ಮನೆ ವಿಳಾಸ ಮರೆತಿದ್ದ ತಾಯಿ ಮರಳಿ ಗೂಡಿಗೆ
Team Udayavani, Jun 22, 2022, 12:30 PM IST
ಬೆಂಗಳೂರು: ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ತರಕಾರಿ ತರಲು ಹೋಗಿ ವಿಳಾಸ ಮರೆತು ರಸ್ತೆ ಬದಿ ಅಳುತ್ತ ನಿಂತಿದ್ದ ವೃದ್ಧೆ ವಾಸಂತಿ ಎಂಬವವರನ್ನು ಅವರ ಕುಟುಂಬ ಸದಸ್ಯರಿಗೆ ಒಪ್ಪಿಸುವ ಮೂಲಕ ಪುಲಕೇಶಿನಗರ ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ತಮಿಳುನಾಡಿನ ತಿರುವಣ್ಣಾಮಲೈ ನಿಂದ ಬೆಂಗಳೂರಿಗೆ ಪುತ್ರ ರಾಜೇಶ್ ಮತ್ತು ಸೊಸೆ ಗೌತಮಿ ಜತೆ ರೈಲಿನಲ್ಲಿ ಬೆಂಗಳೂರಿಗೆ ಜೂನ್ 16ರಂದು ಬಂದಿದ್ದ ವಾಸಂತಿ ಅವರು, ಕಸ್ತೂರಿನಗರದ ಮನೆಯಲ್ಲಿದ್ದರು. ಕೆಲ ಹೊತ್ತಿನ ಬಳಿಕ ತರಕಾರಿ ತರಲು ಮನೆಯಿಂದ ಹೊರಗಡೆ ಹೋಗಿದ್ದಾರೆ. ಮನೆಯ ರಸ್ತೆ ಗೊತ್ತಾಗದೆ ಠಾಣೆ ವ್ಯಾಪ್ತಿಯ ಚಾರ್ಲಸ್ ಶಾಲೆ ಬಳಿ ನಿತ್ರಾಣಗೊಂಡು ಕುಳಿತಿದ್ದರು. ವೃದ್ಧೆಯನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಜಯಣ್ಣ, ಮಲ್ಲಪ್ಪ ಸಂತಿ ಮಹಿಳೆ ಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಠಾಣೆಯಲ್ಲಿದ್ದ ಎಎಸ್ಐ ಸುಂದರ್ರಾಜ್ ಮಹಿಳೆಯನ್ನು ವಿಚಾರಿಸಿ, ಬಳಿಕ ತಮಿಳುನಾಡಿನ ಹರಣಿ ಠಾಣೆಗೆ ಕರೆ ಮಾಡಿ, ವಾಸಂತಿ ಅವರ ಪತಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ಅವರಿಂದ ಪುತ್ರ ರಾಜೇಶ್ ಮೊಬೈಲ್ ನಂಬರ್ ಸಂಗ್ರಹಿಸಿ ಠಾಣೆಗೆ ಕರೆಸಿಕೊಂಡು ಪುತ್ರ ಮತ್ತು ಸೊಸೆ ಜತೆ ವಾಸಂತಿ ಅವರನ್ನು ಕಳುಹಿಸಿದ್ದಾರೆ.
ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಎಎಸ್ಐ ಸುಂದರ್ ರಾಜ್, ಸಿಬ್ಬಂದಿ ಜಯಣ್ಣ, ಮಲ್ಲಪ್ಪ ಸಂತಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!