ರಾಜಾರೋಷವಾಗಿ ರಸ್ತೆಗಿಳಿದ ಓಲಾ, ಉಬರ್‌ ಆಟೋ; ಕೋರ್ಟ್‌ ಮೊರೆ ಹೋದ ಕಂಪನಿಗಳು

2 ಕಿ.ಮೀ.ಗೆ 100 ರೂ. ವಿಧಿಸುತ್ತಿರುವ ಕಡೆಗಳಲ್ಲಿ 70 ರೂ. ಬಿಲ್‌ ಬರುತಿತ್ತು

Team Udayavani, Oct 13, 2022, 12:45 PM IST

ರಾಜಾರೋಷವಾಗಿ ರಸ್ತೆಗಿಳಿದ ಓಲಾ, ಉಬರ್‌ ಆಟೋ; ಕೋರ್ಟ್‌ ಮೊರೆ ಹೋದ ಕಂಪನಿಗಳು

ಬೆಂಗಳೂರು: ಸಾರಿಗೆ ಇಲಾಖೆಯ ಖಡಕ್‌ ಸೂಚನೆ ನಂತರವೂ ನಗರದಲ್ಲಿ ಓಲಾ, ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಆಟೋ ಗಳ ಸೇವೆ ಬುಧವಾರ ರಾಜಾರೋಷವಾಗಿ ಮುಂದುವರಿಯಿತು.

ಎಂದಿನಂತೆ ಜನ ಆಟೋಗಳನ್ನು ಆ್ಯಪ್‌ ಗಳ ಮೂಲಕವೇ ಬುಕಿಂಗ್‌ ಮಾಡಿದರು. ಅದರಂತೆ ಚಾಲಕರು ಕೂಡ ನಿರ್ಭೀತಿಯಿಂದ ಗ್ರಾಹಕರಿದ್ದಲ್ಲಿಗೆ ಬಂದು, ಕರೆದೊಯ್ಯುವ ಮೂಲಕ ಸೇವೆ ಒದಗಿಸಿದರು. ಕಂಪನಿಗಳು ಅಥವಾ ಅವುಗಳಡಿ ಸೇವೆ ಒದಗಿಸುತ್ತಿರುವ ಆಟೋಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕಾರ್ಯಾಚರಣೆಗೂ ಮುಂದಾಗಲಿಲ್ಲ.

“ಬುಧವಾರ ಬೆಳಗ್ಗೆಯಿಂದಲೇ ಆ್ಯಪ್‌ ಆಧಾರಿತ ಆಟೋಗಳ ಸೇವೆಯ ಆಯ್ಕೆಯನ್ನು ಆಯಾ ಅಗ್ರಿಗೇಟರ್‌ಗಳು ತಮ್ಮ ಆ್ಯಪ್‌ನಿಂದ ತೆಗೆದುಹಾಕಬೇಕು. ಒಂದು ವೇಳೆ ತೆಗೆದುಹಾಕದಿದ್ದರೆ, ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿ ಆ್ಯಪ್‌ಗ್ಳಲ್ಲಿ ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುವುದು’ ಸಾರಿಗೆ ಇಲಾಖೆ ಆಯುಕ್ತ ಟಿ.ಎಚ್‌.ಎಂ. ಕುಮಾರ್‌ ಮಂಗಳವಾರ ಎಚ್ಚರಿಸಿದ್ದರು. ಆದರೆ, ಈ ಸೂಚನೆಗೆ ಕ್ಯಾರೆ ಎನ್ನದ ಕಂಪನಿಗಳು ಆಟೋಗಳ ಸೇವೆ ಮುಂದುವರಿಸಿದವು.

“ಬೆಳಗ್ಗೆ ರಸ್ತೆಗಿಳಿಯುವಾಗ ತುಸು ಆತಂಕ ಇತ್ತು. ಒಂದೆರಡು ಟ್ರಿಪ್‌ ಪೂರೈಸಿದ ನಂತರ ಆತಂಕ ದೂರವಾಯಿತು. ಇಂದು ಸಂಜೆ 7ರವರೆಗೆ 13 ಟ್ರಿಪ್‌ಗ್ಳನ್ನು ಪೂರ್ಣಗೊಳಿಸಿದ್ದೇನೆ. ಎಂದಿನಂತೆ ಕಂಪನಿಯು ಪ್ಲಾಟ್‌ಫಾರಂ ಶುಲ್ಕ 20 ರೂ. ಕಡಿತ ಮಾಡಿಕೊಂಡಿದೆ. ಜತೆಗೆ ಪ್ರತಿ ಬಾಡಿಗೆಯಲ್ಲಿ ತನ್ನ ಕಮಿಷನ್‌ ಕೂಡ ಪಡೆದುಕೊಂಡಿದೆ. ಇನ್ನು ಇನ್ಸೆಂಟಿವ್‌ ಕೂಡ ಮಾಮೂಲಿ ಇದೆ’ ಎಂದು ಆಟೋ ಚಾಲಕ ಸಂತೋಷ್‌ ತಿಳಿಸಿದರು.

ಉಳಿದ ದಿನಗಳಂತೆಯೇ ಚಾಲಕರು ಅಗ್ರಿಗೇಟರ್‌ ಕಂಪನಿಗಳಡಿ ಆಟೋಗಳ ಸೇವೆ ನೀಡಿದ್ದಾರೆ. ಆದರೆ, ಬಾಡಿಗೆ ಎಂದಿಗಿಂತ ತುಸು ಕಡಿಮೆ ಇದ್ದುದು ಕಂಡುಬಂತು. ಉದಾಹರಣೆಗೆ 2 ಕಿ.ಮೀ.ಗೆ 100 ರೂ. ವಿಧಿಸುತ್ತಿರುವ ಕಡೆಗಳಲ್ಲಿ 70 ರೂ. ಬಿಲ್‌ ಬರುತಿತ್ತು. ಇದರಲ್ಲಿ ಚಾಲಕರಿಗೆ ಮಾತ್ರ ಕನಿಷ್ಠ ದರ ಅಂದರೆ 30 ರೂ. ಜಮೆ ಆಗುತ್ತಿದೆ. ಉಳಿದದ್ದು ಆಯಾ ಕಂಪನಿಯವರು ತೆಗೆದುಕೊಳ್ಳುತ್ತಿದ್ದಾರೆ. ಇನ್ಸೆಂಟಿವ್‌ 10 ಟ್ರಿಪ್‌ ಪೂರೈಸಿದರೆ 200 ರೂ. ನೀಡಲಾಗುತ್ತಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಆಟೋಗಳನ್ನು ಹಿಡಿದು ದಂಡ ವಿಧಿಸಿಲ್ಲ ಎಂದು ಆಟೋರಿಕ್ಷಾ ಡ್ರೈವರ್ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿದರು.

ಕೋರ್ಟ್‌ ಮೊರೆ ಹೋದ ಕಂಪನಿಗಳು
ಆ್ಯಪ್‌ ಆಧಾರಿತ ಆಟೋಗಳ ಸೇವೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಅಗ್ರಿಗೇಟರ್‌ ಕಂಪನಿಗಳು ನ್ಯಾಯಾಲಯದ ಮೊರೆಹೋಗಿವೆ. “ನಿಯಮಗಳಡಿ ಸೇವೆ ಒದಗಿಸುತ್ತಿದ್ದು, ಯಾವುದೇ ಕಾರಣಕ್ಕೂ ಆಟೋಗಳ ಸೇವೆಗಳಿಗೆ ತಡೆಯೊಡ್ಡದಿರಲು ಸಾರಿಗೆ ಇಲಾಖೆಗೆ ಸೂಚನೆ ನೀಡುವಂತೆ’ ನ್ಯಾಯಾಲಯಕ್ಕೆ ಮನವಿ ಕಂಪನಿಗಳು ಮನವಿ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆ ಆಯುಕ್ತ ಕುಮಾರ್‌, “ಆಟೋ ಸೇವೆ ಸ್ಥಗಿತಗೊಳಿಸಲು ಸೂಚಿಸಿದ ಬೆನ್ನಲ್ಲೇ ಅಗ್ರಿಗೇಟರ್‌ಗಳು ಕೋರ್ಟ್‌ ಮೊರೆಹೋಗಿರುವುದು ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ನಿಯಮಗಳ ಉಲ್ಲಂಘನೆ ಎಲ್ಲೆಲ್ಲಿ ಎಷ್ಟು ಆಗಿದೆ ಎಂಬುದರ ಬಗ್ಗೆ ಸರ್ಕಾರಿ ವಕೀಲರಿಗೆ ಮಾಹಿತಿ ಒದಗಿಸಲಾಗಿದೆ. ಅದನ್ನು ಆಧರಿಸಿ ವಾದ ಮಂಡಿಸಲಿದ್ದಾರೆ’ ಎಂದು ಹೇಳಿದರು.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.