ಮೆಟ್ರೋಲೈಟ್- ಮೆಟ್ರೋನಿಯೋ ಸೇವೆ
Team Udayavani, Feb 2, 2021, 6:11 PM IST
ಬೆಂಗಳೂರು: ದೇಶದ ಮೆಟ್ರೋ ನಗರ ಪ್ರದೇಶ ಮಮಾತ್ರವಲ್ಲದೆ ಪ್ರಥಮ ದರ್ಜೆ ನಗರಗಳ ಹೊರವಲಯ ಹಾಗೂ ದ್ವಿತೀಯ ಹಂತದ ನಗರಗಳಲ್ಲಿ ಹೊಸ ತಂತ್ರಜ್ಞಾನದ “ಮೆಟ್ರೋಲೈಟ್’, “ಮೆಟ್ರೋ ನಿಯೋ’ ಸೇವೆ ಆರಂಭಿಸುವ ಮಹತ್ತರ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದೆ.
ಜತೆಗೆ ಬಸ್ ಸಮೂಹ ಸಾರಿಗೆ ಉತ್ತೇಜಿಸಲು 18,000 ಕೋಟಿ ರೂ. ವೆಚ್ಚದ ವಿಶೇಷ ಯೋಜನೆಯನ್ನೂ ಪ್ರಕಟಿಸಿದೆ. ಈವರೆಗೆ ದೇಶದ ಮೆಟ್ರೋ ನಗರಗಳಲ್ಲಷ್ಟೇ ಮೆಟ್ರೋ ರೈಲ್ವೆ ಸೇವೆ ಒಗದಿಸಲು ಆದ್ಯತೆ ನೀಡಲಾಗುತ್ತಿತ್ತು. ಇದೀಗ ಪ್ರಥಮ ಶ್ರೇಣಿ ನಗರಗಳ ಹೊರವಲಯ (ಪೆರಿಫೆರಲ್) ಹಾಗೂ ಅಭಿವೃದ್ಧಿಶೀಲ ಎರಡನೇ ಶ್ರೇಣಿ ನಗರಗಳಿಗೆ ಮೆಟ್ರೋ ಸೇವೆ ಕಲ್ಪಿಸುವ ಮಹತ್ವದ ಹೆಜ್ಜೆ ಇಡಲುಮುಂದಾಗಿದೆ.
“ಮೆಟ್ರೋಲೈಟ್’ ಹಾಗೂ “ಮೆಟ್ರೋ ನಿಯೋ’ ಸೇವೆಯನ್ನು ಕಡಿಮೆ ವೆಚ್ಚದಲ್ಲಿ ಮೆಟ್ರೋ ಮಾದರಿಯ ಸುಖಕರ, ತ್ವರಿತ, ಸುರಕ್ಷಿತ ಪ್ರಯಾಣ ಕಲ್ಪಿಸುವುದು ಕೇಂದ್ರದ ಚಿಂತನೆ. ಹಾಗೆಯೇ ವಾಯು ಮಾಲಿನ್ಯ ತಗ್ಗಿಸಿ ಸಮೂಹ ಸಾರಿಗೆ ಉತ್ತೇಜಿಸಲು ಬಸ್ ಸಾರಿಗೆ ಸೇವೆಗೆ ಸಂಬಂಧಪಟ್ಟಂತೆ 18,000 ಕೋಟಿ ರೂ. ವೆಚ್ಚದ ವಿಶೇಷ ಯೋಜನೆಯನ್ನು ಪ್ರಕಟಿಸಿದೆ.
ಇದನ್ನೂ ಓದಿ:ರಾಮನ ನಾಡಲ್ಲಿ ಪೆಟ್ರೋಲ್ 93 ರೂ. ರಾವಣನ ಲಂಕಾದಲ್ಲಿ 51 ರೂ.: ಸುಬ್ರಮಣಿಯನ್ ಸ್ವಾಮಿ
ಸುಮಾರು 20,000 ಬಸ್ಗಳಿಗೆ ಆರ್ಥಿಕ ನೆರವು, ಹಂಚಿಕೆ, ನಿರ್ವಹಣೆಯನ್ನು ಪಿಪಿಪಿ ಮಾದರಿಯಲ್ಲಿ ಕೈಗೊಳ್ಳು ವುದು ಯೋಜನೆಯ ಉದ್ದೇಶ. ಆ ಮೂಲಕ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ಜತೆಗೆ ಉದ್ಯೋಗ ಸೃಷ್ಟಿ, ಆರ್ಥಿಕತೆ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಕೇಂದ್ರ ಸರ್ಕಾರ ಉದ್ದೇಶ. ದೇಶದ 27 ನಗರಗಳಲ್ಲಿ ಮೆಟ್ರೋ ಹಾಗೂ ಪ್ರಾದೇಶಿಕ ಸಮೂಹ ಸಾರಿಗೆ ವ್ಯವಸ್ಥೆ (ಆರ್ಆರ್ಟಿಎಸ್)ಯಡಿ ಈಗಾಗಲೇ 702. ಕಿ.ಮೀ. ಮಾರ್ಗದ ಸೇವೆ ಬಳಕೆಯಲ್ಲಿದ್ದು, ಇನ್ನೂ 1,016 ಕಿ.ಮೀ. ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಪ್ರಮುಖ ಮೆಟ್ರೋ ರೈಲು ಯೋಜನೆಗಳಿಗೆ ಕೇಂದ್ರದ ಪಾಲಿನ ಅನುದಾನವನ್ನು ಘೋಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ