ಶಿಕಾರಿಗೆ ಸಿದ್ಧವಾದ ಮೈಸೂರು ರಂಗಾಯಣ


Team Udayavani, Nov 27, 2017, 11:48 AM IST

blore-3.jpg

ಬೆಂಗಳೂರು: ರಂಗ ಪ್ರಯೋಗದಲ್ಲಿ ಸದಾ ಹೊಸತನವನ್ನು ಹುಡುಕುವ ಮೈಸೂರಿನ ರಂಗಾಯಣ ಇದೀಗ ಮತ್ತೂಂದು “ಶಿಕಾರಿ’ಗೆ ಸಿದ್ಧವಾಗಿದ್ದು, ದೇಶವ್ಯಾಪಿ ರಂಗಪ್ರಿಯರ ಮನಗೆಲ್ಲಲು ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದೆ.

ಕನ್ನಡದ ಶ್ರೇಷ್ಠ ಕಥೆ ಹಾಗೂ ಕಾದಂಬರಿಕಾರ ಯಶವಂತ ಚಿತ್ತಾಲರು ಎಪ್ಪತ್ತರ ದಶಕದಲ್ಲಿ ಬರೆದ ನವ್ಯ ಸಾಹಿತ್ಯದ ಸಂಕೀರ್ಣ ಕಾದಂಬರಿ “ಶಿಕಾರಿ’ಗೆ ಹೆಸರಾಂತ ರಂಗ ನಿರ್ದೇಶಕ ಪ್ರಕಾಶ್‌ ಬೆಳವಾಡಿ ಅವರು ರಂಗರೂಪ ನೀಡಿದ್ದಾರೆ. ಇದನ್ನು ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರದರ್ಶಿಸಲು ಮೈಸೂರಿನ ರಂಗಾಯಣ ಅಣಿಯಾಗುತ್ತಿದೆ.

ರಂಗಾಯಣದ ಹಿರಿಯ ಕಲಾವಿದರಾದ ಹುಲುಗಪ್ಪ ಕಟ್ಟಿಮನಿ, ನಂದಿನಿ ಕೆ.ಆರ್‌, ಕೃಷ್ಣಪ್ರಸಾದ್‌, ವಿನಾಯಕ ಭಟ್‌ ಹಾಸಣಗಿ, ಕೃಷ್ಣಕುಮಾರ್‌ ನಾರ್ಣಕಜೆ ಸೇರಿ ದೊಡ್ಡ ಕಲಾವಿದರ ದಂಡೇ ಹಗಲಿರುಳು ತಾಲೀಮು ನಡೆಸುತ್ತಿದೆ. ಶಿಕಾರಿ ನಾಟಕ ಈಗಾಗಲೇ ಮೈಸೂರಿನಲ್ಲಿ 9 ಪ್ರದರ್ಶನ ಕಂಡಿದು, ರಂಗಾಸಕ್ತರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಹೈದರಬಾದ್‌ನಲ್ಲಿ ಪ್ರದರ್ಶನಕ್ಕೆ ಆಹ್ವಾನ ಬಂದಿದೆ.

ಈ ತಂಡ ಅಭಿನಯಿಸಿರುವ ತೇಜಸ್ವಿ ಅವರ “ಕೃಷ್ಣಗೌಡರ ಆನೆ’, ಮರಾಠಿ ಮೂಲದ “ಚೆಕ್‌ವೆುಟ್‌’, ಕುವೆಂಪು ಅವರ “ಶೂದ್ರ ತಪಸ್ವಿನಿ’, ಬಸವಲಿಂಗಯ್ಯ ನಿರ್ದೇಶನದ “ಗಾಂಧಿ ವರ್ಸೆಸ್‌ ಗಾಂಧಿ’, “ಕುಸುಮ ಬಾಲೆ’ ಮತ್ತು “ತಲೆದಂಡ’ ಮೊದಲಾದ ನಾಟಕಗಳು ನೂರಾರು ಪ್ರದರ್ಶನ ಕಂಡಿವೆ. ಶಿಕಾರಿ ನಾಟಕ ಕೂಡ ಆ ಸಾಲಿಗೆ ಸೇರಲಿದೆ ಎಂದು ರಂಗಾಯಣದ ಹಿರಿಯ ಕಲಾವಿದ ಕೃಷ್ಣ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಶವಂತ ಚಿತ್ತಾಲರು ದೂರದೃಷ್ಟಿಯುಳ್ಳ ಕಾದಂಬರಿಕಾರರು.”ಕುಮಟೆಗೆ ಬಂದ ಕಿಂದರಿ ಜೋಗಿ’, “ಓಡಿ ಹೋದ ಮುಟ್ಟಿ ಬಂದು’ ಎಂಬ ಕಥಾಸಂಕಲಗಳು, “ಮೂರು ದಾರಿಗಳು’, “ಶಿಕಾರಿ’, “ಛೇಧ’, “ಪುರುಷೋತ್ತಮ’ ಕಾದಂಬರಿಗಳನ್ನು ಬರೆದಿದ್ದಾರೆ. ಶ್ರೇಷ್ಠ ವಿರ್ಮಕ ಜಿ. ಎಸ್‌.ಅಮೂರರ ಮಾತಿನಲ್ಲಿ ಹೇಳುವುದಾರೆ ಚಿತ್ತಾರ ಶಿಕಾರಿ ಕಾದಂಬರಿ ಕನ್ನಡದ ಗತ್ತು ಎಂದು ರಂಗ ನಿರ್ದೇಶಕ ಪ್ರಕಾಶ್‌ ಬೆಳವಾಡಿ ಹೇಳಿದರು.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ಹೈದ್ರಾಬಾದ್‌, ಮುಂಬೈನಿಂದಲೂ ಶಿಕಾರಿ ನಾಟಕ ಪ್ರದರ್ಶನಕ್ಕೆ ಆಹ್ವಾನ ಬಂದಿದೆ. ದೇಶದ ಹಲವು ಭಾಗಗಳಲ್ಲಿ ಈ ನಾಟಕ ಪ್ರದರ್ಶಿಸುವ ಹಂಬಲ ರಂಗಾಯಣದ್ದಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಮೈಸೂರು ರಂಗಾಯಣ ತಂಡ ಪ್ರದರ್ಶನ ನೀಡಲಿದೆ.
 ● ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣ

ಚಿತ್ತಾಲರು ಬದುಕಿರುವಾಗಲೇ ಅವರ “ಶಿಕಾರಿ’ ಕಾದಂಬರಿಯನ್ನು ರಂಗರೂಪಕ್ಕೆ ತರಬೇಕಿತ್ತು. ಅವರು ತುಂಬಾ ಖುಷಿ ಪಡುತ್ತಿದ್ದರು. ಎಪ್ಪತ್ತರ ದಶಕದಲ್ಲಿಯೇ ಕಾರ್ಪೊರೆಟ್‌ ಸಂಸ್ಕೃತಿಯ ಅನಾಹುತಗಳ ಬಗ್ಗೆ ಊಹಿ ಪಾತ್ರಗಳನ್ನು ರಚಿಸಿದ್ದಾರೆ. ಅವರೊಬ್ಬ ದೂರ ದೃಷ್ಟಿಯುಳ್ಳ ಕಾದಂಬರಿಕಾರ. 
● ಪ್ರಕಾಶ್‌ ಬೆಳವಾಡಿ, ರಂಗ ನಿರ್ದೇಶಕ

ದೇವೇಶ ಸೂರಗುಪ್ಪೆ

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.