ಕಟ್ಟೆ-ಕುಂಟೆಯತ್ತಲೂ ಗಮನ ಕೊಡಿ ಸ್ವಾಮಿ


Team Udayavani, Jul 19, 2018, 12:47 PM IST

blore-7.jpg

ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಕೆರೆಗಳಿಗಿಂತ ದುಪ್ಪಟ್ಟು ಕಟ್ಟೆ-ಕುಂಟೆಗಳಿವೆ. ಹಾಗೇ ಅವುಗಳ ಸ್ಥಿತಿ ಕೂಡ ಕೆರೆಗಳಿಗಿಂತ ದುಪ್ಪಟ್ಟು ದುರ್ಬರವಾಗಿದೆ. ಬಹುತೇಕ ಕಟ್ಟೆ-ಕುಂಟೆಗಳು ಒಂದಿಲ್ಲೊಂದು ರೀತಿ ಒತ್ತುವರಿಯಾಗಿವೆ.

ಕೆರೆಗಳ ನಡುವೆ ಸಾಕಷ್ಟು ಅಂತರ ಇರುವ ಕಡೆಗಳಲ್ಲಿ ಸ್ಥಳೀಯ ಜನ-ಜಾನುವಾರುಗಳಿಗೆ ನೀರಿಗೆ ತೊಂದರೆ ಆಗದಿರಲು ನಗರದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆಯೇ ಕಟ್ಟೆ-ಕುಂಟೆಗಳು. ಇವುಗಳು ನೀರು ಇಂಗು ಗುಂಡಿಗಳಾಗಿ ಸಹ ಕಾರ್ಯನಿರ್ವಹಿಸುತ್ತವೆ.  ಅಂತರ್ಜಲ ಮಟ್ಟ ಹೆಚ್ಚಿಸುವ ಜತೆಗೆ ಸುತ್ತಲ ವಾತಾವರಣವನ್ನೂ ತಂಪಾಗಿಡುತ್ತವೆ.

ನಗರದ 1,460 ಹಾಗೂ ಗ್ರಾಮಾಂತರ ಜಿಲ್ಲೆಯ 1,811 ಸೇರಿ ಒಟ್ಟಾರೆ 3,271 ಕಟ್ಟೆ-ಕುಂಟೆಗಳಿದ್ದು, ಇವುಗಳ ವಿಸ್ತೀರ್ಣ 8,119 ಎಕರೆ. ಇದರಲ್ಲಿ 1,256.13 ಎಕರೆ ಒತ್ತುವರಿಯಾಗಿದ್ದು, ಈ ಪೈಕಿ 782 ಎಕರೆಯನ್ನು 2011 ಜನ ಕಬಳಿಸಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವುದು ಒತ್ತಟ್ಟಿಗಿರಲಿ, ಒತ್ತುವರಿಯಿಂದ ಹೊರಗುಳಿದ 6,863 ಎಕರೆ ಜಾಗದ ರಕ್ಷಣೆಗೂ ಮುಂದಾಗಿಲ್ಲ ಎಂದು ಕೆರೆಗಳ ಒತ್ತುವರಿ ಕುರಿತ ಸದನ ಸಮಿತಿ ಅಧ್ಯಯನ ವರದಿಯಲ್ಲಿ ಬೇಸರ ವ್ಯಕ್ತಪಡಿಸಿದೆ. ಇದೇ ಧೋರಣೆ ಮುಂದುವರಿದರೆ, ಉಳಿದವು ಕೂಡ ಕಂಡವರ ಪಾಲಾಗುವ ಸಾಧ್ಯತೆ ಇದೆ.

ಅನುಭೋಗದ ಆಸ್ತಿ: ಬಹುತೇಕ ಕಟ್ಟೆ-ಕುಂಟೆಗಳು ಖಾಸಗಿ ಒಡೆತನದಲ್ಲಿದ್ದು, ಅವುಗಳನ್ನು ಸ್ವಂತ ಖರ್ಚಿನಿಂದ ನಿರ್ಮಿಸಲಾಗಿರುತ್ತದೆ. ಜಮೀನಿನ ಹಕ್ಕುದಾರಿಕೆ ಮೂಲ ಹಕ್ಕುದಾರರಿಗೇ ಇರುತ್ತದೆ. ಆದರೂ ಬಳಕೆಯ ಹಕ್ಕನ್ನು ಯಾರೂ ತಡೆಯುವಂತಿಲ್ಲ. ಆದ್ದರಿಂದ ಇವುಗಳು ಸಾರ್ವಜನಿಕ “ಅನುಭೋಗದ ಆಸ್ತಿ’ಗಳಾಗಿವೆ. ಈ ಆಸ್ತಿಗಳನ್ನು ಸಂರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ವರದಿ ಸ್ಪಷ್ಟಪಡಿಸಿದೆ. ಈಗಾಗಲೇ ಬೇಕಾಬಿಟ್ಟಿ ಕೊಳವೆಬಾವಿಗಳನ್ನು ಕೊರೆದಿದ್ದರಿಂದ ನಗರದ ಅಂತರ್ಜಲ ಮಟ್ಟ ಸಾವಿರ ಅಡಿಗೂ ಆಲಕ್ಕೆ ಕುಸಿದಿದೆ. ವಾರ್ಷಿಕ ಮಳೆ ಪ್ರಮಾಣ ಈಗಲೂ 833 ಮಿ.ಮೀ. ಇದೆ. ಮಳೆ ದಿನಗಳನ್ನು ಲೆಕ್ಕಹಾಕಿದರೆ, ಇಲ್ಲಿ ವಾರಕ್ಕೊಮ್ಮೆ ಮಳೆ ಬೀಳುತ್ತದೆ.

ಆದರೆ, ಹೀಗೆ ಬಿದ್ದ ನೀರು ಬಹುತೇಕ ರಾಜಕಾಲುವೆ ಮೂಲಕ ವ್ಯರ್ಥವಾಗಿ ಹರಿದುಹೋಗುತ್ತಿದೆ. ಈ ನಿಟ್ಟಿನಲ್ಲಿ ಕಟ್ಟೆ-ಕುಂಟೆಗಳನ್ನು ಮಳೆ ನೀರು ಇಂಗು ಗುಂಡಿಗಳಾಗಿ ಪರಿವರ್ತಿಸುವ ಅವಶ್ಯಕತೆ ಇದೆ.  ಅಭಿವೃದ್ಧಿಪಡಿಸಿದ ಪ್ರದೇಶಗಳಲ್ಲಿ ನಿರ್ಮಿಸುವ ಮಳೆನೀರುಗಾಲುವೆ ವ್ಯವಸ್ಥೆಯಿಂದ ಈ ಕಟ್ಟೆ-ಕುಂಟೆಗಳಿಗೆ ನೀರು ಹರಿಯುವಂತೆ ಯೋಜನೆ ವಿನ್ಯಾಸ ಮಾಡಬೇಕಿದೆ. ಇವುಗಳ ಸುತ್ತ ಕನಿಷ್ಠ ಒಂದು ಸಾಲು ಮರಗಳ ಹಸಿರು ವಲಯವನ್ನು ಸೃಷ್ಟಿಸುವುದು ಕಡ್ಡಾಯವಾಗಬೇಕು. ಒಂದು ಎಕರೆಗಿಂತ ಹೆಚ್ಚು ವಿಸ್ತೀರ್ಣ ಇರುವ ಕಟ್ಟೆ-ಕುಂಟೆಗಳಲ್ಲಿ ಮನರಂಜನೆಗೂ ಅವಕಾಶ ನೀಡಬಹುದು. ಆದರೆ, ಅವುಗಳ ರಕ್ಷಣೆಯು ಬಳಕೆ ಮಾಡುವ ಸಂಸ್ಥೆ/ ವ್ಯಕ್ತಿಯ ಹೊಣೆ ಆಗಿರಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ಅರ್ಧಕ್ಕರ್ಧ ರಾಜಕಾಲುವೆ ಒತ್ತುವರಿ!: ರಾಜಕಾಲುವೆಗಳು ಕೆರೆಗಳಿಗೆ ನೀರು ಹರಿಸುವ ಜಲಮಾರ್ಗಗಳು. ಆ ಮೂಲಕ ನಗರದಲ್ಲಿ ನೆರೆ ಉಂಟಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರವನ್ನೂ ವಹಿಸುತ್ತವೆ.  ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1,090.66 ಕಿ.ಮೀ. ಉದ್ದದ ರಾಜಕಾಲುವೆಗಳಿದ್ದು, 348 ಗ್ರಾಮಗಳಲ್ಲಿ ಹಾದುಹೋಗುತ್ತದೆ. ಇದರಲ್ಲಿ ಅರ್ಧಕ್ಕರ್ಧ ಅಂದರೆ 501.11 ಎಕರೆ  ರಾಜಕಾಲುವೆಯನ್ನು 2,083 ಜನ ಒತ್ತುವರಿ ಮಾಡಿದ್ದಾರೆ.

ದೊಡ್ಡ ಕೆರೆಗಳ 300 ಎಕರೆ ಒತ್ತುವರಿ: ನಗರದ ಅತಿ ದೊಡ್ಡ ಹಾಗೂ ಪ್ರಮುಖ 20ಕ್ಕೂ ಹೆಚ್ಚು ಕೆರೆಗಳನ್ನು ಸದನ ಸಮಿತಿ ಗುರುತಿಸಿದ್ದು, ಅವುಗಳ ಒತ್ತುವರಿ ಪ್ರಮಾಣವೇ ಅಂದಾಜು 300 ಎಕರೆ ಆಗಿದೆ! ಯಡಿಯೂರು ಕೆರೆ, ಪುಟ್ಟೇನಹಳ್ಳಿ,
ಹಲಗೆವಡೇರಹಳ್ಳಿ, ಪುಟ್ಟೇನಹಳ್ಳಿ, ಚನ್ನಸಂದ್ರ, ಸ್ಯಾಂಕಿ, ಕೌದೇನಹಳ್ಳಿ, ಸೀಲವಂತನ ಕೆರೆ, ಬೆಳ್ಳಂದೂರು, ಹುಳಿಮಾವು ಮತ್ತಿತರ ಕೆರೆಗಳು ಇದರಲ್ಲಿ ಸೇರಿವೆ. ಒತ್ತುವರಿಯಾದ ಜಾಗಗಳಲ್ಲಿ ಅಪಾರ್ಟ್‌ಮೆಂಟ್‌ಗಳು, ರಸ್ತೆಗಳು, ವಸತಿ ಸಮುತ್ಛಯ, ಮನೆಗಳು ತಲೆಯೆತ್ತಿವೆ.

ನಗರದಲ್ಲಿವೆ 1,060 ಉದ್ಯಾನ: ನಗರದಲ್ಲಿ ಸುಮಾರು 1,060 ಉದ್ಯಾನಗಳಿದ್ದು, ಇವುಗಳಿಗಾಗಿ ಮೀಸಲಿಟ್ಟ ಭೂಮಿ 770 ಹೆಕ್ಟೇರ್‌. ವರ್ಷದಲ್ಲಿ ಅಂದಾಜು 253 ಮಳೆ ಇಲ್ಲದ ದಿನಗಳಿಗೆ ಪ್ರತಿ ಚದರ ಮೀಟರ್‌ಗೆ 2 ಲೀ.ನಂತೆ ಈ ಉದ್ಯಾನಗಳಿಗೆ ಬೇಕಾಗುವ ಒಟ್ಟು ನೀರಿನ ಪ್ರಮಾಣ 3,896 ದಶಲಕ್ಷ ಲೀ.  

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.