ಉಪರಾಷ್ಟ್ರಪತಿಗಳ ಚಪ್ಪಲಿ ಮಿಸ್ಸಿಂಗ್
Team Udayavani, Jan 20, 2018, 7:00 AM IST
ಬೆಂಗಳೂರು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಚಪ್ಪಲಿ ಮಿಸ್ಸಿಂಗ್..! ಹೌದು, ಇಂತಹ ಸ್ವಾರಸ್ಯಕರ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ.
ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜಧಾನಿಗೆ ಬಂದಿರುವ ಉಪರಾಷ್ಟ್ರಪತಿಗಳು ಬೆಳಗ್ಗೆ ಸಂಸದ ಪಿ.ಸಿ.ಮೋಹನ್ ಅವರ ನಿವಾಸಕ್ಕೆ ತಿಂಡಿಗೆಂದು ತೆರಳಿದ್ದರು.
ಮನೆಯೊಳಗೆ ಹೋಗುವ ಮುನ್ನ ಹೊರಗೆ ತೆಗೆದಿಟ್ಟಿದ್ದ ಅವರ ಚಪ್ಪಲಿ ವಾಪಸ್ ಬರುವಷ್ಟರಲ್ಲಿ ಗಾಯಬ್!
ಗಾಬರಿಗೊಂಡು ಅಲ್ಲಿದ್ದವರೆಲ್ಲಾ ಚಪ್ಪಲಿಗಾಗಿ ಹುಡುಕಾಡಿದರಾದರೂ ಸಿಗಲಿಲ್ಲ. ಅಂಗಡಿಗೆ ಹೋಗಿ ಹೊಸ ಚಪ್ಪಲಿ ತರಲು ಉಪ ರಾಷ್ಟ್ರಪತಿಗಳ ಅಂಗರಕ್ಷಕರು ಹೋದರಾದರೂ ಅಷ್ಟು ಬೆಳಗ್ಗೆ ಯಾವ ಚಪ್ಪಲಿ ಅಂಗಡಿಯೂ ತೆಗೆದಿರಲಿಲ್ಲ.
ಇದರಿಂದ ಉಪರಾಷ್ಟ್ರಪತಿಗಳ ಜತೆಗಿದ್ದ ಸಂಸದ ಪಿ.ಸಿ.ಮೋಹನ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮುಜುಗರಕ್ಕೆ ಒಳಗಾದರು. ಕೆಲ ಹೊತ್ತಿನ ಬಳಿಕ ಸಿಬ್ಬಂದಿ ಎಲ್ಲಿಂದಲೋ ಉಪರಾಷ್ಟ್ರಪತಿಗಳ ಚಪ್ಪಲಿ ತಂದುಕೊಟ್ಟ ಮೇಲೆ ಗೊಂದಲಕ್ಕೆ ತೆರೆಬಿದ್ದು ನಂತರ ಅವರು ತಮ್ಮ ಚಪ್ಪಲಿ ಧರಿಸಿ ನಿಗದಿತ ಪಾಲ್ಗೊಳ್ಳಬೇಕಾಗಿದ್ದ ಕಾರ್ಯಕ್ರಮಕ್ಕೆ ಹೊರಟರು.
ಆಗಿದ್ದಿಷ್ಟು: ಬೆಳಗಿನ ಉಪಾಹಾರಕ್ಕಾಗಿ ಸಂಸದ ಪಿ.ಸಿ.ಮೋಹನ್ ಮನೆಗೆ ಬಂದಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮನೆಯ ಹೊರಗೆ ಚಪ್ಪಲಿ ಬಿಟ್ಟು ಒಳ ಹೋಗಿದ್ದರು. ತಿಂಡಿ ಮುಗಿಸಿ ಬರುವಷ್ಟರಲ್ಲಿ ಚಪ್ಪಲಿ ನಾಪತ್ತೆಯಾಗಿತ್ತು. ಮನೆ ಮಹಡಿ ಮೇಲೆ ಬಿಟ್ಟಿರಬಹುದು ಎಂದು ಅಲ್ಲೆಲ್ಲಾ ಹುಡುಕಲಾಯಿತು. ಈ ಮಧ್ಯೆ ಪಿ.ಸಿ.ಮೋಹನ್ ಮನೆಗೆ ಬಂದಿದ್ದ ಅತಿಥಿಯೊಬ್ಬರು ಉಪರಾಷ್ಟ್ರಪತಿಗಳು ಧರಿಸಿದ್ದ ಚಪ್ಪಲಿ ಮಾದರಿಯಲ್ಲೇ ಇದ್ದ ಪಾದರಕ್ಷೆ ಹಾಕಿಕೊಂಡು ಬಂದಿದ್ದರು.ಹೊರಡುವ ಗಡಿಬಿಡಿಯಲ್ಲಿ ಆ ವ್ಯಕ್ತಿ ಉಪರಾಷ್ಟ್ರಪತಿಗಳ ಚಪ್ಪಲಿ ಹಾಕಿಕೊಂಡು ಹೋಗಿದ್ದರು. ಚಪ್ಪಲಿ ನಾಪತ್ತೆ ಸುದ್ದಿ ಗೊತ್ತಾಗುತ್ತಿದ್ದಂತೆ ತಾವು ಧರಿಸಿಕೊಂಡ ಚಪ್ಪಲಿ ಬದಲಾಗಿದೆ ಎಂಬುದನ್ನು ಗಮನಿಸಿದ ಆ ವ್ಯಕ್ತಿ ಚಪ್ಪಲಿ ವಾಪಸ್ ಕೊಟ್ಟು ಕ್ಷಮೆಯಾಚಿಸಿದರು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ