ನಿತ್ಯಾನಂದ ಮಧುರೈ ಪ್ರವೇಶ ನಿರ್ಬಂಧ
Team Udayavani, Oct 12, 2017, 12:00 PM IST
ಚೆನ್ನೈ: ಮಧುರೈ ಅಧೀನಮ್ ಮಠಕ್ಕೆ ಪ್ರವೇಶಿದಂತೆ ಸ್ವಾಮಿ ನಿತ್ಯಾನಂದಗೆ ಮದ್ರಾಸ್ ಹೈಕೋರ್ಟ್ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಮಠಕ್ಕೆ ಪ್ರವೇಶಿಸಲು ಪೊಲೀಸ್ ಭದ್ರತೆಯನ್ನು ಒದಗಿಸಬೇಕು ಎಂದು ನಿತ್ಯಾನಂದ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆರ್. ಮಹದೇವನ್ ಈ ಆದೇಶ ಹೊರಡಿಸಿದ್ದು, ನಿತ್ಯಾನಂದ ಹಾಗೂ ಅವರ ಭಕ್ತರು ಮಧುರೈ ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನಿರ್ದೇಶನ ನೀಡಿದೆ. ಅಲ್ಲದೆ ಈ ಸಂಬಂಧ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ, ಹಿಂದು ಧಾರ್ಮಿಕ ಮತ್ತು ದತ್ತಿ ಕಮಿಷನರ್ ಹಾಗೂ ಮಧುರೈ ಜಿಲ್ಲಾಧಿಕಾರಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ಮುಂದೂಡಿದೆ.
ಮಧುರೈ ಮಠಕ್ಕೆ ನೇಮಕಗೊಂಡಿದ್ದ ನಿತ್ಯಾನಂದ: 2012ರಲ್ಲಿ ಮಧುರೈ ಅಧೀನಮ್ ಪೀಠದ 293ನೇ ಸ್ವಾಮೀಜಿ
ಯನ್ನಾಗಿ ನಿತ್ಯಾನಂದರನ್ನು ಘೋಷಸಲಾಗಿತ್ತು. ಆದರೆ ಇದಕ್ಕೆ ಹಿರಿಯ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಈ ನೇಮಕ ವನ್ನು ರದ್ದುಗೊಳಿಸಿದ್ದರು. ಈ ಹಿನ್ನೆಲೆ ಯಲ್ಲಿ ನಿತ್ಯಾನಂದ ಹೈಕೋರ್ಟ್ ಮೊರೆ ಹೋಗಿದ್ದು, ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವಂತೆ ಆಗ್ರಹಿಸಿದ್ದರು. ಅಲ್ಲದೆ ಮಠಕ್ಕೆ ನೇಮಕಗೊಂಡ ನಂತರ ರದ್ದುಗೊಳಿಸಲಾಗದು ಎಂದು ನಿತ್ಯಾನಂದ ವಾದಿಸಿದ್ದರು.
ಆಸ್ತಿ ಕಬಳಿಸುವ ಹುನ್ನಾರ: ಈ ಮಧ್ಯೆ ಮಠಕ್ಕೆ ಹಿಂದಿನ ಬಾಗಿಲಿನಿಂದ ಪ್ರವೇಶಿಸಲು ನಿತ್ಯಾನಂದ ಪ್ರಯತ್ನಿಸಿದ್ದರು
ಎಂದು ಆರೋಪಿಸಲಾಗಿದೆ. ಮಠದ ಆಸ್ತಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಧುರೈ ಮಠದ ಆಡಳಿತ
ಮಂಡಳಿ ಪ್ರತ್ಯೇಕ ದೂರು ಸಲ್ಲಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ