ಮುಂದಿನ ಟಾರ್ಗೆಟ್‌ ನಾನೇ: ನಿಡುಮಾಮಿಡಿ ಸ್ವಾಮೀಜಿ


Team Udayavani, Sep 18, 2017, 6:35 AM IST

Veerabhadra-Chennamalla-Swa.jpg

ಬೆಂಗಳೂರು: ಹಂತಕರು ಐವರು ವಿಚಾರವಾದಿಗಳ ಹತ್ಯೆಯ ಗುರಿ ಇಟ್ಟುಕೊಂಡಿದ್ದು, ಅದರಲ್ಲಿ ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶರ ಹತ್ಯೆ ಆಗಿದೆ. ಅವರ ಮುಂದಿನ ಟಾರ್ಗೆಟ್‌ ನಾನು, ಮುಂದೆ  ಭಗವಾನ್‌ ಇರಬಹುದು ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯವರ ಹತ್ಯೆಯಾಗುವ 15 ದಿನಗಳ ಮುಂಚೆ ಹುಬ್ಬಳ್ಳಿಯಲ್ಲಿ ಕೆಲವೊಂದು ಸಂಘಟನೆಯವರು ಪತ್ರಿಕಾಗೋಷ್ಠಿ ಕರೆದು ಕರ್ನಾಟಕದ ಐದು ಜನ ವಿಚಾರವಾದಿಗಳನ್ನು ಗುಂಡಿಕ್ಕಿ ಕೊಲ್ಲುತ್ತೇವೆ ಎಂದು ಹೇಳಿದ್ದರು. ಅದಾಗಿ 15 ದಿನಗಳೊಳಗೆ ಕಲುºರ್ಗಿ ಯವರ ಹತ್ಯೆಯಾಗಿದೆ. ಇದೀಗ ಗೌರಿ ಲಂಕೇಶ್‌ ಬಲಿಯಾಗಿದೆ. 3ನೆಯದ್ದು ನನ್ನ ಸರದಿ ಇರಬಹುದು ಎಂದರು.

ಕಲಬುರ್ಗಿಯವರ ಹತ್ಯೆಯ ಹಂತಕರನ್ನು, ಪ್ರಾಯೋಜಕರನ್ನು ಕಂಡು ಹಿಡಿದಿದ್ದರೆ ಗೌರಿ ಹತ್ಯೆ ತಪ್ಪಿಸಬಹುದಾಗಿತ್ತು ಎಂಬುದು ನನ್ನ ಸ್ಪಷ್ಟ ನಿಲುವು. ಕಲಬುರ್ಗಿ ಅವರ ಹತ್ಯೆಯಾಗಿ 2 ವರ್ಷ ಒಂದು ವಾರ ಆಗುವುದರೊಳಗೆ 2ನೇ ಬಲಿಯಾಗಿದೆ. ಅಂದಿನ ಗೃಹ ಸಚಿವರು ಹತ್ಯೆ ಕುರಿತು ಎಷ್ಟು ಕಾಳಜಿ, ಪರಿಣಾಮಕಾರಿ ಕ್ರಮಕೈಗೊಳ್ಳಬೇಕಿತ್ತೋ ಅಷ್ಟು ಕೈಗೊಳ್ಳಲಿಲ್ಲ. ಕಲಬುರ್ಗಿ ಹತ್ಯೆಯ ಹಂತಕರನ್ನು ಪತ್ತೆ ಹಚ್ಚುವಲ್ಲಿ ಆದ ವಿಫ‌ಲತೆಯ ಮುಂದುವರೆದ ಭಾಗವಾಗಿ ಗೌರಿ ಹತ್ಯೆ ಆಗಿದೆ ಎಂದರು.

ಕಲಬುರ್ಗಿ ಅವರ ಹತ್ಯೆ ಬಗ್ಗೆ ಬಹಳ ಸ್ಪಷ್ಟವಾದಂತಹ ಸಾಕ್ಷಿ, ಆಧಾರ ಸರ್ಕಾರದ ಮುಂದೆ ಇತ್ತು. ಅಂದು ಪತ್ರಿಕಾಗೋಷ್ಠಿ ನಡೆಸಿ ಹತ್ಯೆ ಮಾಡುವುದಾಗಿ ಹೇಳಿದ್ದವರನ್ನು ತನಿಖೆಗೊಳಪಡಿಸಿದ್ದರೆ ಎಲ್ಲವೂ ಬಯಲಿಗೆ ಬರುತ್ತಿತ್ತು ಎಂದ ಅವರು, ಹಂತಕರಿಗೆ, ಹತ್ಯೆಯ ಪ್ರಾಯೋಜಕರಿಗೆ ಕಾನೂನಿನ ಭಯವೂ ಇಲ್ಲ. ಸರ್ಕಾರದ ಭಯವೂ ಇಲ್ಲ. ನಾನು ಮೊದಲಿನಿಂದಲೂ ಹೇಳುತ್ತಿರುವಂತೆ ಹತ್ಯೆಯ ಪ್ರಾಯೋಜಕರು, ಪ್ರೇರಕರು ಕರ್ನಾಟಕದವರೇ ಎಂದು ಹೇಳಿದರು.

ವೈಚಾರಿಕ ಮತ್ತು ಸೈದ್ಧಾಂತಿಕ ಕಾರಣಗಳಿಗಾಗಿ ವಿಚಾರವಾದಿಗಳನ್ನು ವಿರೋಧಿಸಿದರೆ, ಜೀವ ಸಹಿತ ಬಿಡಲ್ಲ ಎನ್ನುವ ಈ ದಬ್ಟಾಳಿಕೆ ಸಂಸ್ಕೃತಿ ನಾಗರೀಕ ಸಮಾಜಕ್ಕೆ ಶ್ರೇಯಸ್ಸು ಅಲ್ಲ. ಪ್ರಜಾಪ್ರಭುತ್ವ ರೂಪಗೊಳ್ಳುವ, ಬೆಳೆಯುವ ವಿಧಾನವೂ ಅಲ್ಲ. ಹಾಗಾಗಿ ಯಾವುದೇ ಹಿಂಸಾತ್ಮಕ ಸಂಘಟನೆಗಳು, ಸಾಮಾಜಿಕ ಗುಂಪುಗಳಿರಲೀ ಅಥವಾ ಧಾರ್ಮಿಕ ಅಥವಾ ರಾಜಕೀಯ ಪಕ್ಷಗಳೇ ಇರಲಿ. ಹಿಂಸೆಯ ಸಿದ್ಧಾಂತದಿಂದ ಹೊರಗೆ ಬರಬೇಕು. ಪರಸ್ಪರರನ್ನು ಅಂತ್ಯಗೊಳಿಸುವ, ಬಾಯಿ ಮುಚ್ಚಿಸುವ ಹಿಂಸಾ ವಿಧಾನಗಳು ಇದು ಪ್ರಜಾಪ್ರಭುತ್ವದ ಯಶಸ್ಸಿಗೆ ಪೂರಕವಾಗಿಲ್ಲ. ಹಿಂಸೆಯಿಂದ ಪ್ರಜಾಪ್ರಭುತ್ವ ಕಟ್ಟಲು ಖಂಡಿತ ಸಾಧ್ಯವಿಲ್ಲ. ಈ ದಬ್ಟಾಳಿಕೆ ನಡವಳಿಕೆಯನ್ನು ಬಿಟ್ಟು ಬಿಡಬೇಕು ಎಂದರು.

ಕಲಬುರ್ಗಿ ಹತ್ಯೆಯನ್ನು ಸಂಭ್ರಮಿಸಿದಂತಹ ಅದೇ ಮನಸುಗಳೇ ಗೌರಿ ಹತ್ಯೆಯ ಸಂದರ್ಭದಲ್ಲೂ ಸಂಭ್ರಮಿಸಿದ್ದನ್ನು ನೋಡಿದ್ದೇವೆ. ಸಹಜವಾಗಿಯೇ ಪ್ರಬಲವಾದ ಅನುಮಾನ ಯಾರ ಕಡೆಗೆ ಹೋಗುತ್ತದೆ? ಗೌರಿ ಹತ್ಯೆಯಾದಾಗ ಕನಿಷ್ಠ ಸಹಾನುಭೂತಿ, ಸದ್ಭಾವನೆ ಎಲ್ಲ ವಲಯದಿಂದಲೂ ಬರಲಿಲ್ಲ ಎಂಬುದು ಕೂಡ ಒಂದು ಅನುಮಾನಕ್ಕೆ ಕಾರಣವಾಗುತ್ತದೆ. ತನಿಖೆಯು ವಿವಿಧ ಆಯಾಮಗಳಲ್ಲಿ, ದೃಷ್ಟಿಕೋನಗಳಲ್ಲಿ ನಡೆಯಬೇಕು. ವೈಚಾರಿಕ ಚಿಂತನೆಯ ಮೂಲಕ ಕೋಮುವಾದಿತನವನ್ನು ವಿರೋಧಿಸುತ್ತಿದ್ದ ಗೌರಿಯದ್ದು ರಾಜಕೀಯ ಹತ್ಯೆ. ಎಂ.ಎಂ.ಕಲಬುರ್ಗಿ ಅವರದ್ದು ಧಾರ್ಮಿಕ ಹತ್ಯೆ ಎಂದು ಹೇಳಿದರು.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.