ಗುಜರಾತ್‌ ಮಾದರಿ ನಿಧಿಗೆ ಪ್ರಸ್ತಾವನೆ?


Team Udayavani, Dec 31, 2019, 3:08 AM IST

gujarat-madari

ಬೆಂಗಳೂರು: ಎಲೆಕ್ಟ್ರಿಕ್‌ ಬಸ್‌ ಸೇವೆಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ ಕಂಪನಿಗಳು ನಿರೀಕ್ಷೆಗಿಂತ ಹೆಚ್ಚು ದರ ನಿಗದಿಪಡಿಸಿದ್ದು, ಇದರಿಂದ ಆಗಲಿರುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸರಿದೂ ಗಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಗುಜರಾತ್‌ ಮಾದರಿ ಅನುಸರಿಸಲು ಮುಂದಾಗಿದೆ.

ಹವಾನಿಯಂತ್ರಿತ ಬಸ್‌ನ ಪ್ರತಿ ಕಿ.ಮೀ. ಕಾರ್ಯಾಚರಣೆಗೆ ಆಗುವ ಖರ್ಚು ಅನ್ನು ಪ್ರತಿ ಕಿ.ಮೀ.ಗೆ ಬರುವ ಆದಾಯಕ್ಕೆ ಹೋಲಿಸಿದರೆ, ಕನಿಷ್ಠ 25ರಿಂದ 28 ರೂ. ಹೆಚ್ಚುವರಿ ಹೊರೆ ಆಗುತ್ತದೆ. ಈ ಹೊರೆಯನ್ನು ತಗ್ಗಿಸಲು ಗುಜರಾತ್‌ ಮಾದರಿಯಲ್ಲಿ ಸಂಸ್ಥೆಗೆ “ಕಾರ್ಯಸಾಧ್ಯತಾ ಅಂತರ ನಿಧಿ’ (ವಯಾಬಲಿಟಿ ಗ್ಯಾಪ್‌ ಫ‌ಂಡ್‌)ಯನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.

ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ “ಫೇಮ್‌-2′ ಅಡಿ ರಾಜ್ಯ ಸಾರಿಗೆ ನಿಗಮಗಳು ಒಟ್ಟಾರೆ 400 ವಿದ್ಯುತ್‌ಚಾಲಿತ ಬಸ್‌ಗಳನ್ನು ರಸ್ತೆಗಿಳಿಸಲು ಟೆಂಡರ್‌ ಆಹ್ವಾನಿಸಿತ್ತು. ಇದರಲ್ಲಿ ಬಿಎಂಟಿಸಿಗೇ 300 ಬಸ್‌ಗಳು ಪೂರೈಕೆ ಆಗಲಿವೆ. 37 ಆಸನಗಳ ಈ 300 ಎಲೆಕ್ಟ್ರಿಕ್‌ ಬಸ್‌ಗಳಿಗೆ ಈಗಾಗಲೇ ತಾಂತ್ರಿಕ ಮತ್ತು ಹಣಕಾಸು ಬಿಡ್‌ ತೆರೆಯಲಾಗಿದ್ದು, ಮೂಲಗಳ ಪ್ರಕಾರ ಎರಡು ಕಂಪೆನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದು, ಈ ಪೈಕಿ ಹೈದರಾಬಾದ್‌ ಮೂಲದ ಕಂಪೆನಿಯು ಕನಿಷ್ಠ ದರ ಅಂದರೆ ಕಿ.ಮೀ.ಗೆ ಸುಮಾರು 88ರಿಂದ 90 ರೂ. (ಎಸಿ) ನಿಗದಿಪಡಿಸಿವೆ. ಇದಲ್ಲದೆ, ಚಾಲಕ ಮತ್ತು ನಿರ್ವಹಣಾ ವೆಚ್ಚ ಪ್ರತ್ಯೇಕವಾಗಿರುತ್ತದೆ. ಹಾಗಾಗಿ, ಹೆಚ್ಚು-ಕಡಿಮೆ 100 ರೂ. ದಾಟಲಿದೆ.

ಆದರೆ, ವೋಲ್ವೋ ಬಸ್‌ವೊಂದರಿಂದ ಪ್ರಸ್ತುತ ಪ್ರತಿ ಕಿ.ಮೀ. ಬರುವ ಆದಾಯವೇ 66ರಿಂದ 68 ರೂ. ಎಂದು ಅಂದಾಜಿಸಲಾಗಿದೆ. ಇನ್ನು ಡೀಸೆಲ್‌ ಆಧಾರಿತ ಹವಾನಿಯಂತ್ರಿ ಬಸ್‌ನ ಕಾರ್ಯಾಚರಣೆ ವೆಚ್ಚ ಕಿ.ಮೀ.ಗೆ 75ರಿಂದ 80 ರೂ. ಆಗುತ್ತದೆ. ಹೀಗಿರುವಾಗ, ಯೋಜನೆ ಅನುಷ್ಠಾನ ಖರ್ಚು ಮತ್ತು ಆದಾಯದ ನಡುವಿನ ಅಂತರದ ಮೊತ್ತವನ್ನು ಭರಿಸುವಂತೆ ಮನವಿ ಮಾಡಲು ಸಿದ್ಧತೆ ನಡೆಸಿದೆ. ಈ ಸಂಬಂಧ ಹಣಕಾಸು ಇಲಾಖೆಯೊಂದಿಗೆ ಮಾತುಕತೆಯನ್ನೂ ನಡೆಸುತ್ತಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಗುಜರಾತ್‌ನಲ್ಲಿ ಹೇಗಿದೆ?: ಗುಜರಾತಿನಲ್ಲಿ ಕೂಡ ಇದೇ ರೀತಿ ನಗರ ಸಾರಿಗೆಗೆ ವಿದ್ಯುತ್‌ಚಾಲಿತ ಬಸ್‌ಗಳನ್ನು ರಸ್ತೆಗಿಳಿಸಿದೆ. ಬಸ್‌ ಕಾರ್ಯಾಚರಣೆ ಖರ್ಚು ಮತ್ತು ಅದರಿಂದ ಬರುವ ಆದಾಯದ ನಡುವಿನ ಅಂತರವನ್ನು ಅಲ್ಲಿನ ಸರ್ಕಾರವೇ ಭರಿಸುತ್ತಿದೆ. ಅದೇ ರೀತಿ, ಇಲ್ಲಿಯೂ ಅನುದಾನದ ನೆರವು ನೀಡಬೇಕು ಎಂಬುದು ಸಂಸ್ಥೆಯ ಪ್ರತಿಪಾದನೆ. ಅಂದಹಾಗೆ, ವಿದ್ಯುತ್‌ಚಾಲಿತ ಬಸ್‌ವೊಂದಕ್ಕೆ ಕೇಂದ್ರವು ಫೇಮ್‌-2 ಯೋಜನೆ ಅಡಿ ಗರಿಷ್ಠ 50 ಲಕ್ಷ ರೂ. ಸಬ್ಸಿಡಿ ನೀಡುತ್ತಿದೆ.

ಬಸ್‌ಗೆ ತಗಲುವ ವೆಚ್ಚ ಅಂದಾಜು 1.50 ಕೋಟಿ ರೂ. ಉಳಿದ ಒಂದು ಕೋಟಿ ರೂ.ಗಳನ್ನು ಪ್ರತಿ ಕಿ.ಮೀ.ಗೆ ದರ ನಿಗದಿಪಡಿಸಿ ಗುತ್ತಿಗೆ ರೂಪದಲ್ಲಿ ಕಾರ್ಯಾಚರಣೆ ಮಾಡುವ ಮೂಲಕ ಸರಿದೂಗಿಸಬೇಕಾಗುತ್ತದೆ. ನಿರೀಕ್ಷೆಗಿಂತ ಹೆಚ್ಚು ಮೊತ್ತಕ್ಕೆ ಬಿಡ್‌ ಮಾಡಿದ್ದರಿಂದ ಬಿಎಂಟಿಸಿಯು ಇಕ್ಕಟ್ಟಿಗೆ ಸಿಲುಕಿದೆ. ಯೋಜನೆ ಅನುಷ್ಠಾನದಿಂದ ಕೋಟ್ಯಂತರ ರೂ. ಆರ್ಥಿಕ ಹೊರೆ ಆಗುತ್ತದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗೆ ಇದು ನುಂಗಲಾರದ ತುತ್ತು. ಹಾಗಂತ, ಅನುಷ್ಠಾನ ಮಾಡದಿದ್ದರೆ ಸರ್ಕಾರಗಳ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇದ್ದು, ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯೂ ಇದಾಗಿದೆ. ಬಸ್‌ಗಳ ಖರೀದಿ-ಗುತ್ತಿಗೆ ನಡುವಿನ ಹಗ್ಗಜಗ್ಗಾಟದಲ್ಲೇ ಫೇಮ್‌-1 ಅನುಷ್ಠಾನ ಆಗಲಿಲ್ಲ. ಈಗ ಮತ್ತೂಂದು ನೆಪದಲ್ಲಿ ಯೋಜನೆಗೆ ಹಿನ್ನಡೆಯಾದರೆ, ಅದು ಮತ್ತೂಂದು ರೀತಿಯ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಚಾಲಿತ ಬಸ್‌ಗಳನ್ನು ರಸ್ತೆಗಿಳಿಸುವ ಅನಿವಾರ್ಯತೆ ಕೂಡ ಇದೆ ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕನಿಷ್ಠ ಬಿಡ್‌ಗೆ ಪೂರೈಕೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ವಾಯವ್ಯ ರಸ್ತೆ ಸಾರಿಗೆ ನಿಗಮ (ಎನ್‌ಡಬುಕೆಆರ್‌ಟಿಸಿ)ದ ವ್ಯಾಪ್ತಿಯಲ್ಲಿ ಬರುವ ಅಂತರ ನಗರಗಳಲ್ಲಿ ಕಾರ್ಯಾಚರಣೆ ಮಾಡಲು ತಲಾ 50 ವಿದ್ಯುತ್‌ಚಾಲಿತ ಹವಾನಿಯಂತ್ರಿತ ಬಸ್‌ಗಳಿಗೂ ಟೆಂಡರ್‌ ಕರೆಯಲಾಗಿತ್ತು. ಕನಿಷ್ಠ ಬಿಡ್‌ ಕ್ರಮವಾಗಿ ಕಿ.ಮೀ.ಗೆ 68.4 ರೂ. ಹಾಗೂ 91.8 ರೂ. ಆಗಿದೆ. ಮೂರೂ ಸಂಸ್ಥೆಗಳಿಗೆ “Olectra-BYD’ ಕಂಪನಿ ಕನಿಷ್ಠ ಬಿಡ್‌ಗೆ ಬಸ್‌ಗಳನ್ನು ಪೂರೈಸಲು ಮುಂದೆಬಂದಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇದು ಆಯಾ ಸಾರಿಗೆ ನಿಗಮಗಳ ಆಡಳಿತ ಮಂಡಳಿಯಲ್ಲಿ ಅನುಮೋದನೆಗೊಂಡ ನಂತರ ಅಂತಿಮವಾಗಲಿದೆ.

ಈಚೆಗಷ್ಟೇ ತಾಂತ್ರಿಕ ಮತ್ತು ಹಣಕಾಸು ಬಿಡ್‌ ತೆರೆಯಲಾಗಿದೆ. ಆಯಾ ಕಂಪೆನಿಗಳು ಮಾಡಿರುವ ಬಿಡ್‌ ದರವನ್ನು ನೋಡಿಕೊಂಡು, ಒಂದು ವೇಳೆ ಸಂಸ್ಥೆಗೆ ಆರ್ಥಿಕವಾಗಿ ಹೊರೆ ಆಗುವಂತಿದ್ದರೆ, “ವಯಾಬಿಲಿಟಿ ಗ್ಯಾಪ್‌ ಫ‌ಂಡ್‌’ಗಾಗಿ ಸರ್ಕಾರ ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುವುದು.
-ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.