ಅಹಿಂಸೆ, ಶಾಂತಿ ಅಂಶಗಳು ಜಗತ್ತಿಗೆ ಮಾದರಿ


Team Udayavani, Jun 24, 2019, 3:07 AM IST

ahimse

ಬೆಂಗಳೂರು: ಜೈನ ಧರ್ಮವು ಪುರಾತನ ಆಚರಣೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದು, ಸ್ವಯಂ ಕಠೊರ ಆಚರಣೆಗಳ ಮೂಲಕ ಅಹಿಂಸೆ ಹಾಗೂ ಶಾಂತಿ ಸಂದೇಶಗಳನ್ನು ಸಾರುತ್ತಿರುವ ಪ್ರಪಂಚದ ವಿಶೇಷ ಧರ್ಮವಾಗಿದೆ ಎಂದು ಜಲಸಂಪನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಆಚಾರ್ಯ ಮಹಾಶ್ರಮಣ್‌ ಚತುರ್ಮಾಸ ಟ್ರಸ್ಟ್‌ ವತಿಯಿಂದ ಬೆಂಗಳೂರು ಅರಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೈನ ಸಮುದಾಯದ ಎಚ್‌.ಎಚ್‌.ಆಚಾರ್ಯ ಮಹಾಶ್ರಮಂಜಿ ಅವರ ಅಭಿನಂದನೆ ಹಾಗೂ ನಾಗರಿಕ ಅಭಿನಂದನಾ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಜೈನ ಧರ್ಮದ ಆಚರಣೆಗಳು ಪ್ರಧಾನವಾಗಿ ಅಹಿಂಸೆ ಹಾಗೂ ಶಾಂತಿ ಅಂಶಗಳನ್ನು ಒಳಗೊಂಡಿದ್ದು, ಎಲ್ಲರಿಗೂ ಮಾದರಿಯಾಗಿವೆ. ಜೈನ ಮನಿಗಳು ಹಾಗೂ ಜೈನ ಧರ್ಮ ಪಾಲಕರು ಸ್ವಯಂ ಕಠೊರ ಆಚರಣೆಗಳ ಮೂಲಕ ಪ್ರಪಂಚಕ್ಕೆ ಅಹಿಂಸೆ ಸಂದೇಶ ಸಾರುತ್ತಿದ್ದಾರೆ ಎಂದರು.

ಧರ್ಮ ಯಾವುದಾದರೂ ತತ್ವ ಒಂದೇ ಆಗಿರುತ್ತದೆ ಎಂಬುದನ್ನು ಮರೆಯಬಾರದು. ಮಹಾಶ್ರಮಂಜಿ ಕಾಲ್ನಡಿಗೆಯ ಮೂಲಕ ಸಂಚರಿಸಿ ಅಹಿಂಸೆ, ಶಾಂತಿ ಸಂದೇಶವನ್ನು ಪ್ರಪಂಚಕ್ಕೆ ಸಾರುತ್ತಿದ್ದಾರೆ. ಇಂತಹ ಮಹನೀಯರು ನಮ್ಮ ರಾಜ್ಯಕ್ಕೆ ಬೆಂಗಳೂರಿಗೆ ಬಂದಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಪ್ರಕೃತಿಯಲ್ಲಿ ಶೇಷ್ಠ ಎಂದು ಕರೆಸಿಕೊಳ್ಳುವ ಮಾನವನಿಂದಲೇ ಎರಡು ಮಹಾಯುದ್ಧಗಳು ನಡೆದಿವೆ. ಹೀಗಾಗಿ, ಜಗತ್ತಿಗೆ ಅಂಹಿಸೆ ಹಾಗೂ ಶಾಂತಿ ಸಂದೇಶದ ಅವಶ್ಯಕತೆ ಹೆಚ್ಚಿದೆ.

ನಮ್ಮ ವಿಜ್ಞಾನ ಹೊರಗಿನ ಬದುಕಿನಲ್ಲಿ ಆವಿಷ್ಕಾರ ಕ್ರಾಂತಿ ಮಾಡಿರಬಹುದು. ಆದರೆ, ಮನಸಿನಲ್ಲಿ ಕೆಟ್ಟ ಭಾವನೆಯನ್ನು ತೊಳೆದು ಹಾಕುವ ಯಾವುದೇ ತಂತ್ರಜ್ಞಾನ ಆವಿಷ್ಕಾರ ಮಾಡಿಲ್ಲ. ವ್ಯಕ್ತಿಯು ಮೊದಲು ಆಂತರಿಕ ವಿಚಾರಗಳ ಹಿಡಿತ ಸಾಧಿಸಬೇಕು ಎಂದು ಸಂದೇಶ ನೀಡಿದರು.

ಆದಿಚುಂಚನಗಿರಿ ಸ್ವಾಮೀಜಿಗಳಿಗೂ ಜೈನ ಸಮುದಾಯದ ಆಚಾರ್ಯರಿಗೂ ಬಹಳ ಒಡನಾಟವಿತ್ತು. ಎರಡೂವರೆ ದಶಕಗಳಿಂದ ದೇಶ ವಿದೇಶದಲ್ಲಿ ನಡೆದ ಚರ್ತುಮಾಸ ಸಂದರ್ಭದ ಆಚಾರ್ಯರ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದಿಂದ ಭಾಗವಹಿಸುತ್ತಾ ಬಂದಿದ್ದೇವೆ.

ಆಚಾರ್ಯರು ಬದುಕಿನುದ್ಧಕ್ಕೂ ಅಹಿಂಸೆ ವೃತ ಧರಿಸಿ, ಎಲ್ಲೆಡೆ ಕಾಲ್ನಡಿಗೆಯಲ್ಲಿ ಅಹಿಂಸೆ ಯಾತ್ರೆ ಮಾಡಿ ಸಂದೇಶ ಸಾರುತ್ತಾ ಬಂದಿದ್ದಾರೆ. ಇಂತಹ ಮಹನೀಯರನ್ನು ಬಹುದಿನಗಳಿಂದ ಕರ್ನಾಟಕಕ್ಕೆ ಆಗಮಿಸುವಂತೆ ಕೋರುತ್ತಾ ಬಂದಿದ್ದು, ಇಂದು ಅವರನ್ನು ಸ್ವಾಗತಿಸಲು ಹೆಮ್ಮೆಯಾಗುತ್ತಿದೆ ಎಂದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್‌ ಮಾತನಾಡಿ, ಹಿಂದಿನಿಂದಲೂ ನಮ್ಮ ವಂಶಸ್ಥರಿಗೂ ಹಾಗೂ ಜೈನ ಧರ್ಮಕ್ಕೂ ಅವಿನಾಭಾವ ಸಂಬಂಧವಿದ್ದು, ಜೈನ ಆಚಾರ್ಯರನ್ನು ಸತ್ಕರಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಶಾಂತಿಧೂತ ಆಚಾರ್ಯ ಮಹಾಶ್ರಮಂಜಿ ಅವರನ್ನು ನಮ್ಮ ಬೆಂಗಳೂರು ಅರಮನೆಗೆ ಆಹ್ವಾನಿಸಲು ಹೆಮ್ಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಆಚಾರ್ಯ ಸಂದೇಶಗಳನ್ನು ಒಳಗೊಂಡ ಕನ್ನಡ ಪುಸ್ತಕಗಳನ್ನು ಈ ವೇಳೆ ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌, ಮೇಯರ್‌ ಗಂಗಾಬಿಕೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಭಾಗವಹಿಸಿದ್ದರು.

ಸದ್ಭಾವನೆ, ನೈತಿಕತೆ ಹಾಗೂ ಮಾದಕ ವ್ಯಸನ ಮುಕ್ತಿ: ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಎಚ್‌.ಎಚ್‌.ಆಚಾರ್ಯ ಮಹಾಶ್ರಮಂಜಿ ಅವರು, ಎಲ್ಲೆಡೆ ಜೈನ ಪರಂಪರೆಯ ಅಹಿಂಸೆ ಸಂದೇಶ ಸಾರುವ ನಿಟ್ಟಿನಲ್ಲಿ 2014 ನವೆಂಬರ್‌ನಲ್ಲಿ ದೆಹಲಿಯಿಂದ ಕಲಾ°ಡಿಗೆ ಮೂಲಕ ಅಹಿಂಸಾ ಯಾತ್ರೆ ಆರಂಭಿಸಲಾಯಿತು. ಈವರೆಗೆ ವಿವಿಧ ರಾಜ್ಯಗಳು, ಎರಡು ದೇಶಗಳನ್ನು ಸಂಚರಿಸಿದ್ದೇವೆ. ಮುಖ್ಯವಾಗಿ ಎಲ್ಲೆಡೆ ಸದ್ಭಾವನೆ, ಕೆಲಸದಲ್ಲಿ ನೈತಿಕತೆ, ಮಾದಕ ವಸ್ತುಗಳಿಂದ ಮುಕ್ತಿ ವಿಷಯವನ್ನು ಬೋಧಿಸಲಾಗುತ್ತಿದೆ ಎಂದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.