ಕೋವಿಡ್ ಕರಿಛಾಯೆ ನಡುವೆ ಸರಳ ಕರಗ
Team Udayavani, Apr 26, 2021, 12:19 PM IST
ಬೆಂಗಳೂರು: ನಗರದಲ್ಲಿ ತನ್ನದೇ ಆದ ಧಾರ್ಮಿಕಹಿನ್ನೆಲೆ ಹೊಂದಿರುವ ದ್ರೌಪದಿ ಅಥವಾ ಬೆಂಗಳೂರು ಕರಗ ಮಹೋತ್ಸವದ ಪ್ರಯುಕ್ತ ಕೋವಿಡ್ ಕರಿಛಾಯೆಯ ನಡುವೆಯೂ ಭಾನುವಾರ ಸರಳವಾಗಿ ದೀಪೋತ್ಸವ ನಡೆಯಿತು.ದ್ರೌಪದಿ ಕರಗ ಉದ್ಯಾನಗರಿಯ ಚಾರಿತ್ರಿಕಹಾಗೂ ಸಾಂಸ್ಕಂತಿಕ ಹಬ್ಬ.
ಚೈತ್ರ ಪೂರ್ಣಿಮಾದಿನವಾದ ಏ.27ರಂದು ನಡೆಯುವ ಕರಗಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾಎರಡನೇ ಅಲೆಯ ಕರಿನೆರಳು ಈ ಬಾರಿಯೂಉತ್ಸವದ ಮೇಲೆ ಬಿದಿದೆ. ಹೀಗಾಗಿ, ಸತತಎರಡನೇ ವರ್ಷವೂ ಸರಳ ಕರಗ ಮಹೋತ್ಸವನಡೆಸಲು, ಪಾಲಿಕೆ, ಜಿಲ್ಲಾಡಳಿತ ಸಜ್ಜಾಗಿದೆ.
11 ದಿನಗಳ ಕಾಲ ನಡೆಯುವ ಕರಗ ಮಹೋತ್ಸವದಲ್ಲಿ ಹೂವಿನ ಕರಗವೇ ಮುಖ್ಯ ಕೇಂದ್ರ ಬಿಂದುವಾಗಿದ. ಇದಕ್ಕೆ ತಯಾರಿಗಳು ನಡೆದಿವೆ. ಈಗಾಗಲೇಶುರುವಾಗಿರುವ ಕರಗ ಮಹೋತ್ಸವದ ಧಾರ್ಮಿಕಕಾರ್ಯಗಳು ಏ.27 ರವರೆಗೆ ನಡೆಯಲಿದೆ.
ಸರಳ ವಾಗಿ ನಡೆದ ದೀಪೋತ್ಸವ: ಪಾರಂಪರಿಕ ಕರಗ, ದೇವರ ರಥೋತ್ಸವ ಮತ್ತು ಧ್ವಜಾರೋಹಣದಮೂಲಕ ಪ್ರಾರಂಭವಾಗಿದೆ. 11 ದಿನಗಳಲ್ಲಿ ಪ್ರತಿದಿನ ಸಂಜೆ 7.30ಕ್ಕೆ ಮಹಾಮಂಗಳಾರತಿ ನಡೆಯುತ್ತಿದೆ. ಈ ಸಂಬಂಧ ತಿಗಳರಪೇಟೆಯಲ್ಲಿರುವಧರ್ಮರಾಯ ದೇವಸ್ಥಾನದಲ್ಲಿ ಭಾನುವಾರದೀಪೋತ್ಸವ ಕೂಡ ಸರಳವಾಗಿ ಜರುಗಿತು.ಕೊರೊನಾ ಹಿನ್ನೆಲೆ ಸಾರ್ವಜನಿಕ ಪ್ರವೇಶವನ್ನುಸಂಪೂರ್ಣ ನಿಷೇಧಿಸಲಾಗಿತ್ತು.
ಕೆಲವರಿಗೆ ಮಾತ್ರ ಅವಕಾಶ: ಕರಗ ಆಚರಣೆಹಿನ್ನೆಲೆಯಲ್ಲಿ ಈ ಮೊದಲು ಪಾಲಿಕೆ ಆಯುಕ್ತರಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಗಉತ್ಸವವನ್ನು 50ರಿಂದ 100 ಜನ ಆಚರಣೆಗೆಅನುಮತಿ ನೀಡುವುದಾಗಿ ತಿಳಿಸಲಾಗಿತ್ತು.
ಆದರೆ,ಕೊರೊನಾ ಹೊಸ ಮಾರ್ಗಸೂಚಿ, ರಾತ್ರಿ ಕರ್ಫ್ಯೂ,ವೀಕೆಂಡ್ ಕರ್ಫ್ಯೂ ಮಧ್ಯೆ ಅರ್ಚಕರೂ ಸೇರಿಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಅವಕಾಶನೀಡಲಾಗಿದೆ. ಕೊರೊನಾ ಮಾರ್ಗಸೂಚಿ ಹಾಗೂ ಕರಗಉತ್ಸವ ಸಮಿತಿ ಆದೇಶದಂತೆ ಜಿಲ್ಲಾಡಳಿತದಿಂದಕೇವಲ ಐದು ಕುಟುಂಬಗಳಿಗೆ ಪಾಸ್ ನೀಡಲಾಗಿದೆ. ಪಾರಂಪರಿಕವಾಗಿ ವೈನಿಕುಲ ಕ್ಷತ್ರಿಯ ಅಥವಾತಿಗಳರ ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರಕರಗ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಪಾರಂಪರಿಕ ಕರಗದ ಹಿನ್ನೆಲೆ: ದ್ವಾಪರ ಯುಗದಲ್ಲಿರಾಕ್ಷಸರ ಪಡೆಗಳನ್ನು ಸದೆಬಡಿಯಲು ದ್ರೌಪದಿಜನ್ಮ ತಾಳಿದ್ದಳು ಎಂಬುದು ಇಲ್ಲಿನ ನಂಬಿಕೆ. ಆದರೆ,ಪಾಂಡವರು ಕುರುಕ್ಷೇತ್ರ ಕದನ ಮುಗಿಸಿ, ಯುಗಸಮಾಪ್ತಿಯಾಗಿ ಸ್ವರ್ಗಕ್ಕೆ ಹಿಂತಿರುಗುವಾಗತಿಮಿರಾಸುರ ಅನ್ನೋ ರಾಕ್ಷಸ ಮಾತ್ರಬದುಕುಳಿದಿರುತ್ತಾನೆ. ಆಗ ದ್ರೌಪದಿ ತನ್ನಬೆವರಿನಿಂದ ವೀರಕುಮಾರರನ್ನು ಸೃಷ್ಟಿ ಮಾಡಿತಿಮಿರಾಸುರನನ್ನು ಸಂಹರಿಸುತ್ತಾಳೆ ಎನ್ನುವ ಪ್ರತೀತಿಇದೆ. ಹೀಗಾಗಿ, ಬೆಂಗಳೂರಿನ ಕರಗ ಮಹೋತ್ಸವ ಪ್ರಖ್ಯಾತಿ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…