ಅದಾಗಲ್ಲ..ಅದಾಗ್ದಿದ್ರೆ ಯಾವುದು ಆಗಲ್ಲ:ರೈತರ ಪ್ರತಿಭಟನೆಯಲ್ಲಿ ಪ್ರಥಮ್
Team Udayavani, Mar 1, 2017, 3:26 PM IST
ಬೆಂಗಳೂರು: ವಿದೇಶಿ ಪಾನೀಯಗಳಾದ ಪೆಪ್ಸಿ ಕೋಕಾಕೋಲಾಗಳನ್ನು ಬಿಟ್ಟು ಎಳನೀರು ,ಮಜ್ಜಿಗೆ ಕಬ್ಬಿನ ಹಾಲು ಕುಡಿಯಿರಿ ಎಂದು ರೈತ ಪರ ಸಂಘಟನೆಗಳು ಬುಧವಾರ ನಗರದ ಟೌನ್ ಹಾಲ್ ಬಳಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಮಾಜಿ ಉಪಮುಖ್ಯಮಂತ್ರಿ ,ಬಿಜೆಪಿ ನಾಯಕ ಆರ್.ಅಶೋಕ್, ಬಿಗ್ಬಾಸ್ ವಿನ್ನರ್ ಪ್ರಥಮ್ ಸಾಥ್ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಥಮ್, ಪೋಷಕರು ಮಕ್ಕಳಿಗೆ ಪೆಪ್ಸಿ, ಕೋಕಾ ಕೋಲಾ ನೀಡಬೇಡಿ ಬದಲಾಗಿ ಎಳನೀರು ನೀಡಿ. ಸ್ಮೋಕಿಂಕ್ ಮತ್ತು ಡ್ರಿಂಕಿಂಗ್ನಷ್ಟೆ ವಿದೇಶಿ ಪಾನೀಯಗಳು ಹಾನಿಕಾರಕ, ಶರೀರವನ್ನು ಅಷ್ಟೇ ಹಾಳು ಮಾಡುತ್ತದೆ. ಇದರಿಂದ ಶರೀರದ ಕೆಲವು ಭಾಗಗಳು ತುಂಬಾ ನಿಷ್ಕ್ರೀಯವಾಗುತ್ತದೆ ಎಂದರು. ಅಷ್ಟು ವೇಳೆಗೆ ಪಕ್ಕದಲ್ಲಿದ್ದ ಅಶೋಕ್ ಅವರು ನರ್ವ್ ಸಿಸ್ಟಂ ಫೇಲ್ ಆಗುತ್ತದೆ ಎಂದರು. ಆಗ ಪ್ರಥಮ್ ಅದಾಗಲ್ಲ.. ಅದಾಗಲ್ಲ ಅಂದ್ರೆ ಯಾವುದು ಆಗಲ್ಲ ಎಂದರು. ಈ ವೇಳೆ ಪ್ರತಿಭಟನಾ ನಿರತರು ಗೊಳ್ಳನೆ ನಕ್ಕರು.
ಆರ್ .ಅಶೋಕ್ ಮಾತನಾಡಿ ಪೆಪ್ಸಿ ಕೋಲಾಗಳಿಂದ ನಮ್ಮ ಮಕ್ಕಳ ಭವಿಷ್ಯ ಆರೋಗ್ಯ ಹಾಳಾಗುತ್ತಿದೆ. ಮುಂದಿನ ದಿನಗಳಲ್ಲಿ ಮಜ್ಜಿಗೆ, ಎಳನೀರು ಬಳಸಬೇಕು. ಕೆಲವು ದೇಶಗಳಲ್ಲಿ ಅನಾಹುತಗಳಾಗಿರುವುದನ್ನು ಗಮನದಲ್ಲಿರಿಸಿ ನಾವು ಎಚ್ಚರಿಕೆ ವಹಿಸಬೇಕು ಎಂದರು. ಟ್ಯಾಕ್ಸ್ ಬರುವುದಿಲ್ಲ ಎಂದು ಸರ್ಕಾರಗಳು ವಿದೇಶಿ ಪಾನೀಯಗಳಿಗೆ ಬೆಂಬಲ ನೀಡಿದರೆ ನಮ್ಮ ಕಾವೇರಿ ನೀರು ಕುಡಿಯುವುದಕ್ಕಲ್ಲ ಸಂಪೂರ್ಣ ಪೆಪ್ಸಿ ಕೋಕಾಕೋಲಾಕ್ಕೆ ಹೊರಟುಹೋಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಪ್ರತಿಭಟನೆ ವೇಳೆ ಪೆಪ್ಸಿ ಕೋಕೋಕೋಲಾಗಳನ್ನು ರಸ್ತೆಗೆ ಚೆಲ್ಲಿ, ಎಳನೀರು, ಮಜ್ಜಿಗೆ, ಕಬ್ಬಿನ ಹಾಲನ್ನು ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ