ಪರಪ್ಪನ ಕಾರಾಗೃಹಕ್ಕೆ ಮರಳಿದ ವಿ.ಶಶಿಕಲಾ
Team Udayavani, Oct 13, 2017, 7:00 AM IST
ಬೆಂಗಳೂರು: ಐದು ದಿನಗಳ ಕಾಲ ಪೆರೋಲ್ ಆಧಾರದ ಮೇಲೆ ಚೆನ್ನೈಗೆ ತೆರಳಿದ್ದ ಎಐಡಿಎಂಕೆ ಮುಖಂಡೆ ವಿ.ಶಶಿಕಲಾ ಗುರುವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವಾಪಸ್ ಬಂದಿದ್ದಾರೆ.
ಗುರುವಾರ ಮಧ್ಯಾಹ್ನ ಚೆನ್ನೈನಿಂದ ಬೆಂಬಲಿಗರು ಹಾಗೂ ಎಐಡಿಎಂಕೆ ಮುಖಂಡ ದಿನಕರನ್ ಜತೆ ಬೆಂಗಳೂರಿಗೆ ಹೊರಟಿದ್ದ
ಶಶಿಕಲಾ, ಸಂಜೆ 4 30ರ ಸುಮಾರಿಗೆ ಕೇಂದ್ರ ಕಾರಾಗೃಹದ ಬಳಿ ಆಗಮಿಸಿದರು. ಜೈಲಿನ ಬಳಿ ಬೆಂಬಲಿಗರು ಹಾಗೂ ದಿನಕರನ್, ಜೈಲಿನಲ್ಲಿರುವ ದೋಷಿ ಸುಧಾಕರನ್ ಪುತ್ರ ಜಯಾನಂದ್ಗೆ ಧನ್ಯವಾದ ತಿಳಿಸಿ ಜೈಲಿನೊಳಕ್ಕೆ ಪ್ರವೇಶಿಸಿದರು. ಐದು ದಿನಗಳ ಪೆರೋಲ್ ಮುಕ್ತಾಯವಾದ ಹಿನ್ನೆಲೆಯಲ್ಲಿ ವಾಪಸ್ ಆಗಮಿಸಿದ ಶಶಿಕಲಾರನ್ನು ಜೈಲು ನಿಯಮಾವಳಿಗಳಂತೆ ತಪಾಸಣೆ ನಡೆಸಿದ ಅಧಿಕಾರಿಗಳು ಅವರು ತಂಗಿದ್ದ ಜೈಲು ಕೊಠಡಿಗೆ ಕಳುಹಿಸಿದರು. ಐದು ದಿನಗಳ ಕಾಲ ಚೆನ್ನೈನಲ್ಲಿದ್ದ ಶಶಿಕಲಾ ಪೆರೋಲ್ ಷರತ್ತುಗಳನ್ನು ಉಲ್ಲಂ ಸಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಅಕ್ರಮ ಆದಾಯ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಕಳೆದ 8 ತಿಂಗಳಿಂದ ಜೈಲಿನಲ್ಲಿರುವ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪೆ¤ ವಿ.ಶಶಿಕಲಾ, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಪತಿ ಎಂ .ನಟರಾಜನ್ ಅವರನ್ನು ಭೇಟಿ ಮಾಡುವ ಸಲುವಾಗಿ ಜೈಲು ಅಧಿಕಾರಿಗಳು ಅ.7ರಿಂದ 11ರವರೆಗೆ ಷರತ್ತು ಬದ್ಧ ಪೆರೋಲ್ ಮಂಜೂರು ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ