ಇಣುಕಾನಂದ: ಬೆಡ್ರೂಂ,ಬಾತ್ರೂಂ ವಿಕೃತ ಕಾಮಿ ಮತ್ತೆ ಪ್ರತ್ಯಕ್ಷ !
Team Udayavani, Mar 17, 2017, 9:46 AM IST
ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ವಿಕೃತ ಕಾಮಿಯೊಬ್ಬನ ಕಾಟದಿಂದ ಮಹಿಳೆಯರು ತಮ್ಮ ಮಾನದ ಬಗ್ಗೆ ತೀವ್ರ ಕಂಗಾಲಾಗುವಂತಾಗಿದೆ. ಇನ್ನೋರ್ವ ಉಮೇಶ್ ರೆಡ್ಡಿ ಎಂದು ಬಿಂಬಿತವಾಗಿರುವ ವಿಕೃತ ಕಾಮಿ ಯುವಕನೊಬ್ಬ ಬೆಡ್ರೊಂ, ಬಾತ್ರೂಂಗಳನ್ನು ಇಣುಕುತ್ತಿದ್ದು ಆತನ ಬಂಧನಕ್ಕಾಗಿ ಪೊಲೀಸರೂ ನಿದ್ದೆಗೆಡಿಸಿಕೊಂಡಿದ್ದಾರೆ.
ಕಳೆದ 2 ತಿಂಗಳ ಹಿಂದೆ ಈತನ ಚಟವಟಿಕೆ ಜೋರಾದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಚಾಲಾಕಿಯಾಗಿರುವ ಆತ ಪೊಲೀಸರು ತನ್ನನ್ನು ಹುಡುಕಾಡುವುದನ್ನು ಅರಿತು ತನ್ನ ಕೀಳು ಅಭಿರುಚಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದ.
ಇದೀಗ ಕಳೆದ ಕೆಲದಿನಗಳಿಂದ ರಾಜರಾಜೇಶ್ವರಿ ನಗರದ ಹಲವು ಬಡಾವಣೆಗಳಲ್ಲಿ ರಾತ್ರಿ ವೇಳೆ ಪ್ರತ್ಯಕ್ಷವಾಗಿದ್ದಾನೆ. ಬೆಳಗಿನ ಜಾವವೂ ಪ್ರತ್ಯಕ್ಷವಾಗುವ ವಿಕೃತ ಈತನಾಗಿದ್ದು, ಬೆಡ್ರೂಂ ಮತ್ತು ಬಾತ್ ರೂಂಗಳನ್ನು ಇಣುಕುವುದೇ ಈತನ ಕಾಯಕ ಎನ್ನಲಾಗಿದೆ.
ಈ ಬಗ್ಗೆ ಮಹಿಳೆಯೊಬ್ಬರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು ಮಹಿಳೆಯರು ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ. ಬಿಇಎಂಎಲ್ 5 ನೇ ಹಂತ, ನ್ಯೂ ಹಾರಿಝಾನ್ ಪಬ್ಲಿಕ್ ಸ್ಕೂಲ್ ಪ್ರದೇಶದಲ್ಲಿ ಹಲವು ಮನೆಗಳಲ್ಲಿ ಈತ ಇಣುಕಲು ಯತ್ನಿಸಿದ್ದಾನೆ ಎಂದು ನೋವು ತೋಡಿಕೊಂಡಿದ್ದಾರೆ.
ಈತನನ್ನು ಹಲವು ಬಾರಿ ಹಿಡಿಯಲು ಯತ್ನಿಸಲಾಗಿದೆಯಾದರೂ ಗಲ್ಲಿ ಗಲ್ಲಿಗಳ ಪರಿಚಯವಿರುವ ಈತ ಸ್ಪೈಡರ್ ಮ್ಯಾನ್ ನಂತೆ ಕಟ್ಟಡ, ಗೋಡೆಗಳನ್ನು ಹಾರಿ ಪರಾರಿಯಾಗುತ್ತಾನೆ ಎಂದು ಹೇಳಲಾಗಿದೆ.
ಇದೀಗ ಶಿವಾರೆಡ್ಡಿ ನೇತೃತ್ವದ ಪೊಲೀಸ್ ತಂಡ ಸೈಕೋಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದು, ಪೊಲೀಸರ ತಂಡಕ್ಕೂ ಆತ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!