ನೌಕರಿ ತೊರೆಯುವವರಿಗೆ ಮೆಟ್ರೋ ಷರತ್ತು


Team Udayavani, Aug 4, 2017, 11:01 AM IST

bangalore metro copy.JPG

ಬೆಂಗಳೂರು: ಮೆಟ್ರೋದಿಂದ ವಿಮುಖ ರಾಗುತ್ತಿರುವವರ ಉದ್ಯೋಗಿಗಳ ಮೇಲೆ “ನಮ್ಮಮೆಟ್ರೋ’ ನೌಕರಿ ನಿಷೇದ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ನಿಗಮದ ಕೆಲಸದಿಂದ ನಿರ್ಗಮಿಸುವ ಎಂಜಿನಿಯರ್‌ಗಳು ಮುಂದಿನ ಎರಡು ವರ್ಷ ದೇಶದ ಯಾವುದೇ ಮೆಟ್ರೋ ನಿಗಮಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ ಎಂದು ನಿಗಮವು ಫ‌ರ್ಮಾನು ಹೊರಡಿಸಿರುವುದು ತಡವಾಗಿ
ಬೆಳಕಿಗೆಬಂದಿದೆ.

ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಸಿಬ್ಬಂದಿ ಮಾತ್ರವಲ್ಲ; ನಮ್ಮ ಮೆಟ್ರೋ ಯೋಜನೆಯ ವಿನ್ಯಾಸ, ಸಿವಿಲ್‌ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಎಂಜಿನಿಯರ್‌ ಗಳು ಕೂಡ ದೇಶದ ಇತರೆ ಮೆಟ್ರೋ ಯೋಜನೆಗಳತ್ತ ಸದ್ಯ ಮುಖ ಮಾಡುತ್ತಿದ್ದಾರೆ. ಇದನ್ನು ತಡೆಯಲು ಬಿಎಂಆರ್‌ಸಿ ಈಚೆಗೆ ಹೊಸ ಆದೇಶ ಹೊರಡಿಸಿದೆ. ಅದರಂತೆ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳು ರಾಜೀನಾಮೆ ಕೊಟ್ಟು ಕೆಲಸ ಬಿಟ್ಟರೂ ಮುಂದಿನ 2 ವರ್ಷ ಯಾವುದೇ ಮೆಟ್ರೋ
ನಿಗಮಗಳಲ್ಲಿ ಕೆಲಸ ಮಾಡುವಂತಿಲ್ಲ.

ಷರತ್ತು ವಿಧಿಸಿಲ್ಲ ಎನ್ನುತ್ತಿದೆ ಬಿಎಂಆರ್‌ಸಿ: ಈ ನಿಯಮದ ಕುರಿತು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ಹೇಳುವುದೇ ಬೇರೆ. “ಯಾವುದೇ ಎಂಜಿನಿಯರ್‌ಗಳಿಗೆ ಈ ರೀತಿಯ ಷರತ್ತುಗಳನ್ನು ನಾವು ವಿಧಿಸಿಲ್ಲ. ನಿಗಮದಲ್ಲಿ ಕಾರ್ಯನಿರ್ವಹಿಸತ್ತಿರುವ ಎಲ್ಲ ಎಂಜಿನಿಯರ್‌ಗಳನ್ನು ಸಮಾನವಾಗಿ ಕಾಣಲಾಗುತ್ತಿದೆ. ಯಾರಿಗೂ ಯಾವುದೇ ಫ‌ರ್ಮಾನು ಹೊರಡಿಸಿಲ್ಲ,’ ಎಂದು ಹೇಳಿದ್ದಾರೆ.

ನಿಗಮದಲ್ಲಿ 7ನೇ ವೇತನ ಶ್ರೇಣಿ ಜಾರಿ ಮಾಡದಿರುವುದು, ಬಡ್ತಿ ನೀತಿ ಸಮರ್ಪಕವಾಗಿ ಅನುಸರಿಸದಿರುವುದು ಸೇರಿದಂತೆ ಮತ್ತಿತರ
ವಿಚಾರಗಳಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಕಳೆದ ಮೂರು
ವರ್ಷಗಳಲ್ಲಿ ಹಲವು ಎಂಜಿನಿಯರ್‌ಗಳು ಬಿಎಂಆರ್‌ ಸಿಯಿಂದ ವಿಮುಖರಾಗಿದ್ದಾರೆ.

ಈ ನಡುವೆ ದೇಶದ ವಿವಿಧ ಮಹಾನಗರಗಳಲ್ಲಿ ಮೆಟ್ರೋ ಯೋಜನೆಗಳನ್ನು ಜಾರಿಯಲ್ಲಿದ್ದು, ನಮ್ಮ ಮೆಟ್ರೋಗಿಂತ ಉತ್ತಮ ಸೌಲಭ್ಯಗಳು ಅಲ್ಲಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಎಂಜಿನಿಯರ್‌ಗಳು ಬೇರೆ ಬೇರೆ ರಾಜ್ಯಗಳ ಮೆಟ್ರೋ ನಿಗಮಗಳತ್ತ 
ಮುಖಮಾಡುತ್ತಿದ್ದಾರೆ. ಇದನ್ನು ತಡೆಯಲು ಮುಂದಾಗಿರುವ ನಿಗಮದ ಆಡಳಿತ ಮಂಡಳಿ, ಈ ಹೊಸ ಷರತ್ತು ಮುಂದಿಟ್ಟಿದೆ ಎಂದು ಹೆಸರು ಹೇಳಲಿಚ್ಛಿಸದ ಎಂಜಿನಿಯರೊಬ್ಬರು ಆರೋಪಿಸಿದ್ದಾರೆ. ಯೋಜನೆ ಮೇಲೆ ಪರಿಣಾಮ? ನಿಗಮದಲ್ಲಿ 
ಕಾರ್ಯನಿರ್ವಹಿಸುತ್ತಿರುವವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಮತ್ತೂಂದೆಡೆ ಇಲ್ಲಿಂದ ಹೊರಹೋಗಲಿಕ್ಕೂ ಬಿಡುತ್ತಿಲ್ಲ. ಇದರಿಂದ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಅಷ್ಟಕ್ಕೂ ದೆಹಲಿ ಸೇರಿದಂತೆ ದೇಶದ ಯಾವುದೇ ಮೆಟ್ರೋ ನಿಗಮಗಳಲ್ಲಿ ಈ ನಿಯಮ ಇಲ್ಲ. ಆದರೆ, ಬಿಎಂಆರ್‌ಸಿಯಲ್ಲಿ ಮಾತ್ರ ಯಾಕೆ ಎಂಬ ಅಪಸ್ವರ ಎಂಜಿನಿಯರ್‌ಗಳಿಂದ ಕೇಳಿಬರುತ್ತಿದೆ. ಸಿಬ್ಬಂದಿಯ ಈ ಅಸಮಾಧಾನ ಮುಂದಿನ ದಿನಗಳಲ್ಲಿ ಯೋಜನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರಾಜೆಕ್ಟ್‌ನಲ್ಲಿರುವ ಸಿವಿಲ್‌, ಸಿಸ್ಟ್‌ಂ, ವಿನ್ಯಾಸ, ಅಂಕಿ-ಸಂಖ್ಯೆ, ಯೋಜನೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 350ರಿಂದ 400 ಎಂಜಿನಿಯರ್‌ಗಳಿಗೆ 15 ದಿನಗಳ ಹಿಂದೆ ಈ ಹೊಸ ಆದೇಶದ ಪ್ರತಿ ತಲುಪಿದೆ. ಈ ಮಧ್ಯೆ 7ನೇ ವೇತನ ಶ್ರೇಣಿ ನೀಡುವುದಿಲ್ಲ ಎಂದೂ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಈ ಅಸಮಾಧಾನದ ನಡುವೆ ಸಿಬ್ಬಂದಿ ಕಾರ್ಯನಿರ್ವಹಿಸುವುದರಿಂದ
ಸಹಜವಾಗಿಯೇ ಯೋಜನೆಯ ಗುಣಮಟ್ಟ ಮತ್ತು ನಿಗದಿತ ಕಾಲಮಿತಿಯಲ್ಲಿ ಮಾಡಿಮುಗಿಸುವುದು ಕಷ್ಟವಾಗಲಿದೆ.

ಉಳಿದೆಡೆ ಸೌಲಭ್ಯ ಹೇಗೆ? ಅಹಮದಾಬಾದ್‌ ಹೊರತುಪಡಿಸಿದರೆ, ದೇಶದ ಉಳಿದೆಲ್ಲ ಮೆಟ್ರೋ ರೈಲು ನಿಗಮಗಳಲ್ಲಿ ಕೈಗಾರಿಕಾ ಭತ್ಯೆ (ಐಡಿಎ) ಮಾದರಿ ಅನುಸರಿಸಲಾಗುತ್ತಿದೆ. ಅಂದರೆ ಕಾಯಂ ಜತೆಗೆ ಬಡ್ತಿ ಮತ್ತಿತರ ಲಭ್ಯಗಳು ನಿಯಮಿತವಾಗಿ ಲಭ್ಯವಾಗುತ್ತವೆ. ಆದರೆ, ಬಿಎಂಆರ್‌ಸಿಯಲ್ಲಿ ಗುತ್ತಿಗೆ ಆಧಾರದ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಬಡ್ತಿ ನಿಯಮಗಳನ್ನು ಕೂಡ ಗಾಳಿಗೆ ತೂರಲಾಗಿದ್ದು, ಕೆಲವರಿಗೆ ನೇಮಕಗೊಂಡ ಆರು ತಿಂಗಳಲ್ಲಿ ಬಡ್ತಿ ನೀಡಿದರೆ, ಇನ್ನು ಹಲವರಿಗೆ 10 ವರ್ಷ ಕಳೆದರೂ ಬಡ್ತಿ ಭಾಗ್ಯ ಸಿಕ್ಕಿಲ್ಲ ಎಂದು ಎಂಜಿನಿಯರೊಬ್ಬರು ದೂರಿದ್ದಾರೆ. 

*ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.