದ ಸುಮಾರು 8.50 ಲಕ್ಷ ರೂ.ವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರಿನಲ್ಲಿರುವ ಈತನ ಸಹಚರರಾದ ಇಮಾನುವುಲ್ಲಾ ಹೊಸಮಾ ಅನ್‌ ಮ್ಯಾಡಿ,ಜಾನ್‌ ಅಲೆಕ್ಸ್‌,ದೇವಾನಿ ಮಧುಕಾಶಿ, ಇಜಿಜು ಮಧುಕಾಶಿ, ಮಾರಿಯಾ ಇಮಾವುಲ್‌ ಮಧುಕಾಶಿ ಹೆಸರು ತಿಳಿಸಿದ್ದಾನೆ.

ಟಾಪ್ ನ್ಯೂಸ್

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

ಗೋ ಸಂರಕ್ಷಣೆ ಮಾಡಿದರೆ ನಾಡಿನ ಸಮಸ್ತ ಸಂಪತ್ತು ವೃದ್ಧಿ;ಪೇಜಾವರ ಶ್ರೀ ಅಭಿಮತ

ಗೋ ಸಂರಕ್ಷಣೆ ಮಾಡಿದರೆ ನಾಡಿನ ಸಮಸ್ತ ಸಂಪತ್ತು ವೃದ್ಧಿ; ಪೇಜಾವರ ಶ್ರೀ ಅಭಿಮತ

ಕುಡಿವ ನೀರಿಗೆ ಗಲ್ಲಿ ಗಲ್ಲಿ ಅಲೆಯುತ್ತಿರುವ ಗೊರಗುಂಟೆಪಾಳ್ಯ ಕೊಳೆಗೇರಿ  ನಿವಾಸಿಗಳು

ಕುಡಿವ ನೀರಿಗೆ ಗಲ್ಲಿ ಗಲ್ಲಿ ಅಲೆಯುತ್ತಿರುವ ಗೊರಗುಂಟೆಪಾಳ್ಯ ಕೊಳೆಗೇರಿ  ನಿವಾಸಿಗಳು

5

Water shortage: ಕಬ್ಬನ್‌ಪಾರ್ಕ್‌ನ ಬಾಲಭವನ ಬೋಟಿಂಗ್‌ಗೂ ನೀರಿನ ಬರ

Fraud: ನಕಲಿ ಪೇಮೆಂಟ್‌ ಆ್ಯಪ್‌ ಬಳಸಿ 2.29 ಲಕ್ಷ ಚಿನ್ನ ಖರೀದಿಸಿ ದೋಖಾ

Fraud: ನಕಲಿ ಪೇಮೆಂಟ್‌ ಆ್ಯಪ್‌ ಬಳಸಿ 2.29 ಲಕ್ಷ ಚಿನ್ನ ಖರೀದಿಸಿ ದೋಖಾ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.