ಪ್ರಧಾನಿ ಮೋದಿಗೆ ಕರುನಾಡ ಪುಟಾಣಿಯ ಪಾಕೆಟ್ ಮನಿ!
Team Udayavani, Feb 14, 2019, 9:46 AM IST
ಬೆಂಗಳೂರು: ಪ್ರಧಾನಮಂತ್ರಿ ಕೈಗೆ ಕರುನಾಡಿನ ಪುಟಾಣಿಯ ಪಾಕೆಟ್ ಮನಿ! ಏನಿದು ಹೊಸ ಯೋಜನೆ ಅಂದುಕೊಂಡಿರಾ? ತಪ್ಪು. ಸ್ವತ್ಛತೆಯ ಜಾಗೃತಿ ಮೂಡಿಸುವ ಉದ್ದೇಶದಿಂದ “ಪಾಯಿಖಾನೆ’ ಎಂಬ ಬೀದಿ ನಾಟಕಗಳನ್ನು ಮಾಡುತ್ತಿದ್ದ, ಬೆಂಗಳೂರಿನ ಪ್ರತ್ಯಕ್ಷ ಬಿ.ಆರ್. ಎಂಬ ಪುಟಾಣಿ ಈ ಸಾಧನೆ ಮಾಡಿ, ಈಗ 2019ನೇ ಸಾಲಿನ ಬಾಲ ಪುರಸ್ಕಾರಕ್ಕೆ ಪಾತ್ರಳಾಗಿದ್ದಾಳೆ. ಬೀದಿ ನಾಟಕದಿಂದ ಸಂಗ್ರಹಿಸಿದ ಹಣವನ್ನು ಸ್ವತ್ಛತಾ ಅಭಿಯಾನಕ್ಕೆ ನೀಡಿ, ಮಾದರಿ ಆಗಿದ್ದಾಳೆ.
ಇತ್ತೀಚೆಗೆ ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಪ್ರತ್ಯಕ್ಷ, ಬೆಂಗಳೂರಿನ ಗಿರಿನಗರದ ಮಾರ್ಟಿನ್ ಲೂಥರ್ ಆಂಗ್ಲ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ. 6ನೇ ವಯಸ್ಸಿನಿಂದಲೇ ನಾಟಕದ ಗೀಳು ಹತ್ತಿಕೊಂಡ ಈಕೆ “ರಂಗಮಂಟಪ’, “ಪ್ರಸಂಗ’, “ರಂಗ ನಿರಂತರ’ ತಂಡಗಳಲ್ಲಿ ಪಾತ್ರ ಮಾಡುತ್ತಿದ್ದರು. “ಅಕ್ಕು’ ಪಾತ್ರ ಈಕೆಗೆ ಹೆಸರು ತಂದು ಕೊಟ್ಟಿತ್ತು.
ಏನಿದು ನಾಟಕ?: ನಾಟಕದ ಮೂಲಕ ರಾಜ್ಯದ 15 ಜಿಲ್ಲೆಯ, 130ಕ್ಕೂ ಹೆಚ್ಚು ಹಳ್ಳಿಗಳ ಬೀದಿಗಳಲ್ಲಿ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸಿರುವ ಈ ಪುಟಾಣಿ, ಏಕಪಾತ್ರ ಅಭಿನಯದ ಮೂಲಕ ಶೌಚಾಲಯದ ಮಹತ್ವ ತಿಳಿಸಿದ್ದಳು. ಹೀಗೆ ನಾಟಕಗಳಿಂದ ಸಂಗ್ರಹಿಸಿದ ಪಾಕೆಟ್ ಮನಿಯನ್ನು ಪ್ರಧಾನಿ ಅವರಿಗೆ ಸಮರ್ಪಿಸಿದ್ದಾಳೆ. ಈ ನಾಟಕದ ಮೂಲಕವೇ ಕನಕಪುರ, ರಾಮನಗರ, ಕೊಪ್ಪಳ, ಬಳ್ಳಾರಿ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳ ಬೀದಿಗಳಲ್ಲಿ ಪ್ರತ್ಯಕ್ಷ ಜಾಗೃತಿ ಮೂಡಿಸಿದ್ದಾಳೆ.
ಬೀದಿಗಳಲ್ಲಿ ವೀಕೆಂಡ್!: ಪ್ರತ್ಯಕ್ಷ ಎರಡು, ಮೂರು ವರ್ಷಗಳಿಂದ ವಾರಾಂತ್ಯದ ರಜೆ ದಿನಗಳನ್ನು ಕಳೆದಿದ್ದು, ಬೀದಿಗಳಲ್ಲಿ, ಅದೂ ನಾಟಕಗಳ ಮೂಲಕ. “ನನಗೆ ಕುಟುಂ ಬದವರು, ಶಾಲೆಯಿಂದ ಪ್ರೋತ್ಸಾಹ ಲಭಿಸಿತು. ಎಷ್ಟೋ ಸಲ ಶಾಲೆಗೆ ಹೋಗಲು ಆಗದೇ ಇದ್ದಾಗ, ಮತ್ತೆ ಪಠ್ಯ ಕವರ್
ಮಾಡಲು ಶಾಲೆಯ ಎಲ್ಲ ಟೀಚರ್ಗಳೂ ನೆರವಾಗುತ್ತಿದ್ದರು. ಪ್ರಾಂಶುಪಾಲರಾದ ಡಾ. ಸುಧಾ ಪ್ರಸನ್ನ ಅವರು ನನ್ನ ಸಾಧನೆಗೆ ಪ್ರೇರಣೆ ನೀಡಿದರು’ ಎನ್ನುತ್ತಾರೆ ಪ್ರತ್ಯಕ್ಷ. ಈ ಪುಟಾಣಿ ಪ್ರಸ್ತುತ, “ಹಸನ’ ಎಂಬ ತಂಡ ಕಟ್ಟಿಕೊಂಡು, ಸ್ಲಂಗಳಲ್ಲಿನ ಬಯಲು ಶೌಚಾಲಯ, ಅದರ ಷ್ಪರಿಣಾಮಗಳನ್ನು ತಿಳಿಸುತ್ತಾ, ತ್ಯಾಜ್ಯಗಳ ಮರುಬಳಕೆ ಕುರಿತೂ ಜಾಗೃತಿ ಮೂಡಿಸುತ್ತಿದ್ದಾಳೆ.
“ಪ್ರಧಾನಿಗಳು ಹೊಸ ಹೊಸ ಐಡಿಯಾಗಳು ಇದ್ದರೆ ಕೊಡಮ್ಮಾ ಅಂತ ಹೇಳಿ, ಮುಂದಿನ ಓದು, ಸೆಮಿಸ್ಟರ್ ಬಗ್ಗೆ ತಿಳಿದುಕೊಂಡರು. ಉಡುಗೊರೆಯಾಗಿ ವಾಚ್ ಅನ್ನೂ ಕೊಟ್ಟಿದ್ದಾರೆ. ಅದರ ಹಿಂದೆ ನನ್ನ ಹೆಸರಿದೆ. ಮುಂದೆ ಅವರ ಸಹಿ ಇದೆ. ಇದನ್ನು ನೋಡಿದಾಗಲೆಲ್ಲಾ ಇನ್ನೇನಾದರೂ ಸಾಧಿಸಬೇಕು ಅನ್ನೋ ಹುಮ್ಮಸ್ಸು, ಛಲ ಬರುತ್ತದೆ’ ಎಂದು ಪ್ರತ್ಯಕ್ಷ “ಪ್ರತ್ಯಕ್ಷ’ ವರದಿ ನೀಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ