ಸಾಹಿತಿಗೆ ಪ್ರಶಸ್ತಿ ಗುರಿಯಲ್ಲ:ಕಾಯ್ಕಿಣಿ
Team Udayavani, Jan 31, 2019, 6:52 AM IST
ಕೋಲ್ಕತಾ: ‘ಪ್ರಶಸ್ತಿಗಳು ಮ್ಯಾರಥಾನ್ ವೇಳೆ ಓಟಗಾರನಿಗೆ ನೀಡುವ ಚಪ್ಪಾಳೆಯ ಪ್ರೋತ್ಸಾಹವಿದ್ದಂತೆ. ಆ ಚಪ್ಪಾಳೆಗಳತ್ತ ಓಟಗಾರ ಮರುಳಾಗುವ ಹಾಗಿಲ್ಲ. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶವಿಲ್ಲ. ಓಟ ಮುಗಿಸುವುದೊಂದೇ ಅವನ ಗುರಿ. ಹಾಗಾಗಿ, ಆತ ನಿರಂತರವಾಗಿ ಸಾಗುತ್ತಲೇ ಇರಬೇಕಾಗುತ್ತದೆ’. 2018ರ ಸೌತ್ ಏಷ್ಯನ್ ಲಿಟರೇಚರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಕನ್ನಡದ ಸಾಹಿತಿ ಜಯಂತ್ ಕಾಯ್ಕಿಣಿ, ತಮಗೆ ಸಂದ ಪ್ರತಿಷ್ಠಿತ ಗೌರವದ ಬಗ್ಗೆ ಹೇಳಿದ ಮಾತುಗಳಿವು.
ಕಾಯ್ಕಿಣಿ ಅವರ ಕಥೆಗಳ ಇಂಗ್ಲೀಷ್ ಅನುವಾದದ ಕೃತಿಯಾದ ‘ನೋ ಪ್ರಸೆಂಟ್ಸ್ ಪ್ಲೀಸ್: ಮುಂಬೈ ಸ್ಟೋರಿಸ್’ ಎಂಬ ಕೃತಿಗೆ ಅನುವಾದಕ ತೇಜಸ್ವಿನಿ ನಿರಂಜನ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿರುವ ಅವರು, ಪಿಟಿಐನೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.
”ಅನುವಾದಿತ ಕೃತಿಯೊಂದಕ್ಕೆ ಪ್ರಶಸ್ತಿ ಬಂದಿರುವುದು ಒಳ್ಳೆಯ ವಿಚಾರವೇ. ಇದರಿಂದ, ಇತರ ಲೇಖಕರ ಕೃತಿಗಳ ಅನುವಾದಿತ ಪುಸ್ತಕಗಳನ್ನು ಮುದ್ರಿಸಲು ಮುದ್ರಕರು ಮುಂದೆ ಬರಬಹುದು. ಆದರೆ, ಈ ಪ್ರಶಸ್ತಿಗಳು ಸಾಹಿತಿಗಳಿಗೆ ಪ್ರಮುಖವಾಗಬಾರದು. ಏಕೆಂದರೆ, ಸಾಹಿತಿ ಪ್ರಶಸ್ತಿಗಾಗಿಯೇ ಸಾಹಿತ್ಯ ರಚಿಸುತ್ತಾನೆ ಎಂಬ ಅಭಿಪ್ರಾಯ ಜನರಲ್ಲಿ ಮೂಡದಂತೆ ನೋಡಬೇಕಿರುವುದು ಸಾಹಿತಿಗಳ ಜವಾಬ್ದಾರಿಯಾಗಿರುತ್ತದೆ” ಎಂದು ಅವರು ತಿಳಿಸಿದ್ದಾರೆ.
ಇನ್ನು, ಪುಸ್ತಕದ ಬಗ್ಗೆ ಮಾತನಾಡಿದ ಅವರು, ನಾನು ಈ ಕತೆಗಳನ್ನು ಸ್ಮಾರ್ಟ್ ಫೋನ್ ಯುಗದ ಆರಂಭಕ್ಕೂ ಮುನ್ನ ಬರೆದಿದ್ದೆ. ಅಸಲಿಗೆ ಮುಂಬೈ ಒಂದು ಅಧ್ಯಾತ್ಮಿಕ ನಗರ. ಹಾಸಿಗೆ ಇದ್ದಷ್ಟು ಕಾಲು ಚಾಚುವ ಸಂಸ್ಕೃತಿಯುಳ್ಳ ಜನರಿರುವ ನಗರ. ಅಂಥ ನಗರ ಜಾಗತೀಕರಣದ ರಂಗಿನಲ್ಲಿ ಹೇಗೆ ಪಲ್ಲಟಗೊಂಡಿತು? ಅಲ್ಲಿನ ಜನಜೀವನ ಹೇಗೆ ಬದಲಾಗುತ್ತಾ ಹೋಯಿತು ಎಂಬುದನ್ನು ನಾನು ಅಲ್ಲಿ ಕಳೆದ 22 ವರ್ಷದ ಜೀವನಾನುಭವದ ಮೇಲೆ ಬರೆದೆ” ಎಂದಿದ್ದಾರೆ. ಅಂದಹಾಗೆ, ಅವರ ಅನುವಾದಿತ ಕೃತಿ ಹೊಸ ತಲೆಮಾರಿನ ಓದುಗರಿಗೆ ಮುಟ್ಟಿರುವುದು ಅವರಿಗೆ ಖುಷಿ ತಂದುಕೊಟ್ಟಿದೆಯಂತೆ. ಆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಅವರು,” ಈಗ, ಇಂಗ್ಲೀಷ್ನಲ್ಲಿ ಅನುವಾದವಾದ ನಂತರ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಹೊಸ ತಲೆಮಾರಿನ ಓದುಗರಿಗೆ ಈ ಪುಸ್ತಕ ಮುಟ್ಟಿರುವುದು ಖುಷಿ ಕೊಟ್ಟಿದೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್