ಪೊಲೀಸ್ ಬಲೆಗೆ ನಕಲಿ ಡಿಸಿ
Team Udayavani, Oct 18, 2021, 11:21 AM IST
ಬೆಂಗಳೂರು: ಬಿಎಂಟಿಸಿ ಡಿಪೋಗೆ ಬಂದು ಹೊಸ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ)ಯಾಗಿ ನೇಮಕಗೊಂಡಿರುವುದಾಗಿ ಬಸ್ಗಳ ಪರಿಶೀಲಿಸಲು ಮುಂದಾಗಿದ್ದ ವಂಚಕನನ್ನು ಡಿಪೋ ಸಿಬ್ಬಂದಿಯೇ ಪೊಲೀಸರಿಗೊಪ್ಪಿಸಿದ್ದಾರೆ.
ಯಶವಂತಪುರ ಬಿಎಂಟಿಸಿ ಡಿಪೋದ ಅಸಿಸ್ಟೆಂಟ್ ಟ್ರಾμಕ್ ಮೇಲ್ವಿಚಾರಕ ಮೋಹನ್ ಬಾಬು ಎಂಬುವರು ಕೊಟ್ಟ ದೂರಿನ ಮೇರೆಗೆ ಸುಬೇಧಾರ್ಪಾಳ್ಯದ ನಿವಾಸಿ ನೂರ್ ಅಹಮ್ಮದ್ (35)ಎಂಬಾತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಅ.10ರಂದು ಯಶವಂತಪುರದ ಬಿಎಂಟಿಸಿ ಡಿಪೋಗೆ ಬಂದ ಆರೋಪಿ ನೂರ್ ಮೊಹಮ್ಮದ್ ಟಿಟಿಎಂಸಿಗೆ ಭೇಟಿ ನೀಡಿದ್ದ. ಈ ವೇಳೆ ತಾನು ಬಿಎಂಟಿಸಿ ಉತ್ತರ ವಲಯಕ್ಕೆ ಹೊಸದಾಗಿ ಬಂದಿರುವ ಡಿಸಿ ಎಂದು ಪರಿಚಯಿಸಿಕೊಂಡಿದ್ದ.
ಇದನ್ನೂ ಓದಿ:- ಯುವಕನ ಕುಟುಂಬಕ್ಕೆ ಒಂದು ಲಕ್ಷ ರೂ. ನೆರವು
ಇನ್ನು ಮುಂದೆ ನಾನು ಹೇಳಿದ ಹಾಗೆ ಕೆಲಸಗಳು ಆಗಬೇಕು. ಅ.11ರಂದು ಕರ್ತವ್ಯಕ್ಕೆ ಹಾಜರಾಗುತ್ತೇನೆ ಎಂದು ಹೇಳಿ ಹೋಗಿದ್ದ. ಮರುದಿನ ಘಟಕ 8ರ ಬಳಿ ಹೋಗಿ ಪಾರುಪತ್ತೆದಾರರಾದ ಹರ್ಷವರ್ಧನ್ರನ್ನು ಪರಿಚಯ ಮಾಡಿಕೊಂಡು ವಾಹನಗಳನ್ನು ನಿಲ್ಲಿಸಿ ಪರಿಶೀಲಿಸಿದ್ದ. ಆ ವೇಳೆ ನೂರ್ ಅಹಮ್ಮದ್ ಬಗ್ಗೆ ಅನುಮಾನ ಬಂದು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಗೆ ಈ ಬಗ್ಗೆ ಮಾಹಿತಿ ನೀಡಿದಾಗ, ಇಂಥ ಹೆಸರಿನ ವ್ಯಕ್ತಿಯ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು. ಆಗ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದ ಪೊಲೀಸರಿಗೆ ಆರೋ ಪಿಯನ್ನು ಡಿಪೋ ಸಿಬ್ಬಂದಿಯೇ ಒಪ್ಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ