ಲಂಚದ ಹಣ ಹಿಂದಿರುಗಿಸುವಾಗ ಸಿಕ್ಕಿ ಬಿದ್ದ ಅಧಿಕಾರಿ
ಭಗತ್ ಸಿಂಗ್ ಸೆ.21ರಂದು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
Team Udayavani, Sep 22, 2022, 5:37 PM IST
ಬೆಂಗಳೂರು: ನಿರಾಪೇಕ್ಷಣಾ ಪತ್ರ ನೀಡಲು ಪಡೆದಿದ್ದ 2.50 ಲಕ್ಷ ರೂ. ಲಂಚವನ್ನು ಅರ್ಜಿದಾರರಿಗೆ ಹಿಂತಿರುಗಿಸುತ್ತಿದ್ದಾಗ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಕೆಎಎಸ್ ಅಧಿಕಾರಿ ಹಾಗೂ ಭೂಮಾಪಕನನ್ನು ಬಂಧಿಸಿದ್ದಾರೆ.
ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ-2(ಕೆಎಎಸ್) ಎ.ಬಿ.ವಿಜಯ ಕುಮಾರ್, ಅದೇ ಕಚೇರಿಯಲ್ಲಿ ಭೂಮಾಪಕನಾಗಿದ್ದ ರಘುನಾಥ್ ಬಂಧಿತರು. ದೂರುದಾರ ಭಗತ್ಸಿಂಗ್ ಅರುಣ್ ಯಶವಂತಪುರದ ಲಗ್ಗೆರೆಯ ಬಳಿ 4-33 ಎಕರೆ ಜಮೀನು ಹೊಂದಿದ್ದಾರೆ. ಈ ಪೈಕಿ 0-30 ಗುಂಟೆ ವಿಸ್ತೀರ್ಣದ ಜಮೀನಿಗೆ ಭೂ ಸ್ವಾಧೀನಪಡಿಸಿಕೊಂಡಿರುವುದಿಲ್ಲ ಎಂಬ ಬಗ್ಗೆ ನಿರಾಕ್ಷೇಪಣಾ ಪತ್ರ ಪಡೆಯಲು ಆರೋಪಿಗಳನ್ನು ಭೇಟಿಯಾಗಿದ್ದರು. ನಿರಾಕ್ಷೇಪಣಾ ಪತ್ರ ನೀಡಲು ಆರೋಪಿಗಳು 2.50 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಭಗತ್ ಸಿಂಗ್ ಲಂಚ ಕೊಟ್ಟ ಬಳಿಕ ಅವರಿಗೆ ನಿರಾಕ್ಷೇಪಣಾ ಪತ್ರವನ್ನು ಆರೋಪಿಗಳು ಕೊಟ್ಟಿದ್ದರು. ಇದಾದ ಬಳಿಕ ಭಗತ್ ಸಿಂಗ್ ಈ ಕುರಿತು ಕೆಐಎಡಿಬಿಯ ಉಪ ಆಯುಕರಿಗ್ತಿ ( ಭೂಸ್ವಾಧೀನ ) ದೂರು ನೀಡಿದ್ದರು. ಇದಾದ ಬಳಿಕ ಆರೋಪಿಗಳು ಭಗತ್ ಸಿಂಗ್ ಅವರನ್ನು ಸಂಪರ್ಕಿಸಿ ತಮ್ಮ ಮೇಲಧಿಕಾರಿಗೆ ನೀಡಿರುವ ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ನಾವು ಪಡೆದಿರುವ 2.50 ಲಕ್ಷ ರೂ. ಲಂಚಕ್ಕೆ ಹೆಚ್ಚುವರಿಯಾಗಿ 50 ಸಾವಿರ ರೂ. ಅನ್ನು ನಿಮಗೆ ಕೊಡುವುದಾಗಿ ಆರೋಪಿಗಳು ನಂಬಿಸಿದ್ದರು. ಆದರೆ, ಭಗತ್ ಸಿಂಗ್ ಸೆ.21ರಂದು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
3 ಲಕ್ಷ ರೂ. ಜಪ್ತಿ: ಇತ್ತ ಭಗತ್ ಸಿಂಗ್ಗೆ ಲಂಚ ಪಡೆದ ಹಣವನ್ನು ಆರೋಪಿ ರಘುನಾಥ್ ಹಿಂತಿರುಗಿಸಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಮೇಲಧಿಕಾರಿಗೆ ಆರೋಪಿಗಳ ವಿರುದ್ಧ ಕೊಟ್ಟಿದ್ದ ದೂರನ್ನು ಹಿಂಪಡೆಯುವ ಪತ್ರವನ್ನು ಭಗತ್ ಸಿಂಗ್ನಿಂದ ಮತ್ತೂಬ್ಬ ಆರೋಪಿ ವಿಜಯ್ಕುಮಾರ್ ಪಡೆಯುತ್ತಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಲೆಗೆ ಬೀಳಿಸಿ 3 ಲಕ್ಷ ರೂ. ಲಂಚದ ಹಣವನ್ನು ಜಪ್ತಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ