ಬೆಂಕಿ ರೋಗಕ್ಕೆ ಭತ್ತದ ಹೊಟ್ಟೇ ಮದ್ದು


Team Udayavani, Nov 12, 2017, 11:20 AM IST

Ban12111706M.jpg

ಬೆಂಗಳೂರು: ಭತ್ತದ ಬೆಳೆಯಲ್ಲಿ ಕಾಣಿಸಿಕೊಳ್ಳುವ ಬೆಂಕಿ ರೋಗ, ಕೀಟಬಾಧೆ ಮತ್ತು ಕಾಂಡ ಕೊರೆತಕ್ಕೆ ಆಯಾ ಬೆಳೆಗಳಲ್ಲಿ ಸಿಲಿಕಾನ್‌ ಪೋಷಕಾಂಶ ಇಲ್ಲದೆ ಇರುವುದೇ ಮುಖ್ಯ ಕಾರಣ ಎನ್ನುವುದು ಇದೀಗ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ತಜ್ಞರ ತಂಡ ನಡೆಸಿರುವ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.

ಅಲ್ಲದೆ ಭತ್ತ, ಕಬ್ಬು ಸೇರಿ ಇನ್ನಿತರ ಆಹಾರ ಧಾನ್ಯಗಳ ಕಡಿಮೆ ಇಳುವರಿಗೂ ಇದೇ ಮೂಲ ಕಾರಣ ಎಂಬ
ಅಂಶ ದೃಢಪಟ್ಟಿದೆ. 

ಅನ್ನದಾತರ ಭತ್ತದ ಬೆಳೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಬೆಂಕಿ ರೋಗ, ಕಾಂಡ ಕೊರೆತ ಮತ್ತು ಕೀಟ ಬಾಧೆ ರೋಗಗಳ ಸಂಬಂಧ ಕಳೆದ ನಾಲ್ಕೈದು ವರ್ಷಗಳಿಂದ ರೋಗಶಾಸಉಜ್ಞ ಗೋವಿಂದ ರಾಜು, ಕೀಟ ತಜ್ಞ ಎಸ್‌.ವಿ.ಪಾಟೀಲ್‌ ಮತ್ತು ಬೇಸಾಯ ತಜ್ಞ ಹನುಮಂತಪ್ಪ ಸಂಶೋಧನೆಯಲ್ಲಿ ತೊಡಗಿದ್ದರು. ಈ ತಜ್ಞರ ತಂಡ ನಡೆಸಿದ ಸಂಶೋಧನೆಯಲ್ಲಿ ಭತ್ತದ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿ ರೋಗ ಸೇರಿ ಇನ್ನಿತರ ಕೀಟಬಾಧೆಯ ಸಂಬಂಧಿತ ರೋಗಕ್ಕೆ ಆಯಾ ಬೆಳೆಗಳಲ್ಲಿ ಸಿಲಿಕಾನ್‌ ಪೋಷಕಾಂಶ ಇಲ್ಲದಿರುವುದೇ ಮೂಲ ಕಾರಣ ಎಂಬುದು ದೃಢಪಟ್ಟಿದೆ. ಪ್ರತಿ ಹೆಕ್ಟೇರ್‌ ಜಮೀನಿನಲ್ಲಿ 50 ಕ್ವಿಂಟಾಲ್‌ ಭತ್ತವನ್ನು ಬೆಳೆದಲ್ಲಿ ಸುಮಾರು 230 ರಿಂದ 470 ಕೆ.ಜಿ.ಸಿಲಿಕಾನ್‌ ಪೋಷಕಾಂಶವನ್ನು ಮಣ್ಣಿನಿಂದಲೇ ಭತ್ತದ ಬೆಳೆ ಉಪಯೋಗಿಸಿಕೊಳ್ಳುತ್ತದೆ.

ಸಿಲಿಕಾನ್‌ ಪೋಷಕಾಂಶವು ಭತ್ತ ಮತ್ತು ಕಬ್ಬು ಸೇರಿ ಇನ್ನಿತರ ಬೆಳೆಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಬಿರುಸಾದ ಮಳೆ-ಗಾಳಿಗೆ ಗಿಡಗಳು ಬಾಗುವುದನ್ನು ತಡೆಯುವಲ್ಲಿ ಸಿಲಿಕಾನ್‌ ಮಹತ್ವದ ಪಾತ್ರ
ನಿರ್ವಹಿಸಲಿದೆ. ಜಪಾನಿನಲ್ಲಿ ಬೆಳೆ ಇಳುವರಿ ಸಾಧಿಸಲು ಇದೇ ಕಾರಣವಾಗಿದೆ.

ಭತ್ತದ ಹೊಟ್ಟಿನ ಬೂದಿ ಮದ್ದು: ಭತ್ತದ ಮಿಲ್‌ಗ‌ಳು ಹೊರಹಾಕುವ ಹೊಟ್ಟಿನಲ್ಲಿ ಸಿಲಿಕಾನ್‌ ಅಂಶ ಇದ್ದು ಇದನ್ನು ಬೂದಿ ಮಾಡಿ, ಬೆಳೆಗಳಿಗೆ ಬಳಕೆ ಮಾಡಿದರೆ ಬೆಂಕಿ ರೋಗವನ್ನು ಹತೋಟಿಗೆ ತರಬಹುದು. ಹೀಗಾಗಿ ಬೆಂಕಿ ರೋಗಕ್ಕೆ ಭತ್ತದ ಬೂದಿಯೆ ಮದ್ದು. ಶಿವಮೊಗ್ಗದ ಕೃಷಿವಿದ್ಯಾಲಯ ಮತ್ತು ಕೃಷಿ ಸಂಶೋಧನಾ ಕೇಂದ್ರ, ಮಂಗಳೂರಿನ ಕಂಕನಾಡಿಯಲ್ಲಿ 2001-2002ರಲ್ಲಿ ಇದರ ಪ್ರಯೋಗ ಮಾಡಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ ಎಂಬುದು ತಜ್ಞರ ಮಾತು.

ಸಿಲಿಕಾನ್‌ ಧಾತುವನ್ನು ಭತ್ತದ ಬೆಳೆಗೆ ಉಪಯೋಗಿಸುವ ಪದಟಛಿತಿ ಜಪಾನ್‌, ಥೈವಾನ್‌, ಚೀನಾ,
ಬ್ರೆಜಿಲ್‌, ಕೊರಿಯಾ, ಅಮೆರಿಕ ಮತ್ತು ಕೊಲಂಬಿಯಾದಲ್ಲಿ ಪ್ರಚಲಿತದಲ್ಲಿದೆ. ಹೀಗಾಗಿ ಈ ರಾಷ್ಟ್ರಗಳಲ್ಲಿ ರೈತರು ಹೆಚ್ಚಿನ ಇಳುವರಿ ಪಡೆಯುತ್ತಾರೆ. ನಮ್ಮ ದೇಶದ ರೈತರಿಗೆ ಸಿಲಿಕಾನ್‌ ಬಳಕೆ ಮಾಡುವ ಸಂಬಂಧ ಸೂಕ್ತ ಮಾಹಿತಿಯ ಕೊರತೆ ಇದೆ.

–  ಡಾ.ಎನ್‌.ಬಿ. ಪ್ರಕಾಶ್‌, ಬೆಂಗಳೂರು ಕೃಷಿ ವಿವಿ ಮಣ್ಣು ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ

ಪ್ರಯೋಗ ಯಶಸ್ವಿ
2007, 2008 ಮತ್ತು 2009ರಲ್ಲಿ ಶಿವಮೊಗ್ಗ, ಭದ್ರಾವತಿ, ಮಂಗಳೂರು ಮತ್ತು ಬ್ರಹ್ಮಾವರದಲ್ಲಿ ತಜ್ಞರ ತಂಡ
ಪ್ರಯೋಗ ಮಾಡಿ ಇದರಲ್ಲಿ ಯಶಸ್ವಿಯಾಗಿತ್ತು. ಸಂಶೋಧನಾ ವರದಿ ಪ್ರಕಾರ ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ 2 ರಿಂದ 4 ಟನ್‌ಗಳಷ್ಟು ಬೂದಿಯನ್ನು ಪ್ರತಿ ಹೆಕ್ಟೇರ್‌ ಗದ್ದೆಗೆ ಬಳಸಿ ಶೇ.20 ರಿಂದ 30ರಷ್ಟು ಹೆಚ್ಚು ಇಳುವರಿ ಪಡೆದಿರುವುದು ಇದರಲ್ಲಿ ಸಾಬೀತಾಗಿದೆ.

– ದೇವೇಶ ಸೂರಗುಪ್ತ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.