ಕಡಲೆಕಾಯಿ ಪರಿಷೆ: 9 ಲಕ್ಷ ಜನ ಭೇಟಿ
Team Udayavani, Nov 15, 2017, 11:36 AM IST
ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಮಂಗಳವಾರ ಅದ್ಧೂರಿ ತೆರೆ ಬಿದ್ದಿತು. ಆದರೆ, ಕಡಲೆಕಾಯಿ ಮಾರಾಟ ಭರಾಟೆ ಮಾತ್ರ ಇನ್ನೂ ಎರಡು ದಿನಗಳು ಮುಂದುವರಿಯಲಿದೆ.
ಐದು ಶತಮಾನಗಳ ಇತಿಹಾಸವಿರುವ ಪಾರಂಪರಿಕ ಕಡಲೇಕಾಯಿ ಪರಿಷೆಗೆ ಈ ಬಾರಿ ಸುಮಾರು ಒಂಬತ್ತು ಲಕ್ಷ ಜನ ಸಾಕ್ಷಿಯಾದರು. ಧಾರ್ಮಿಕ ಹಾಗೂ ಪಾರಂಪರಿಕ ಹಿನ್ನೆಲೆಯೊಂದಿಗೆ ನಡೆದುಬಂದ ಪರಿಷೆ ಈಗ ಆಧುನಿಕ ಸ್ಪರ್ಶ ಪಡೆದಿದೆ. ಇದರಿಂದ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
ಅಂದಾಜು ಎರಡು ಸಾವಿರ ಕಡಲೇಕಾಯಿ ಮಳಿಗೆಗಳು, 100 ರಿಂದ 150 ತಿಂಡಿ-ತಿನಿಸು ಮತ್ತಿತರ ವಸ್ತುಗಳ ಮಾರಾಟ ಮಳಿಗೆಗಳು ಪರಿಷೆಯಲ್ಲಿ ತಲೆಯೆತ್ತಿದ್ದವು. ಕೊನೆಯ ದಿನವಾಗಿದ್ದರಿಂದ ಕಡಲೆಕಾಯಿ ಖರೀದಿಗೆ ಜನ ಅಕ್ಷರಶಃ ಮುಗಿಬಿದ್ದಿದ್ದರು.
ಆರಂಭದಲ್ಲಿ ವ್ಯಾಪಾರ-ವಹಿವಾಟಿನ ಕೊರತೆ ಎದುರಿಸುತ್ತಿದ್ದ ವ್ಯಾಪಾರಿಗಳು ಕೊನೆಯ ದಿನ ಖುಷಿ ಖುಷಿಯಿಂದಲೇ ಕಡಲೇ ಕಾಯಿ ವ್ಯಾಪಾರ ಮಾಡಿದರು. ಮೊದಲ ದಿನ ಲೀಟರ್ ಕಡಲೆಕಾಯಿಗೆ 50ರಿಂದ 60 ರೂ. ಇತ್ತು. ಕೊನೆಯ ದಿನ ಇದು 15 ರಿಂದ 20 ರೂ. ಆಗಿತ್ತು.
ಇನ್ನು ಆಧುನಿಕತೆ ಭರಾಟೆ ಮಧ್ಯೆಯೂ ಪಾರಂಪರಿಕ ಕಡಲೆಕಾಯಿ ಪರಿಷೆ ಮಾತ್ರ ಹಿಂದಿನ ವೈಭವ ಉಳಿಸಿಕೊಂಡು ಬರುತ್ತಿದೆ. ಜತೆಗೆ ಜನರಿಗೆ ಹೆಚ್ಚು ಹತ್ತಿರ ಆಗುತ್ತಿದೆ. ಆಧುನಿಕತೆಯ ಜತೆಗೆ ಗ್ರಾಮೀಣ ಸೊಗಡು ಇದರಲ್ಲಿ ಸಮ್ಮಿಳಿತಗೊಂಡಿದೆ.
ಅದರಲ್ಲೂ ಮಕ್ಕಳಿಗೆ ಗ್ರಾಮೀಣ ಸೊಗಡಿನ ಜಾತ್ರೆಯ ಚಿತ್ರಣ ನೀಡುವುದರಿಂದ ಹೆಚ್ಚು ಉಪಯುಕ್ತ ಎನಿಸಿದೆ. ಎಲ್ಲ ವರ್ಗ, ಸಂಸ್ಕೃತಿಯ ಜನರು ಪಾಲ್ಗೊಳ್ಳುತ್ತಿರುವುದು ಪರಿಷೆಯ ಯಶಸ್ಸಿಗೆ ಕಾರಣ ಎನ್ನುತ್ತಾರೆ ಪರಿಷೆಯಲ್ಲಿ ಭಾಗವಹಿಸಿದ್ದ ವಿಜಯನಗರದ ನಿವಾಸಿ ಕುಮಾರ್.
ಕೊನೆಯ ದಿನ ನಗರದ ನಾನಾ ಭಾಗಗಳಿಂದ ಜನ ಪರಿಷೆಗೆ ಲಗ್ಗೆ ಇಟ್ಟಿದ್ದರಿಂದ ಬಸವನಗುಡಿ ಕೂಡುವ ರಸ್ತೆಗಳಲ್ಲಿ ಸಂಚಾರದಟ್ಟಣೆ ಹೆಚ್ಚಿತ್ತು. ಇದನ್ನು ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ