ವಾರ್ ರೂಂ ಮುಂದೆ ಶಾಸಕಿ ಧರಣಿ
Team Udayavani, May 6, 2021, 1:30 PM IST
ಬೆಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿರುವವರಿಗೆ ಹಾಸಿಗೆ ವ್ಯವಸ್ಥೆ ಮಾಡಿ ಎಂದು ಜಯನಗರ ಶಾಸಕಿ ಸೌಮ್ಯರೆಡ್ಡಿ ಬುಧವಾರ ಬಿಬಿಎಂಪಿ ವಾರ್ ರೂಂ ಮುಂದೆ ಧರಣಿ ನಡೆಸಿದರು.
ಹಾಸಿಗೆ ಬ್ಲಾಕಿಂಗ್ ದಂಧೆ ತಡೆಗಟ್ಟಿ ಎಲ್ಲವನ್ನು ಸರಿಪಡಿಸಲಾಗಿದೆ ಎಂದು ಸಂಸದರು ಹೇಳಿದ್ದಾರೆ. ಜನರು ಹಾಸಿಗೆಗಾಗಿ ನನಗೆ ಮನವಿ ಮಾಡುತ್ತಿದ್ದಾರೆ ಎಂದು ಹಾಸಿಗೆ ಬೇಡಿಕೆಯ ಪಟ್ಟಿಯನ್ನು ತಂದು ಅಧಿಕಾರಿಗಳಿಗೆ ನೀಡಿದರು.
ಹಾಸಿಗೆ ಹಂಚಿಕೆಯಾಗದ ಕಾರಣ ಫುಟ್ಪಾತ್ನಲ್ಲೇ ಧರಣಿ ಕುಳಿತರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲ ಸಮಸ್ಯೆ ಸರಿ ಮಾಡಿದೆ ಎಂದು ಹೇಳಿದ್ದೀರಿ, ಹಾಗಿದ್ದರೆ ಹಾಸಿಗೆ ಕೊಡಿಸಿ, ರೆಮ್ಡೆಸಿವಿಯರ್ ಕೊಡಿಸಿ ಎಂದು ಪ್ರಶ್ನಿಸಿದರು. ನನಗೆ ನಿಜವಾಗಲೂ ಅರ್ಥವಾಗುತ್ತಿಲ್ಲ ಎಲ್ಲಿ ಹೋಗಬೇಕು ನ್ಯಾಯ ಕೇಳಲು ಎಂದು . ನಾನು ಒಬ್ಬ ಶಾಸಕಿ. ಜನರು ಬಂದು ಕೇಳಿದರೆ ಏನು ಮಾಡಬೇಕು ಎಂದು ಕೇಳಿದರು.
ಜನರಿಗೆ ಸಹಾಯ ಮಾಡಿ. ಜಾತಿ, ಧರ್ಮ ಯಾಕೆ ಎಳೆದು ತರುತ್ತೀರಿ. ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿ. ಹುಟ್ಟಿದಾಗ ಇದೇ ಜಾತಿ ಧರ್ಮಹುಟ್ಟಬೇಕು ಎಂದು ಅರ್ಜಿ ಹಾಕಿಕೊಳ್ಳುತ್ತೇವಾ ಎಂದು ಪ್ರಶ್ನಿಸಿದರು. 18 ರಿಂದ 44 ವರ್ಷದವರು ಲಸಿಕೆ ತೆಗೆದುಕೊಳ್ಳಬಹುದು ಎಂದು ಹೇಳಿದರು. ಎಷ್ಟು ಜನಕ್ಕೆ ಕೊಟ್ಟಿದ್ದೀರಿ. ಕೊರೊನಾ ತಪಾಸಣೆ ಮಾಡಿಸಿದರೆ ಎರಡು ದಿನವಾದರೂ ಫಲಿತಾಂಶ ಬರುವುದಿಲ್ಲ. ವಾರವಾದರೂ ಬಿಯು ಸಂಖ್ಯೆ ಸಿಗುವುದಿಲ್ಲ ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ