ಮತ್ತೆ ಮುಂದುವರೆಯಲಿದೆ “ರೈತರೊಂದಿಗೊಂದು ದಿನ”
Team Udayavani, Aug 30, 2021, 10:33 PM IST
ಬೆಂಗಳೂರು : ರೈತರಿಗೆ ಆತ್ಮಸ್ಥೈರ್ಯ ತುಂಬುವಂತೆ ಮಾಡಲು ಕೃಷಿ ಸಚಿವ ಬಿ.ಸಿ.ಪಾಟೀಲರ ಕನಸಿನ ಕಾರ್ಯಕ್ರಮ “ರೈತರೊಂದಿಗೊಂದು ದಿನ”ಮತ್ತೆ ಮುಂದುವರೆಯಲಿದೆ.
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಇಷ್ಟುದಿನಗಳ ಕಾಲ ರೈತರೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಕೋವಿಡ್ ಜೊತೆಗೆ ಬದುಕುವಂತಹ ಪರಿಸ್ಥಿತಿ ಇದೆ. ಹೀಗಾಗಿ ಮತ್ತೆ ರೈತರೊಂದಿಗೆ ಒಂದು ದಿನ ಮುಂದುವರೆಸಿ ರೈತರಲ್ಲಿ ಮತ್ತೆ ಆತ್ಮವಿಶ್ವಾಸ ಹಾಗೂ ಮಿಶ್ರ ಬೆಳೆ ರೈತರ ಆದಾಯದ ದ್ವಿಗುಣ ಸಂಬಂಧ ಪ್ರೋತ್ಸಾಹ ಸೇರಿದಂತೆ ಅನ್ನದಾತರ ಶ್ರೇಯೋಭಿವೃದ್ಧಿ ಕೃಷಿ ಪ್ರಗತಿಗೆ ಮತ್ತೆ ಜಿಲ್ಲೆಗಳಿಗೆ ತೆರಳಿ ರೈತರೊಂದಿಗೊಂದು ದಿನ ಕಾರ್ಯಕ್ರಮ ಮಾಡಲಾಗುವುದು.
ಮಳೆ ಮದ್ಯದಲ್ಲಿ ಕೊಂಚ ಕೈ ಕೊಟ್ಟು ಸಮಸ್ಯೆ ಆಗಿತ್ತಾದರೂ ಯಾವುದೇ ಒಣ ಬೆಳೆಗಳಿಗೆ ಸಮಸ್ಯೆ ಇಲ್ಲ. ಬೀಜ, ಗೊಬ್ಬರದ ಸಮಸ್ಯೆ ಈ ವರ್ಷ ಆಗಿಲ್ಲ. ಎಲ್ಲಾ ಭಾಗದಲ್ಲೂ ಉತ್ತಮ ಮಳೆಯಾಗಿದೆ. ರೈತರೊಂದಿಗೆ ಇಡೀ ದಿನ ಕಳೆದಾಗ ಅವರ ಸಮಸ್ಯೆಗಳ ಬಗ್ಗೆ ಇನ್ನಷ್ಟು ಮಾಹಿತಿ ನೈಜ ವಿವರ ಲಭ್ಯವಾಗಲಿದೆ. ಸ್ಥಳದಲ್ಲಿಯೇ ಸಾಧ್ಯವಾಗುವಂತಹ ಸಮಸ್ಯೆಗಳನ್ನು ಅಧಿಕಾರಿಗಳಿಂದ ಬಗೆಹರಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ