ರಹಸ್ಯ ಪಾರ್ಟಿಗಳಿಗೆ ಪಾಟ್‌ನಲ್ಲೇ ಗಾಂಜಾ

22ನೇಮಹಡಿ ಫ್ಲ್ಯಾಟ್‌ನಲ್ಲಿ ಮಾದಕ ಬೆಳೆ | ಸೆಲೆಬ್ರಿಟಿಗಳಿಗಾಗಿ ಮನೆಯನ್ನೇ ಬ್‌ಮಾಡಿಸಿದ್ದ ಭೂಪ

Team Udayavani, Sep 21, 2020, 1:05 PM IST

bng-tdy-3

ಬೆಂಗಳೂರು: ಗಗನಚುಂಬಿ ಕಟ್ಟಡದ ಇಪ್ಪತ್ತೆರಡನೇ ಮಹಡಿ ಫ್ಲ್ಯಾಟ್‌ ಆವರಣವೇ ಸೆಲೆಬ್ರಿಟಿಗಳಿಗೆ ಪಬ್‌… ರಹಸ್ಯವಾಗಿ ನಡೆಯುತ್ತಿದ್ದ ಸೆಲೆಬ್ರೆಟಿಗಳ ಪಾರ್ಟಿಗಳು… ಪಾಟ್‌ನಲ್ಲಿಯೇ “ಗಾಂಜಾ’ ಬೆಳೆಸಿದ್ದ ಭೂಪ!.

ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಸಿಸಿಬಿ ಖೆಡ್ಡಾಕ್ಕೆ ಬಿದ್ದಿರುವ ಆಪ್ತ ಶ್ರೀ ಅಲಿಯಾಸ್‌ ಶ್ರೀನಿವಾಸ ಸುಬ್ರಹ್ಮಣ್ಯಂ ಫ್ಲ್ಯಾಟ್‌ನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಬಂದ ಚಿತ್ರಣವಿದು. ಕೊಡಿಗೇಹಳ್ಳಿ ಸಮೀಪದ ಸಂಜೀವಿನಿ ನಗರದ ಬಿಯರಿ ಲೇಕ್‌ಸೈಡ್‌ ಹ್ಯಾಬಿಟೇಟ್‌ ಅಪಾರ್ಟ್‌ಮೆಂಟ್‌ನ 22ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಸುಬ್ರಹ್ಮಣ್ಯಂ ಕುಟುಂಬದ ಜತೆನೆಲೆಸಿದ್ದಾನೆ. ಸೆಲೆಬ್ರೆಟಿಗಳಿಗೆ ಪಾರ್ಟಿ ನಡೆಸಲು ಫ್ಲ್ಯಾಟ್‌ನ  ಆವರಣವನ್ನೇ ಪಾರ್ಟಿಗಳು ನಡೆಸುವ ಪಬ್‌ ಮಾದರಿಯನ್ನಾಗಿ ಪರಿವರ್ತಿಸಿದ್ದ. ಅಲ್ಲಿ ಕಾಟೇಜ್‌ ಸ್ಟೇಜ್‌, ಲೈಟನಿಂಗ್‌ ವ್ಯವಸ್ಥೆ ಪಾರ್ಟಿ ನಡೆಸಲು ಬೇಕಾದಎಲ್ಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೀಗಾಗಿ, ಆತ ಪಾರ್ಟಿಗಳನ್ನು ನಡೆಸಲೇ ಈ ರೂಪಾಂತರ ಮಾಡಿರುವ ಸಾಧ್ಯತೆಯಿದೆ.

ಕೆಲವು ವಿಐಪಿ ಸೆಲೆಬ್ರೆಟಿಗಳು, ಆತನ ಪರಮಾಪ್ತ ಗಣ್ಯರ ಮಕ್ಕಳು ಆತನ ಫ್ಲ್ಯಾಟ್‌ಗೆ ಭೇಟಿ ನೀಡುತ್ತಿದ್ದರು.ಅವರಿಗೆ ಪಾರ್ಟಿಯಲ್ಲಿ ಮಾದಕ ವಸ್ತು ಸರಬರಾಜು ಮಾಡಿರುವ ಶಂಕೆಯಿದೆ. ಒಬ್ಬ ನಟಿ ಆತನ ಫ್ಲ್ಯಾಟ್‌ಗೆ ಬಂದು ಹೋಗಿರುವುದು ಖಚಿತಪಟ್ಟಿದೆ. ಆತನ ಫ್ಲ್ಯಾಟ್‌ಗೆ ಭೇಟಿ ನೀಡಿದವರು ಹಾಗೂ ಆತನ ಜತೆ ನಿರಂತರ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆಹಾಕಲಾಗುತ್ತಿದೆ. ಆರೋಪಿ ವೈಭವ್‌ ಜೈನ್‌ ಜತೆ ವ್ಯವಹಾರ ಪಾಲುದಾರಿಕೆಯನ್ನು ಸುಬ್ರಹ್ಮಣ್ಯಂಹೊಂದಿದ್ದಾನೆ.ಜತೆಯಾಗಿ ಇಬ್ಬರೂ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಾಟ್‌ನಲ್ಲಿಯೇ ಬೆಳೆ :  ಆರೋಪಿ ಸುಬ್ರಹ್ಮಣ್ಯಂ ಫ್ಲ್ಯಾಟ್‌ನ ಪಾಟ್‌ನಲ್ಲಿ ಬೆಳೆಸಿದ್ದ ಗಾಂಜಾ ಪತ್ತೆಯಾಗಿದೆ. ಒಂದೇ ಪಾಟ್‌ನಲ್ಲಿ ಎರಡು ಗಾಂಜಾ ಗಿಡಗಳನ್ನು ಬೆಳೆಸಿದ್ದು ಪಾಟ್‌ ಸಮೇತ ಜಪ್ತಿ ಮಾಡಲಾಗಿದೆ. ತಾನು ಸೇವನೆ ಮಾಡಲು ಜತೆಗೆ ಪಾರ್ಟಿಗಳಲ್ಲಿ ಪಾಲ್ಗೊಳ್ಳುವವರಿಗೆ ನೀಡಲು ಬೆಳೆಸುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಹಿಂದೆಯೂ ಇದೇ ಮಾದರಿಯಲ್ಲಿ ಬೆಳೆದಿರುವ ಸಾಧ್ಯತೆಯಿದೆ.

ಸುಬ್ರಹ್ಮಣ್ಯಂ ಹಿನ್ನೆಲೆ ಏನು? :  ಮೈಸೂರು ಮೂಲದ ಸುಬ್ರಹ್ಮಣ್ಯಂ ವೀಕೆಂಡ್‌ಗಳಲ್ಲಿ ಹೊರ ವಲಯದ ಮನೆಗಳಲ್ಲಿ ವಾಸಿಸಲು ಇಚ್ಛಿಸುವವರಿಗೆ ಜೇಡ್‌ ಹಾಸ್ಪಿಟಾಲಿಟಿ ಹೆಸರಿನ ಉದ್ಯಮವನ್ನು 20016ರಿಂದ ಸುಬ್ರಹ್ಮಣ್ಯಂ ನಡೆಸುತ್ತಾನೆ. ಇದಕ್ಕಾಗಿ ನಗರದ ಹೊರವಲಯ ಫಾರ್ಮ್ ಹೌಸ್‌, ವಿಲ್ಲಾ ಲೀಸ್‌ಗೆ ಪಡೆದು ಬಾಡಿಗೆಗೆ ನೀಡುತ್ತಿದ್ದ ಎಂದು ಗೊತ್ತಾಗಿದೆ. ಈ ವೆಂಚರ್‌ಗಾಗಿ ಆತ2011ರಲ್ಲಿ ಭಾರತ್‌ ವಿಕಾಸ್‌ ರತ್ನ ಅವಾರ್ಡ್‌ ಇನ್‌ ಹಾಸ್ಪಿಟಾಲಿಟಿ ಪ್ರಶಸ್ತಿ ಪಡೆದುಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಟಾಪ್ ನ್ಯೂಸ್

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.