ಕಿಡ್ನಿ ಕಸಿಗೆ ಮೀನಾಮೇಷ: ಸರ್ಕಾರದ ವಿರುದ್ಧ ಕಿಡಿ ಕಾರಿದ ಹೈಕೋರ್ಟ್
Team Udayavani, Dec 6, 2018, 6:35 AM IST
ಬೆಂಗಳೂರು: ಟೆಕ್ಕಿಯೊಬ್ಬರು ಕಿಡ್ನಿ ಕಸಿ ಮಾಡಿಸಿಕೊಳ್ಳಲು ಕೋರಿ ಸಲ್ಲಿಸಿರುವ ಮನವಿಗೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿರುವ”ಮಾನವ ಅಂಗಾಂಗ ಕಸಿ ಅನುಮತಿ ಅಧಿಕಾರಯುತ ಸಮಿತಿ’ ವಿರುದ್ಧ ಬುಧವಾರ ಕೆಂಡ ಕಾರಿದ ಹೈಕೋರ್ಟ್, ಸಮಿತಿಯ ಅಧಿಕಾರಯುತ ಹಿರಿಯ ಅಧಿಕಾರಿ ಗುರುವಾರ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿತು.
ಕಿಡ್ನಿ ಕಸಿಗೆ ಕೋರಿ ನಗರದ ವೈಟ್μàಲ್ಡ್ ನಿವಾಸಿ ಸಾಫ್ಟ್ ವೇರ್ ಇಂಜಿನಿಯರ್ ಮೊಹಮದ್ ಝೈದ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಕೈಗೆತ್ತಿಕೊಳ್ಳಿ. ಏಕೆಂದರೆ, ಹೈಕೋರ್ಟ್ ನಿರ್ದೇಶನವಿದ್ದರೂ, ಸಮಿತಿಯು ಕಿಡ್ನಿ ಕಸಿ ಮನವಿಗೆ ಅನುಮತಿ ನೀಡುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲೆ ಅನುಚೆಂಗಪ್ಪ ಬುಧವಾರ ನ್ಯಾಯಪೀಠವನ್ನು ಕೋರಿದರು. ಈ ವೇಳೆ ಹೈಕೋರ್ಟ್ ಡಿ.3ರಂದು ನೀಡಿದ ನಿರ್ದೇಶನದಂತೆ ಸಮಿತಿಗೆ ಮನವಿ ಸಲ್ಲಿಸಲಾಯಿತು. ಆದರೆ, ಸಮಿತಿಯು ಅದನ್ನು ಸ್ವೀಕರಿಸುತ್ತಿಲ್ಲ ಎಂದು ಅನುಚೆಂಗಪ್ಪ ನ್ಯಾಯಪೀಠದ ಗಮನಕ್ಕೆ ತಂದರು.
ಇದರಿಂದ ಕೋಪಗೊಂಡ ನ್ಯಾ.ಬಿ.ವೀರಪ್ಪ, ಕಿಡ್ನಿ ದಾನ ಮಾಡುವವರು ಹಾಗೂ ಪಡೆಯುವವರು ಇಬ್ಬರೂ ಕಸಿಗೆ
ಒಪ್ಪಿಕೊಂಡಿರುವಾಗ, ಸಮಿತಿ ಅನುಮತಿ ಯಾಕೆ ನೀಡುತ್ತಿಲ್ಲ. ಹೈಕೋರ್ಟ್ ನಿರ್ದೇಶನವಿದ್ದರೂ ಪಾಲಿಸುತ್ತಿಲ್ಲವೆಂದರೆ ಏನರ್ಥ? ಸರ್ಕಾರ ರೋಗಿಯ ಪ್ರಾಣದ ಜೊತೆಗೆ ಚೆಲ್ಲಾಟ ಆಡುತ್ತಿದ್ದೇಯಾ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಮಿತಿಯ ಹಿರಿಯ
ಅಧಿಕಾರಿ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು