ನಿಧಿಗಾಗಿ ಪತ್ನಿ ಬಲಿಗೆ ಮುಂದಾದ ಅರ್ಚಕ


Team Udayavani, May 6, 2018, 10:38 AM IST

blore-1.jpg

ಬೆಂಗಳೂರು: ಕುಂಭ ರಾಶಿಯ ಹೆಣ್ಣನ್ನು ಬಲಿ ಕೊಟ್ರೆ ನಿಧಿ ಸಿಗುತ್ತೆ ಎಂಬ ಸ್ವಾಮೀಜಿಯೊಬ್ಬರ ಹೇಳಿಕೆಗೆ ಮರುಳಾದ ದೇವಸ್ಥಾನದ ಅರ್ಚಕನೊಬ್ಬ ಅದಕ್ಕಾಗಿ ಕುಂಭ ರಾಶಿಯಲ್ಲಿ ಜನಿಸಿದ ತನ್ನ ಪತ್ನಿಯನ್ನೇ ಬಲಿ ಕೊಡಲು ಯತ್ನಿಸಿದ ಪ್ರಕರಣ ವರದಿಯಾಗಿದೆ. ಆದರೆ, ಮಹಿಳಾ ಆಯೋಗ ಹಾಗೂ ಬ್ಯಾಡರಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಆತನ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ.

ಉಲ್ಲಾಳ ನಿವಾಸಿ ಮಹಾಲಿಂಗೇಶ್‌ (45) ಬಂಧಿತ. ಉಲ್ಲಾಳ ಬಳಿಯ ಮುದ್ದಯ್ಯನಪಾಳ್ಯದಲ್ಲಿರುವ ಸ್ವಂತ ನಿವೇಶನದಲ್ಲಿ ರುದ್ರಮುನೇಶ್ವರ ದೇವಾಲಯ ನಿರ್ಮಿಸಿ ಅರ್ಚಕನಾಗಿರುವ ಮಹಾಲಿಂಗೇಶ್‌ ಸ್ವಾಮೀಜಿ ಹೇಳಿದರು ಎಂಬ ಕಾರಣಕ್ಕೆ ಕುಂಭ ರಾಶಿಯಲ್ಲಿ ಹುಟ್ಟಿದ ಪತ್ನಿ ಸವಿತಾರನ್ನು ಬಲಿಕೊಟ್ಟು ನಿಧಿ ಪಡೆಯುವ ತವಕದಲ್ಲಿದ್ದ. ಈ ಕುರಿತು ಪತ್ನಿ ನೀಡಿದ ದೂರಿನ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ. ಈತ ತನ್ನ ಅಪ್ರಾಪೆ¤ ಪುತ್ರಿಗೂ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುದ್ದಯ್ಯನಪಾಳ್ಯದ ರುದ್ರಮುನೇಶ್ವರ ದೇವಾಲಯ ಸ್ಥಾಪಿಸಿ ಅದರ ಅರ್ಚಕನಾಗಿರುವ ಮಹಾಲಿಂಗೇಶ್‌, 18 ವರ್ಷಗಳ ಹಿಂದೆ ಸವಿತಾ ಎಂಬುವರನ್ನು ಮದುವೆಯಾಗಿದ್ದ. ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದು, ಮೊದಲ ಪುತ್ರಿ ಮೂಡಬಿದರೆಯ ಆಳ್ವಾಸ್‌ನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರೆ, ಬೆಂಗಳೂರಿನಲ್ಲೇ ದ್ವಿತೀಯಪುತ್ರಿ 9ನೇ ತರಗತಿ ಹಾಗೂ ಕಿರಿಯ ಪುತ್ರಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ಐದು ವರ್ಷಗಳ ಹಿಂದೆ ಮಾರ್ಕೆಂಡೇಶ್ವರ ಸ್ವಾಮೀಜಿ ಎಂಬುವವರು ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ, ನಿರ್ದಿಷ್ಟ ಜಾಗದಲ್ಲಿ ಗುಂಡಿ ತೆಗೆದು ಕುಂಭ ರಾಶಿ ಹೆಣ್ಣನ್ನು ಬಲಿಕೊಟ್ಟು ರಕ್ತದಲ್ಲಿ ದೇವಾಲಯದಲ್ಲಿ ತೋಡಿದ್ದ ಗುಂಡಿಗೆ ನೈವೇದ್ಯ ಮಾಡಬೇಕು. ಜತೆಗೆ ಅನ್ನಕ್ಕೆ ಆ ರಕ್ತ ಬೇರೆಸಿ ದೀಪದ ಪಕ್ಕದಲ್ಲಿ ಇಡಬೇಕು. 

ಅದಕ್ಕೆ 2018 ಆಗಸ್ಟ್‌ ತಿಂಗಳು ಸೂಕ್ತ. ಆ ತಿಂಗಳ ವಿಶೇಷ ದಿನದಂದು ಬಲಿ ಕೊಟ್ಟರೆ ಭೂಮಿಯೊಳಗಿರುವ ಕುಂಭ(ಕಳಸ) ಮೇಲೆ ಬರುತ್ತದೆ. ಅದರಲ್ಲಿ ಕೋಟ್ಯಂತರ ರೂ. ನಗ, ನಾಣ್ಯ, ಚಿನ್ನಾಭರಣ ಸಿಗುತ್ತದೆ ಎಂದು ಹೇಳಿದ್ದರು. ಅದರಂತೆ ಆರೋಪಿ ಕುಂಭ ರಾಶಿಯ ಹೆಣ್ಣಿಗಾಗಿ ಹುಡುಕಾಟ ನಡೆಸಿದಾಗ ಪತ್ನಿಯೇ ಕುಂಭ ರಾಶಿಯವಳು ಎಂದು ಗೊತ್ತಾಗಿದೆ. ಹೀಗಾಗಿ ಪತ್ನಿ ಸವಿತಾ ಹಾಗೂ ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ಬಲವಂತವಾಗಿ ತನ್ನ ಪೂಜೆಗೆ ಒಪ್ಪಿಸಿದ್ದಾನೆ.
 
ಪತ್ನಿ, ಮಕ್ಕಳಿಂದ ನಗ್ನ ಪೂಜೆ ಮಾಡಿಸುತ್ತಿದ್ದ: ಸ್ವಾಮೀಜಿ ಮಾತಿನಂತೆ ಐದು ವರ್ಷಗಳ ಹಿಂದೆ ದೇವಾಲಯದ ಆವರಣದಲ್ಲಿ ಗುಂಡಿ ತೆಗೆಸಿದ್ದ ಆತ ಪ್ರತಿನಿತ್ಯ ನಸುಕಿನಲ್ಲಿ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ನಸುಕಿನಲ್ಲಿ ದೇವಾಲಯಕ್ಕೆ ಕರೆದೊಯ್ದು ಬೆತ್ತಲೆಗೊಳಿಸಿ ತಾನೂ ಬೆತ್ತಲಾಗಿ ಗುಂಡಿಗೆ ಪೂಜಿ ಸಲ್ಲಿಸುತ್ತಿದ್ದ. ಅಲ್ಲದೆ, ತಾನು ತೋಡಿದ ಗುಂಡಿಯಲ್ಲಿ ದಿನದ 24 ಗಂಟೆಗಳ ಕಾಲ ದೀಪ ಉರಿಯುವಂತೆ ವ್ಯವಸ್ಥೆ ಮಾಡಿದ್ದು, ಬೆಳಗ್ಗೆ ಮತ್ತು ಸಂಜೆ ಕೆಂಪು ಅನ್ನದಿಂದ ನೈವೇದ್ಯ ಮಾಡುತ್ತಿದ್ದ. 

ಅಲ್ಲದೆ, ನಿಧಿ ಪಡೆಯಲು ಸಹಕರಿಸು ಎಂದು ಪತ್ನಿ, ಮಕ್ಕಳಿಗೆ ಮದ್ಯ ಹಾಗೂ ತಂಬಾಕು ಸೇವಿಸುವಂತೆ ಪೀಡಿಸುತ್ತಿದ್ದ. ಒಪ್ಪದಿದ್ದಾಗ ಗುಪ್ತಾಂಗ ಸೇರಿದಂತೆ ದೇಹದ ವಿವಿಧ ಭಾಗಗಳ ಮೇಲೆ ಸಿಗರೇಟಿನಿಂದ ಸುಟ್ಟಿದ್ದಾನೆ ಎಂದು ಸವಿತಾ ಮಹಿಳಾ ಆಯೋಗಕ್ಕೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾಳೆ. 

ಆರೋಪಿ ಮಹಾಲಿಂಗೇಶ್‌ನನ್ನು ವಿಚಾರಣೆಗೆ ಒಳಪಡಿಸಿದ್ದು, ನಿಧಿಗಾಗಿ ಪತ್ನಿಯನ್ನು ಬಲಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದ ಬಗ್ಗೆ ದಾಖಲೆಗಳು ಸಿಕ್ಕಿಲ್ಲ. ಆದರೆ, ಪುತ್ರಿ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.

ಪುತ್ರಿಯ ಮೇಲೇ ಲೈಂಗಿಕ ದೌರ್ಜನ್ಯ 
ಆರಂಭದಲ್ಲಿ ಪತ್ನಿ ಸವಿತಾ ಪತಿಯ ವಿಕೃತ ಕೆಲಸಕ್ಕೆ ಒಪ್ಪದಿದ್ದಾಗ ಮೊದಲ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇದರಿಂದ ಬೇಸತ್ತ ಆಕೆ ಮೊದಲ ಪುತ್ರಿಯನ್ನು ಮೂಡಬಿದರೆಯ ಆಳ್ವಾಸ್‌ ಕಾಲೇಜಿಗೆ ಸೇರಿಸಿದ್ದರು. ಆದರೂ, ಆಕೆಯನ್ನು ಬಲವಂತವಾಗಿ ಕರೆಸಿಕೊಂಡು ದೌರ್ಜನ್ಯವೆಸಗುತ್ತಿದ್ದ. 

ಅಲ್ಲದೆ,ತಾಯಿ ಬಲಿ ಕೊಡಲು ನಿರ್ಧರಿಸಿದ್ದು, ಯಾರಾದರೂ ಕೇಳಿದರೆ, ತಾಯಿಗೆ ಅಕ್ರಮ ಸಂಬಂಧವಿದ್ದು, ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆಂದು ಹೇಳಬೇಕು. ನಿಮ್ಮ ತಾಯಿಯನ್ನು ಬಲಿ ಕೊಟ್ಟ ನಂತರ ಆಕೆಯ ಸಹೋದರಿಯನ್ನು ಮದುವೆಯಾಗುತ್ತೇನೆ. ಇದಕ್ಕೆ ನೀವು ಸಹಕರಿಸದಿದ್ದಲ್ಲಿ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಮಕ್ಕಳನ್ನು ಹೆದರಿಸಿದ್ದ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.

ಇತ್ತೀಚೆಗೆ ಪತಿ ಬಲಿ ಕೊಡಲು ಸಿದ್ಧತೆ ತೀವ್ರಗೊಳಿಸಿದ್ದರಿಂದ ಆತಂಕಗೊಂಡ ಸವಿತಾ ಮಹಿಳಾ ಆಯೋಗಕ್ಕೆ ಪತಿಯ ವಿರುದ್ಧ ದೂರು ನೀಡಿದ್ದರು. ಗಂಡು ಮಗುವಿಗೆ ಜನ್ಮ ನೀಡಲು ಸಾಮರ್ಥಯವಿಲ್ಲದ ನೀನ್ನನ್ನು ನಿಧಿಗಾಗಿ ಬಲಿ ಕೊಟ್ಟು ನೀನ್ನ ಸಹೋದರಿಯನ್ನು ಮದುವೆಯಾಗುತ್ತೇನೆ. ಅಲ್ಲದೆ, ಗಂಡು ಮಗುವಿಗಾಗಿ ನಾನೇ ನನ್ನ ಪತಿಗೆ ಮತ್ತೂಂದು ಮದುವೆ ಮಾಡಿಸಲು ಸಿದ್ಧನಾಗಿದ್ದೇನೆ ಎಂದು ಸಮಾಜದಲ್ಲಿ ಹೇಳಿಕೊಂಡು ಬರಬೇಕು ಎಂದು ಪೀಡಿಸಿರುವುದಾಗಿಯೂ ಸವಿತಾ ದೂರಿನಲ್ಲಿ ಆರೋಪಿಸಿದ್ದಾರೆ.

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.