ಕಾರ್ಬನ್‌ ತಗ್ಗಿಸಲು ಮೆಟ್ರೋ ಸಹಕಾರಿ

ಮೆಟ್ರೋದಿಂದ ವರ್ಷಕ್ಕೆ 22,518 ಟನ್‌ನಷ್ಟು ಕಾರ್ಬನ್‌ ಉತ್ಪಾದನೆ ನಿಯಂತ್ರಣ ಸಾಧ್ಯ

Team Udayavani, Aug 18, 2020, 12:08 PM IST

ಕಾರ್ಬನ್‌ ತಗ್ಗಿಸಲು ಮೆಟ್ರೋ ಸಹಕಾರಿ

ಬೆಂಗಳೂರು: 641 ಮರಗಳು ಒಂದು ವರ್ಷಕ್ಕೆ 14 ಟನ್‌ನಷ್ಟು ಕಾರ್ಬನ್‌ ಡೈ ಆಕ್ಸೈಡ್‌ ಅನ್ನು ಹಿಡಿದಿಟ್ಟುಕೊಳ್ಳಬಲ್ಲದು. ಆದರೆ, ನಮ್ಮ ಮೆಟ್ರೋ ವರ್ಷಕ್ಕೆ 22,518 ಟನ್‌ನಷ್ಟು ಕಾರ್ಬನ್‌ ತಗ್ಗಿಸಬಲ್ಲದು!

– 21.25 ಕಿ.ಮೀ. ಉದ್ದದ ಗೊಟ್ಟಿಗೆರೆ-ನಾಗವಾರ (ರೀಚ್‌-6) ನಡುವೆ ಮೆಟ್ರೋ ನಿರ್ಮಾಣಕ್ಕಾಗಿ 641 ಮರಗಳ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಪರಿಸರವಾದಿಗಳ ಮುಂದೆ ಇಂತಹದ್ದೊಂದು ವಾದ ಮುಂದಿಟ್ಟಿದೆ.

ಎಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆ ನೇತೃತ್ವದಲ್ಲಿ ತಜ್ಞರ ತಂಡದಿಂದ ವೈಜ್ಞಾನಿಕ ಅಧ್ಯಯನ ನಡೆಸಿ, ರೀಚ್‌-6 ಮೆಟ್ರೋ ನಿರ್ಮಾಣದಿಂದ ಪರಿಸರಾತ್ಮಕ ಲಾಭಗಳು ಕುರಿತ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಮರಗಳ ತೆರವು ಹಾಗೂ ಮೆಟ್ರೋ ನಿರ್ಮಾಣ ಇವೆರಡರಿಂದ ಆಗಬಹುದಾದ ಲಾಭ-ನಷ್ಟಗಳ ಹೋಲಿಕೆ ಮಾಡಲಾಗಿದೆ. ಇದರಂತೆ ಮರಗಳನ್ನು ಕಡಿಯುವುದರಿಂದ ಹಾನಿ ಆಗುವುದು ನಿಜ. ಆದರೆ, ಈ ಯೋಜನೆಯಿಂದ ಪರಿಸರಕ್ಕೆ ಆಗುವ ಲಾಭ ಹಲವು ಪಟ್ಟು ಹೆಚ್ಚಿದೆ ಎಂದು ಉಲ್ಲೇಖೀಸಲಾಗಿದೆ.

ವರದಿ ಪ್ರಕಾರ ಒಂದು ಮರ ವರ್ಷಕ್ಕೆ 21.8 ಕೆ.ಜಿ. ಕಾರ್ಬನ್‌ ಹೀರಿಕೊಳ್ಳುತ್ತದೆ. ಒಟ್ಟಾರೆ ತೆರವಾಗಲಿರುವ 641 ಮರಗಳಿಂದ ವರ್ಷಕ್ಕೆ 14 ಟನ್‌ನಷ್ಟು ಕಾರ್ಬನ್‌ ಡೈಆಕ್ಸೆ„ಡ್‌ ತಗ್ಗಿಸಬಹುದು. ಆದರೆ, ಇದಕ್ಕೆ ಪ್ರತಿಯಾಗಿ ತಲೆಯೆತ್ತಲಿರುವ ಮೆಟ್ರೋದಿಂದ ಮೊದಲ ವರ್ಷದಲ್ಲೇ 22,518 ಟನ್‌ ಕಾರ್ಬನ್‌ ತಗ್ಗಿಸಬಹುದಾಗಿದ್ದು, 2041ರ ಹೊತ್ತಿಗೆ ಇದರ ಪ್ರಮಾಣ 54,358 ಟನ್‌ ಆಗಲಿದೆ ಎಂದು ಅಂದಾಜಿಸಲಾಗಿದೆ. ಮೆಟ್ರೋ ಬರುವುದರಿಂದ ಇದೆಲ್ಲದರ ಮೇಲಾಗುವ ಪರಿಣಾಮ ಮತ್ತು ಪಲ್ಲಟಗಳನ್ನು ಲೆಕ್ಕಹಾಕಿ, ಸುಮಾರು ಹತ್ತು ಪುಟಗಳ ವರದಿಯನ್ನು ಸಿದ್ಧಪಡಿಸಲಾಗಿದೆ.

ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ 2016ರ ಅಧ್ಯಯನದ ಪ್ರಕಾರ ನಿತ್ಯ ಪೀಕ್‌ ಅವರ್‌ (ಬೆಳಗ್ಗೆ 9ರಿಂದ 10)ನಲ್ಲಿ 12 ಸಾವಿರ ಜನ ಸಂಚರಿಸುತ್ತಿದ್ದು, ಒಂದು ದಿನದಲ್ಲಿ 2.63 ಲಕ್ಷ ಜನ ಪ್ರಯಾಣಿಸುತ್ತಾರೆ. ವಾಹನಗಳ ಸಂಚಾರ ದಿನಕ್ಕೆ 24.37 ಲಕ್ಷ ಕಿ.ಮೀ. ಇದೆ. 2021ಕ್ಕೆ ಪೀಕ್‌ ಅವರ್‌ನಲ್ಲಿ ಓಡಾಡುವವರ ಸಂಖ್ಯೆ 16,381 ಆಗಲಿದ್ದು, ಇಡೀ ದಿನದಲ್ಲಿ ಈಮಾರ್ಗದಲ್ಲಿ ಓಡಾಡುವವರ ಸಂಖ್ಯೆ 4.03 ಲಕ್ಷ ತಲುಪಲಿದೆ. ಆಗ, ವಾಹನಗಳ ಸಂಚಾರ ಪ್ರತಿ ದಿನ 38.20 ಕಿ.ಮೀ. ಆಗಲಿದೆ. ಇದೆಲ್ಲದರ ಪರಿಣಾಮ ಜನ ಹೆಚ್ಚು ಹೊತ್ತು ರಸ್ತೆಗಳಲ್ಲಿ ಕಳೆಯಬೇಕಾಗುತ್ತದೆ. ಸಮಯ ವ್ಯಯದ ಜತೆಗೆ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಒಂದು ವೇಳೆ ಈ ಮಾರ್ಗದಲ್ಲಿ ಮೆಟ್ರೋ ಬಂದರೆ, ಆ ಪ್ರಯಾಣಿಕರೆಲ್ಲರೂ ಸಮೂಹ ಸಾರಿಗೆ ಮೆಟ್ರೋಗೆ ಶಿಫ್ಟ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಅನುಷ್ಠಾನಗೊಂಡ ಆರಂಭದಲ್ಲೇ ದ್ವಿಚಕ್ರ ವಾಹನ ಸೇರಿದಂತೆ ವಿವಿಧ ಪ್ರಕಾರದ ವಾಹನಗಳಲ್ಲಿ ಸಂಚರಿಸುವ ಸುಮಾರು 2.63 ಲಕ್ಷ ಪ್ರಯಾಣಿಕರು ಮೆಟ್ರೋದತ್ತ ಮುಖಮಾಡುವ ಸಾಧ್ಯತೆ ಇದೆ. 2041ರ ಹೊತ್ತಿಗೆ ಈ ಸಂಖ್ಯೆ 6.19 ಲಕ್ಷ ಆಗುವ ನಿರೀಕ್ಷೆ ಇದೆ. ಇನ್ನು ಅನುಷ್ಠಾನಗೊಂಡ ಮೊದಲ ವರ್ಷದಲ್ಲೇ 77,159 ವಾಹನಗಳು ರಸ್ತೆಗಿಳಿಯುವುದು ತಗ್ಗಿಸಬಹುದು. ಇದರಿಂದ ದಿನಕ್ಕೆ 7.14 ಲಕ್ಷ ಕಿ.ಮೀ. ವಾಹನಗಳ ಸಂಚಾರ ಕಡಿಮೆ ಆಗಲಿದೆ. 2041ರ ವೇಳೆಗೆ ಈ ಮಾರ್ಗದಲ್ಲಿ 1.81 ಲಕ್ಷ ವಾಹನಗಳು ರಸ್ತೆಗಿಳಿಯುವುದು ತಪ್ಪಲಿದ್ದು, 17.25 ಲಕ್ಷ ಕಿ.ಮೀ. ಕಡಿಮೆ ಆಗಲಿದೆ ಎಂದು ವರದಿಯಲ್ಲಿ ತಜ್ಞರು ಉಲ್ಲೇಖೀಸಿದ್ದಾರೆ.ಇದರಿಂದ ಸಹಜವಾಗಿ ವಾಯು ಮಾಲಿನ್ಯ ಕಡಿಮೆ ಆಗಲಿದೆ. ಮೊದಲ ವರ್ಷವೇ ಈ ಮಾರ್ಗದಲ್ಲಿ 439 ಟನ್‌ ಕಾರ್ಬನ್‌, 15.3 ಟನ್ಉಸಿರಾಡಲ್ಪಡುವಾಗ ದೇಹವನ್ನು ಸೇರುವ ಧೂಳಿನ ಕಣಗಳು (ಪಿಎಂ), 22,531 ಟನ್‌ ಕಾರ್ಬನ್‌ ಡೈಆಕ್ಸೆ„ಡ್‌ ಸೇರಿದಂತೆ ವಿವಿಧ ಮಾಲಿನ್ಯಕಾರಕ ಅಂಶಗಳು ತಗ್ಗಲಿವೆ ಎಂದು ಹೇಳಲಾಗಿದೆ.

42 ಕಿ.ಮೀ. ಉದ್ದದ ಮೊದಲ ಹಂತದಲ್ಲಿ ಜನ ಖಾಸಗಿ ವಾಹನಗಳಿಂದ ಮೆಟ್ರೋಗೆ ಶಿಫ್ಟ್ ಆಗಿದ್ದು ಕಣ್ಮುಂದಿದೆ. ಇದರಿಂದ ಉದ್ದೇಶಿತ ಮಾರ್ಗಗಳಲ್ಲಿ ಸಂಚಾರದಟ್ಟಣೆ ಹಾಗೂ ವಾಯುಮಾಲಿನ್ಯ ಸಾಕಷ್ಟು ಕಡಿಮೆ ಆಗಿರುವುದನ್ನೂ ಕಾಣಬಹುದು ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.

 

ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.