ಉಪಚುನಾವಣೆ ಪಂಚಾಂಗದಲ್ಲಿ ಪಂಚ ನಾಯಕರ ಭವಿಷ್ಯ!


Team Udayavani, Apr 8, 2017, 3:45 AM IST

BY-election.jpg

ಮೊದಲೇ ಕಾವೇರಿದ ರಾಜ್ಯಕ್ಕೆ ರಾಜಕೀಯ ಬಿಸಿ ಹೆಚ್ಚಿಸಿದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಬಹಿರಂಗ ಪ್ರಚಾರ ಶುಕ್ರವಾರ ಅಂತ್ಯವಾ ಗಿದೆ. ಈಗ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಅಗತ್ಯಕ್ಕಿಂತ ಹೆಚ್ಚೇ ಪ್ರತಿಷ್ಠೆಯಾಗಿಬಿಟ್ಟಿರುವ ಈ ಚುನಾವಣೆಯಲ್ಲಿ ಗೆಲ್ಲುವವರು ಮತ್ತು ಸೋಲುವವರು ಬರಿ ಅಭ್ಯರ್ಥಿಗಳಲ್ಲ. ಈ ಚುನಾವಣೆಯಲ್ಲಿ ತಮ್ಮನ್ನೇ ತಾವು ಮುಡಿಪಾಗಿಟ್ಟುಕೊಂಡು ಪ್ರತಿಷ್ಠೆಯನ್ನೇ ಅಡವಿಟ್ಟಿರುವ ಐವರು ರಾಜಕೀಯ ನಾಯಕರ ಗೆಲುವು ಸೋಲಿನ ಲೆಕ್ಕಾಚಾರವೂ ಇಲ್ಲಿದೆ. ಈ ಫ‌ಲಿತಾಂಶದ ಹಿಂದೆ ಯಾರ್ಯಾರ ರಾಜಕೀಯ ಭವಿಷ್ಯ ಅಡಗಿದೆ ಎಂಬ ವಿಶ್ಲೇಷಣೆ ಇಲ್ಲಿದೆ.

ಸಿದ್ದರಾಮಯ್ಯ
ಗೆದ್ದರೆ: 
-ಪಕ್ಷದಲ್ಲಿ ಪ್ರಶ್ನಾತೀತ ನಾಯಕ 
-ಮುಂದಿನ ಚುನಾ ವಣೆ ಯಲ್ಲಿ ಖಚಿತ ನಾಯಕತ್ವ‌ 
-ಅಭ್ಯರ್ಥಿಗಳ ಆಯ್ಕೆ ಯಲ್ಲಿ ಪ್ರಾಮುಖ್ಯತೆ 
-ಸರ್ಕಾರಕ್ಕೆ ಜನಮನ್ನಣೆ ಇದೆ ಎನ್ನಲು ಸಾಧ್ಯ 
-ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಧಿಕಾರ

ಸೋತರೆ: 
-ಆಡಳಿತ ವಿರೋಧಿ ಅಲೆ ಸಾಬೀತು 
-ಪಕ್ಷದೊಳಗೆ ಬಲ ಕುಸಿತ 
-ಮುಂದಿನ ಚುನಾವಣೆ ಮೇಲೆ ಪರಿಣಾಮ
-ಅಹಿಂದ ವರ್ಗ ಪಕ್ಷದಿಂದ ದೂರವಾಗುತ್ತಿರುವ ಮುನ್ಸೂಚನೆ

ಯಡಿಯೂರಪ್ಪ
ಗೆದ್ದರೆ: 
-ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಬಲವರ್ಧನೆ
-ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಇವರ ತೀರ್ಮಾನವೇ ಅಂತಿಮ 
-ಚುನಾವಣೆ ಸಾರಥ್ಯಅಬಾಧಿತ 
-ವಿರೋಧಿ ಬಣಕ್ಕೆ ತಿರುಗೇಟು 

ಸೋತರೆ: 
-ಪಕ್ಷದಲ್ಲಿ ಪ್ರಾಮುಖ್ಯತೆ ಕ್ಷೀಣಿಸಬಹುದು
-ವಿರೋಧಿ ಬಣಗಳ ಕೈ ಮೇಲಾಗಬಹುದು
-ಪ್ರತಿ ನಿರ್ಧಾರಕ್ಕೂ ಹೈಕಮಾಂಡ್‌ ಸಮ್ಮತಿ ಬೇಕಾಗಬಹುದು
-ಆರೆಸ್ಸೆಸ್‌, ಪಕ್ಷದ ಹಿಡಿತ ಇವರ ಮೇಲೆ ಹೆಚ್ಚಾಗಬಹುದು.

ಜಿ.ಪರಮೇಶ್ವರ
ಗೆದ್ದರೆ: 

-ನಂಜನಗೂಡಿನಲ್ಲಿ ಅಗ್ನಿ ಪರೀಕ್ಷೆ ಎದುರಿಸಿ ಗೆದ್ದರೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮುಂದುವರೆಸಲು ಒತ್ತಡ ಹಾಕ ಬ ಹುದು 
-ದಲಿತ ನಾಯಕನೆಂದು ಹೇಳಲು ಪುಷ್ಟಿ
-ಸಿಎಂ ರೇಸ್‌ನಲ್ಲಿ ಮುಂಚೂಣಿಗೆ ಬರಲು ಅವಕಾಶ
-ಮುಂದೆ ಟಿಕೆಟ್‌ ಹಂಚಿಕೆಯಲ್ಲಿ ಪ್ರಮುಖ ಪಾತ್ರ.

ಸೋತರೆ: 
-ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಖಚಿತ
-ಪ್ರಭಾವಿ ದಲಿತ ನಾಯಕನಲ್ಲ ಎಂಬ ಸಂದೇಶ ರವಾನೆ

ಡಿ.ಕೆ.ಶಿವಕುಮಾರ
ಗೆದ್ದರೆ: 
-ಗುಂಡ್ಲುಪೇಟೆ ಜವಾಬ್ದಾರಿ ಹೊತ್ತಿರುವ ಇವರು ಅಲ್ಲಿ ಗೆದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹಾದಿ ಸುಗಮ
-ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲು ಅವಕಾಶ 
-ಕೃಷ್ಣ ನಿರ್ಗಮನದ ನಂತರ ಕಾಂಗ್ರೆಸ್‌ನಲ್ಲಿ ಒಕ್ಕಲಿಗ ನಾಯಕನೆಂದು ಬಿಂಬಿಸಿಕೊಳ್ಳಲು ಅವಕಾಶ

ಸೋತರೆ: 
-ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೈ ತಪ್ಪಬಹುದು
– ನಾಯಕತ್ವ ನೀಡಲು ಹೈಕಮಾಂಡ್‌ ಹಿಂದೇಟು ಸಾಧ್ಯತೆ
-ಒಕ್ಕಲಿಗರ ವಿಶ್ವಾಸಗಳಿಸಲು ವಿಫ‌ಲ ಎಂಬ ಸಂದೇಶ ರವಾನೆ

ಶ್ರೀನಿವಾಸ್‌ ಪ್ರಸಾದ್‌
ಗೆದ್ದರೆ: 

-ಸಚಿವ ಪದವಿ ಕಿತ್ತುಕೊಂಡ ಸಿಎಂ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಂಡು ಬಿಜೆಪಿಯಲ್ಲಿ ಭದ್ರ ಬೇರು 
-ಪ್ರಭಾವಿ ದಲಿತ, ರಾಷ್ಟ್ರೀಯ ನಾಯಕ ನೆಂದು ಹೊರಹೊಮ್ಮಬಹುದು

ಸೋತರೆ: 
-ರಾಜಕೀಯ ಭವಿಷ್ಯವೇ ಅಂತ್ಯವಾಗಬಹುದು
-ಪಕ್ಷಾಂತರ ನಿರ್ಧಾರ ತಪ್ಪು ಎಂದು ಸಾಬೀತು
-ಬಿಜೆಪಿಯಲ್ಲಿ ಮೂಲೆಗುಂಪು ಸಾಧ್ಯತೆ

ಟಾಪ್ ನ್ಯೂಸ್

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.