ಸಚಿವ ಸ್ಥಾನ, 25 ಕೋ. ರೂ. ಆಫರ್ ನೀಡಿದರು: ಶರಣ ಗೌಡ ಕಂದಕೂರ
Team Udayavani, Feb 9, 2019, 12:35 AM IST
ಬೆಂಗಳೂರು: ‘ನನಗೆ ತತ್ಕ್ಷಣ ದೇವದುರ್ಗಕ್ಕೆ ಬರುವಂತೆ ಹೇಳಿದರು. ನಾನು ರಾತ್ರಿ 12.30ಕ್ಕೆ ದೇವದುರ್ಗಕ್ಕೆ ಹೊರಟೆ. ಅಲ್ಲಿ ಸರ್ಕಿಟ್ ಹೌಸ್ಗೆ ಹೋಗಿ ದೇವದುರ್ಗ ಎಂಎಲ್ಎ ಮತ್ತು ಹಾಸನ ಎಂಎಲ್ಎ ಪ್ರೀತಂ ಗೌಡ ಇದ್ದರು ಅವರನ್ನು ಭೇಟಿ ಮಾಡಿದ್ದೆ’ ಎಂದು ನಾಗನ ಗೌಡ ಕಂದಕೂರು ಪುತ್ರ ಶರಣ ಗೌಡ ಕಂದಕೂರ ತಿಳಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಿ ತಮಗೆ ಒಡ್ಡಿರುವ ಆಮಿಷದ ಬಗ್ಗೆ ಮಾಹಿತಿ ನೀಡಿದ ಅವರು, ಎಲ್ಲ ಓಕೆ ಆಗಿದೆ. ನಾಳೆ ಸಂಜೆವರೆಗೂ 11 ಜನ ಬರುತ್ತಾರೆ. ನೀನೊಬ್ಬನೇ ಬಂದು ಬಿಡು, ನಿಮ್ಮ ತಂದೆಗೆ ವಯಸ್ಸಾಗಿದೆ. ನಿನ್ನನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಡಿ, 25 ಕೋಟಿ ಹಣ ನೀಡುತ್ತೇವೆ. ಹಣಕಾಸಿನ ವ್ಯವಹಾರವನ್ನು ವಿಜಯೇಂದ್ರ ನೋಡಿಕೊಳ್ಳುತ್ತಾರೆ. ಚುನಾವಣೆಗೆ 25 ಕೋಟಿ ರೂ. ನೀಡುತ್ತೇವೆ. ದೊಡ್ಡ ಖಾತೆಯನ್ನು ನೀಡುವುದಾಗಿ ಆಮಿಷ ಒಡ್ಡಿದರು ಎಂದು ಆರೋಪಿಸಿದರು.
ಅದಕ್ಕೂ ಮೊದಲು ದೇವದುರ್ಗ ಶಾಸಕರು ನನ್ನೊಂದಿಗೆ ಮಾತನಾಡಿ, ಸ್ಪೀಕರ್ ಅವರನ್ನು 50 ಕೋಟಿ ಬುಕ್ ಮಾಡಿದ್ದೀವಿ, ಸುಪ್ರೀಂ ಕೋರ್ಟ್ನಲ್ಲಿ ಅಮಿತ್ ಶಾ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ನಾವು ಮೊದಲಿನಿಂದಲೂ ದೇವೇಗೌಡರ ಕುಟುಂಬದ ಜತೆಗಿದ್ದೇವೆ. ನಮ್ಮ ತಂದೆ ದೇವೇಗೌಡರ ಬಗ್ಗೆ ಬಹಳ ಗೌರವ ಇಟ್ಟುಕೊಂಡಿದ್ದಾರೆ. ಹಿರಿಯ ನಾಯಕರು ಈ ರೀತಿ ಮಾಡಿದರೆ, ಭವಿಷ್ಯದಲ್ಲಿ ನಮ್ಮ ಕಥೆ ಏನು ಎಂದು ಪ್ರಶ್ನಿಸಿದ್ದಾಗಿ ಶರಣ ಗೌಡ ಕಂದಕೂರ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?